ಪ್ರಣಬ್ ಮುಖರ್ಜಿಗೆ ಕಾಂಗ್ರೆಸಿಗರ ವಿರೋಧ

Published : Jun 07, 2018, 09:10 AM IST
ಪ್ರಣಬ್ ಮುಖರ್ಜಿಗೆ ಕಾಂಗ್ರೆಸಿಗರ ವಿರೋಧ

ಸಾರಾಂಶ

 ಕಾಂಗ್ರೆಸ್‌ನ ಹಿರಿಯ ನಾಯಕ, ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ,  ಇಂದು ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್‌ನ ಹೊಸ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. 

ನಾಗಪುರ: ಕಾಂಗ್ರೆಸ್‌ನ ಹಿರಿಯ ನಾಯಕ, ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ,  ಇಂದು ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್‌ನ ಹೊಸ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಆರ್‌ಎಸ್‌ಎಸ್‌ನ ಕಾರ್ಯಕ್ರಮದಲ್ಲಿ ಸಮಾಜದ ಗಣ್ಯರು ಭಾಗವಹಿಸುವುದು ಹೊಸದಲ್ಲವಾದರೂ, ಕಾಂಗ್ರೆಸ್‌ ಬಹುವಾಗಿ ವಿರೋಧಿಸುವ ಸಂಘಟನೆಯ ಕಾರ್ಯಕ್ರಮವೊಂದರಲ್ಲಿ ಅವರದ್ದೇ ಪಕ್ಷದ ಅತ್ಯುನ್ನತ ನಾಯಕರ ಪೈಕಿ ಒಬ್ಬರಾದ ಪ್ರಣಬ್‌ ಭಾಗವಹಿಸುತ್ತಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಹೀಗಾಗಿಯೇ ಗುರುವಾರ ಅವರು ತಮ್ಮ ಭಾಷಣದಲ್ಲಿ ಯಾವ್ಯಾವ ಸಂಗತಿಗಳನ್ನು ಉಲ್ಲೇಖಿಸಿ ಮಾತನಾಡಬಹುದು, ಅದರಲ್ಲಿ ರಾಜಕೀಯ ಇರಲಿದೆಯೇ? ಇಲ್ಲವೇ ಎಂಬೆಲ್ಲಾ ಕುತೂಹಲ ಇಡೀ ದೇಶದ ಜನರಲ್ಲಿ ಕಾಡಿದೆ. ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿಟ್ಟಿನಲ್ಲಿ ಪ್ರಣಬ್‌ ಅವರು ಬುಧವಾರವೇ ನಾಗಪುರಕ್ಕೆ ಆಗಮಿಸಿದ್ದಾರೆ.

ಈ ನಡುವೆ ಕಾರ್ಯಕ್ರಮದಲ್ಲಿ ಪ್ರಣಬ್‌ ಭಾಗಿಯಾಗುವುದನ್ನು ವಿರೋಧಿಸುತ್ತಿರುವ ಕಾಂಗ್ರೆಸ್‌ ನಾಯಕರ ಬಗ್ಗೆ ಆರ್‌ಎಸ್‌ಎಸ್‌ ನಾಯಕ ಮನಮೋಹನ್‌ ವೈದ್ಯ ತೀವ್ರವಾಗಿ ಟೀಕಿಸಿದ್ದಾರೆ. ಅತ್ಯಂತ ಹಿರಿಯ ನಾಯಕರೊಬ್ಬರ ಬಗ್ಗೆ ಅವರದ್ದೇ ಪಕ್ಷದ ಕಿರಿಯ ನಾಯಕರು ಪ್ರಶ್ನೆ ಮಾಡುತ್ತಿರುವುದು ಅಸಹಿಷ್ಣುತೆ. ತಮ್ಮದೇ ನಾಯಕನ ವಾಕ್‌ ಸ್ವಾತಂತ್ರ್ಯವನ್ನು ಕಾಂಗ್ರೆಸ್‌ ಪ್ರಶ್ನಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಏನೀ ಕಾರ್ಯಕ್ರಮ:

ಆರೆಸ್ಸೆಸ್‌ಗೆ ಹೊಸದಾಗಿ ಸೇರಿಕೊಂಡವರಿಗೆ ‘ಸಂಘ ಶಿಕ್ಷಾ ವರ್ಗ’ ಎಂಬ 25 ದಿನಗಳ ತರಬೇತಿ ಶಿಬಿರವನ್ನು ನಾಗಪುರದ ಕೇಂದ್ರ ಕಚೇರಿಯಲ್ಲಿ ಏರ್ಪಡಿಸಲಾಗಿದೆ. ಇದರ ತೃತೀಯ ವರ್ಷದ ಸಮಾರೋಪ ಇಂದು ನಡೆಯಲಿದೆ. ಈ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಬರಬೇಕು ಎಂದು ಸಂಘವು ಪ್ರಣಬ್‌ ಅವರಿಗೆ ಕೇಳಿಕೊಂಡಿತ್ತು. ಇದಕ್ಕೆ ಪ್ರಣಬ್‌ ಒಪ್ಪಿದ್ದರು. ಆದರೆ ಪ್ರಣಬ್‌ ನಡೆಯನ್ನು ಅನೇಕ ಕಾಂಗ್ರೆಸ್ಸಿಗರು ವಿರೋಧಿಸಿ, ಪಾಲ್ಗೊಳ್ಳದಂತೆ ಪತ್ರ ಬರೆದಿದ್ದಾರೆ. ಆದಾಗ್ಯೂ ‘ನಾನು ಈ ಎಲ್ಲ ಪತ್ರಗಳಿಗೆ ನಾಗಪುರದಲ್ಲೇ ಉತ್ತರ ಕೊಡುವೆ’ ಎನ್ನುವ ಮೂಲಕ ಸಮಾರಂಭದಲ್ಲಿ ಪಾಲ್ಗೊಳ್ಳುವುದನ್ನು ಅವರು ದೃಢಪಡಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!
ಗ್ರಾಹಕರಿಗೆ ಬಂಪರ್‌ ಪ್ಲ್ಯಾನ್‌ ಘೋಷಿಸಿದ Vi: 61 ರೂಪಾಯಿಯ ಮೊಬೈಲ್‌ ರಿಚಾರ್ಜ್‌ಗೆ 25 ಸಾವಿರದ ಬೆನಿಫಿಟ್‌!