
ಬೆಂಗಳೂರು (ಡಿ.03): ಹನುಮ ಜಯಂತಿ ಗಲಾಟೆ ವೇಳೇ ಬ್ಯಾರಿಕೇಡ್ ಮೇಲೆ ವಾಹನ ಚಲಾಯಿಸಿದ ಪ್ರತಾಪ್ ಸಿಂಹ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ತಾವೇ ವಾಹನ ಓಡಿಸಿ ಬ್ಯಾರಿಕೇಡ್ ಮೇಲೆ ವಾಹನ ಚಲಾಯಿಸಿದ್ದು ಎಷ್ಟು ಸರಿ? ಸಂಸದರಾಗಿ ಹೀಗೆ ಮಾಡಿದ್ದು ಸರಿನಾ ? ವಾಟ್ ಅಬೌಟ್ ಲಾ ? ಇವರೇ ಹೀಗೆ ಮಾಡಿದರೆ ಜನರು ಇವರನ್ನ ಫಾಲೋ ಮಾಡಿದ್ರೆ ಹೇಗೆ ? ಸಾಮರಸ್ಯ ಕಾಪಾಡಬೇಕಾದವರೇ ಹೀಗೆ ಮಾಡಿದರೆ ಹೇಗೆ? ಎಂದು ಸಿಎಂ ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇವರೊಬ್ಬರೇನಾ ಹನುಮ ಜಯಂತಿ ಮಾಡೋದು, ರಾಮನವಮಿ ಮಾಡೋದು ? ನಾವು ಮಾಡಲ್ವಾ ? ಚುನಾವಣೆ ಬಂತು ಅನ್ನೋ ಕಾರಣಕ್ಕೆ ಹೀಗೆ ಮಾಡುತ್ತಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದವರು. ಪ್ರತಾಪ್ ಸಿಂಹ ವಾಹನ ಓಡಿಸಿ ಬ್ಯಾರಿಕೇಡ್ ಹತ್ತಿಸಿದ್ದನ್ನ ಯಡಿಯೂರಪ್ಪ ಒಪ್ಪಿಕೊಳ್ತಾರಾ ಎಂದು ಬಿಎಸ್'ವೈ ಗೂ ಟಾಂಗ್ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.