ಆಧಾರ್ ಕಾರ್ಡ್‌ದಾರರೆ ಈ ಸುದ್ದಿ ನಿಮಗೆ ಪ್ರಮುಖ

Published : Jun 23, 2018, 09:03 AM ISTUpdated : Jun 23, 2018, 09:47 AM IST
ಆಧಾರ್ ಕಾರ್ಡ್‌ದಾರರೆ ಈ ಸುದ್ದಿ ನಿಮಗೆ ಪ್ರಮುಖ

ಸಾರಾಂಶ

ಅಪರಾಧ ಪ್ರಕರಣಗಳ ತನಿಖೆ ಸಂಬಂಧ ಪೊಲೀಸ್ ಅಧಿಕಾರಿಗಳೊಂದಿಗೆ ನಿಮ್ಮ ಆಧಾರ್ ಮಾಹಿತಿಯನ್ನು ಸಂಪೂರ್ಣವಾಗಿ ಹಂಚಿಕೊಳ್ಳಬೇಡಿ ಎಂದು ಯುಐಡಿಎಐ [ಯುನಿಕ್ ಐಡೆಂಟಿಫಿಕೇಶನ್ ಅಥಾರಟಿ ಆಫ್ ಇಂಡಿಯಾ]  ಹೇಳಿದೆ. ಯಾಕೆ ಹೀಗೆ ಹೇಳಿದೆ.. ವಿವರ ಇಲ್ಲಿದೆ.

ನವದೆಹಲಿ [ಜೂ. 23] ಅಪರಾಧ ಪ್ರಕರಣಗಳ ತನಿಖೆ ಸಂಬಂಧ ಪೊಲೀಸ್ ಅಧಿಕಾರಿಗಳೊಂದಿಗೆ ನಿಮ್ಮ ಆಧಾರ್ ಮಾಹಿತಿಯನ್ನು ಸಂಪೂರ್ಣವಾಗಿ ಹಂಚಿಕೊಳ್ಳಬೇಡಿ ಎಂದು ಯುಐಡಿಎಐ[ಯುನಿಕ್ ಐಡೆಂಟಿಫಿಕೇಶನ್ ಅಥಾರಟಿ ಆಫ್ ಇಂಡಿಯಾ]  ಹೇಳಿದೆ.

ಮೊದಲ ಬಾರಿ ಅಪರಾಧ ಕೃತ್ಯವೆಸಗಿದವರ ಹಾಗೂ ಅಪರಿಚಿತ ಮೃತದೇಹಗಳ ಗುರುತು ಪತ್ತೆಗಾಗಿ ಆಧಾರ್‌ ದಾಖಲೆಗಳ ಸೀಮಿತ ಬಳಕೆಗೆ ಅನುಮತಿ ನೀಡಬೇಕೆಂದು ರಾಷ್ಟ್ರೀಯ ಅಪರಾಧ ದಾಖಳೆಗಳ ಬ್ಯೂರೋ (ಎನ್‌ಸಿಆರ್‌ಬಿ) ನಿರ್ದೇಶಕ ಈಶ್ ಕುಮಾರ್‌ ಸರಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಇದಾದ ಮೇಲೆ ಯುಐಡಿಎಐ ಈ ರೀತಿ ಪ್ರತಿಕ್ರಿಯೆ ನೀಡಿದೆ.


ಈ ಪ್ರಮುಖ ದಾಖಲಾತಿಗೆ ಪಾನ್ ಕಾರ್ಡ್ ಲಿಂಕ್ ಮಾಡಿಲ್ಲವೇ..? ಲಾಸ್ಟ್ ಡೇಟ್ ಯಾವಾಗ..?

 29 ರ ಪ್ರಕಾರ ಆಧಾರ್ ಮೂಲಕ ಕಲೆಹಾಕಿರುವ ಬಯೋಮೆಟ್ರಿಕ್ ಡಾಟಾವನ್ನು ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ಅಂದರೆ ಆಧಾರ್ ದೃಢೀಕರಣಕ್ಕೆ ಮಾತ್ರ ಬಳಸಿಕೊಳ್ಳಬೇಕು ಎಂಬ ನಿಯಮವಿದೆ.

ಆಧಾರ್‌ನ ಬಯೋಮೆಟ್ರಿಕ್ ಮಾಹಿತಿ ಲಭ್ಯವಾದರೆ ಅಪಾರಾಧ ಮತ್ತು ಶವಗಳ ಪತ್ತೆ ಸುಲಭವಾಗುತ್ತದೆ ಎಂಬ ವಿನಂತಿಯನ್ನು ಇಡಲಾಗಿತ್ತು. ಆದರೆ ಆಧಾರ್ ಸಂವಿಧಾನಿಕ ಮಾನ್ಯತೆ ಕುರಿತಾಗಿಯೇ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿರುವ ಹೊತ್ತಿನಲ್ಲಿ  ಇಂಥದ್ದೊಂದು ಸಂದೇಶವನ್ನು ಯುಐಡಿಎಐ ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Bengaluru: ಲವ್ ಮಾಡು, ಇಲ್ಲಾಂದ್ರೆ ಸಾಯ್ತೀನಿ: ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಕಿರುಕುಳ ಕೊಟ್ಟ ಖತರ್ನಾಕ್ ಲೇಡಿ
ಸರ್ಕಾರಿ ನೇಮಕಾತಿ ವಿಳಂಬ: ಮನನೊಂದು ಧಾರವಾಡ ರೈಲು ಹಳಿಗೆ ಸಿಲುಕಿ ಯುವತಿ ದಾರುಣ ಸಾವು!