ಯೋಧರ ಸಾಹಸಕ್ಕೆ ಪ್ರಧಾನಿ, ರಾಜನಾಥ್‌ ಮೆಚ್ಚುಗೆ

Published : Jun 07, 2018, 09:29 AM IST
ಯೋಧರ ಸಾಹಸಕ್ಕೆ ಪ್ರಧಾನಿ, ರಾಜನಾಥ್‌ ಮೆಚ್ಚುಗೆ

ಸಾರಾಂಶ

ಜಗತ್ತಿನ ಅತ್ಯಂತ ಎತ್ತರದ ಪರ್ವತ ಎನಿಸಿಕೊಂಡಿರುವ ಮೌಂಟ್‌ ಎವರೆಸ್ಟ್‌ ಅನ್ನು ಏರುವುದೇ ಒಂದು ಸಾಹಸ. ಅಂಥದ್ದರಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಯೋಧರ ತಂಡವೊಂದು ಎರಡು ದಿನದಲ್ಲಿ ನಾಲ್ಕು ಬಾರಿ ಮೌಂಟ್‌ ಎವರೆಸ್ಟ್‌ ಏರಿದ್ದೂ ಅಲ್ಲದೆ, ಶಿಖರದಲ್ಲಿ ಬಿದ್ದಿದ್ದ ಬರೋಬ್ಬರಿ 700 ಕೆ.ಜಿ. ಕಸವನ್ನು ಕೆಳಕ್ಕೆ ತಂದು ಹೊಸ ದಾಖಲೆ ಬರೆದಿದೆ.

ನವದೆಹಲಿ: ಜಗತ್ತಿನ ಅತ್ಯಂತ ಎತ್ತರದ ಪರ್ವತ ಎನಿಸಿಕೊಂಡಿರುವ ಮೌಂಟ್‌ ಎವರೆಸ್ಟ್‌ ಅನ್ನು ಏರುವುದೇ ಒಂದು ಸಾಹಸ. ಅಂಥದ್ದರಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಯೋಧರ ತಂಡವೊಂದು ಎರಡು ದಿನದಲ್ಲಿ ನಾಲ್ಕು ಬಾರಿ ಮೌಂಟ್‌ ಎವರೆಸ್ಟ್‌ ಏರಿದ್ದೂ ಅಲ್ಲದೆ, ಶಿಖರದಲ್ಲಿ ಬಿದ್ದಿದ್ದ ಬರೋಬ್ಬರಿ 700 ಕೆ.ಜಿ. ಕಸವನ್ನು ಕೆಳಕ್ಕೆ ತಂದು ಹೊಸ ದಾಖಲೆ ಬರೆದಿದೆ. ಬಿಎಸ್‌ಎಫ್‌ನ ಸಹಾಯಕ ಕಮಾಂಡೆಂಟ್‌ ಲವರಾಜ್‌ ಸಿಂಗ್‌ ಧರ್ಮಶಕ್ತು ಅವರ ನೇತೃತ್ವದ ತಂಡದ ಸಾಧನೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ರಾಜನಾಥ ಸಿಂಗ್‌ ಅವರ ಮೆಚ್ಚುಗೆಗೂ ಪಾತ್ರವಾಗಿದೆ.

7 ಶೆರ್ಪಾ (ಹಿಮಾಲಯ ಹತ್ತಲು ನೆರವಾಗುವವರು)ಗಳ ಸಹಾಯದೊಂದಿಗೆ 15 ಮಂದಿಯ ಬಿಎಸ್‌ಎಫ್‌ ತಂಡ ಮೇ 20 ಹಾಗೂ 21ರಂದು ನಾಲ್ಕು ಬಾರಿ ಬೇಸ್‌ಕ್ಯಾಂಪ್‌ನಿಂದ ಮೌಂಟ್‌ ಎವರೆಸ್ಟ್‌ ಏರಿದೆ. ಆ ಶಿಖರದಲ್ಲಿ ಎಲ್ಲೆಂದರಲ್ಲಿ ಬಿದ್ದಿದ್ದ ಕಸವನ್ನು ಕೆಳಕ್ಕೆ ತರುವಲ್ಲಿ ಸಫಲವಾಗಿದೆ.

‘ಹರಿದುಹೋದ ಟೆಂಟ್‌ಗಳು, ಆಮ್ಲಜನಕ ಸಿಲಿಂಡರ್‌ಗಳಂತಹ ಕಸವನ್ನು ಸಂಗ್ರಹಿಸಿದ್ದೇವೆ. 1972ರಷ್ಟುಹಳತಾದ ಸಿಲಿಂಡರ್‌ ಕೂಡ ನಮಗೆ ಲಭಿಸಿದೆ. ಸ್ವಚ್ಛತಾ ಅಭಿಯಾನದ ಅಂಗವಾಗಿ ಎವರೆಸ್ಟ್‌ ಅನ್ನು ಸ್ವಚ್ಛಗೊಳಿಸಲು ಅಲ್ಲಿಗೆ ಹೋಗಿದ್ದೆವು. ಬೇಸ್‌ ಕ್ಯಾಂಪ್‌ನಲ್ಲಿ ಕಸ ವಿಂಗಡಣೆ ಮಾಡಿದ್ದೇವೆ. ಕಸವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಿದ್ದೇವೆ’ ಎಂದು ಲವರಾಜ್‌ ಸಿಂಗ್‌ ಅವರು ಸುದ್ದಿವಾಹಿನಿಯೊಂದಕ್ಕೆ ತಿಳಿಸಿದ್ದಾರೆ.

ಬಿಎಸ್‌ಎಫ್‌ನ ತಂಡ ಎರಡು ಗುಂಪುಗಳಾಗಿ ವಿಂಗಡಣೆಯಾಗಿ ಎವರೆಸ್ಟ್‌ ಏರಿದೆ. ಈ ಎರಡೂ ತಂಡಗಳು ತಲಾ 350 ಕೆ.ಜಿ. ಕಸವನ್ನು ಮೇಲಿನಿಂದ ಕೆಳಕ್ಕೆ ತಂದಿವೆ. ಲವರಾಜ್‌ ಅವರು ಮೌಂಟ್‌ ಎವರೆಸ್ಟ್‌ ಏರುತ್ತಿರುವುದು ಇದು ಏಳನೇ ಬಾರಿ ಎಂಬುದು ಗಮನಾರ್ಹ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!
ಗ್ರಾಹಕರಿಗೆ ಬಂಪರ್‌ ಪ್ಲ್ಯಾನ್‌ ಘೋಷಿಸಿದ Vi: 61 ರೂಪಾಯಿಯ ಮೊಬೈಲ್‌ ರಿಚಾರ್ಜ್‌ಗೆ 25 ಸಾವಿರದ ಬೆನಿಫಿಟ್‌!