
ಕಾರವಾರ(ಏ. 03): ಬರೋಬ್ಬರಿ 60 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಸೇತುವೆ.. ಹೊನ್ನಾವರ ಬಳಿ ಶರಾವತಿ ನದಿಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ 1.2 ಕಿ.ಮೀ ಉದ್ದದ ಸೇತುವೆ ಕಾಮಗಾರಿಯನ್ನು ಮೊನ್ನೆ ಮೊನ್ನೆಯಷ್ಟೇ ಮುಗಿಸಲಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಉದ್ಘಾಟನೆ ಆಗಬೇಕು. ಅಷ್ಟರಲ್ಲೇ ಇದರ ಬಂಡವಾಳ ಬಯಲಾಗಿದೆ.
ಸೇತುವೆಯ ಗರ್ಡರ್ ಬೇರಿಂಗ್'ನಲ್ಲೇ ಲೋಪ:
ಈ ರಿಪೋರ್ಟ್ ಕೊಟ್ಟಿದ್ದು ಬೇರೆ ಯಾರೂ ಅಲ್ಲಾ, ಸ್ವತಃ ಕಾಮಗಾರಿ ಗುತ್ತಿಗೆ ಪಡೆದಿದ್ದ ಕಂಪನಿಯೇ ಪರಿಶೀಲನೆಗೆಂದು ನೇಮಿಸಿದ್ದ ತಂತ್ರಜ್ಞರು. ಸೇತುವೆಯ ಆರಂಭದ ಕಂಬದ ಮೇಲೆ ಅಳವಡಿಸಿರುವ ಗರ್ಡರ್ ಬೇರಿಂಗ್'ನಲ್ಲಿ ಲೋಪ ಕಂಡು ಬಂದಿದೆ. ಸೇತುವೆ ಸ್ಪಾನ್ ನಂ 21 G2, G3 ಬೇರಿಂಗ್ ನ P1, P2 ಒಳಬಾಗಿದೆ. ಇದ್ರಿಂದ ಯಾವುದೇ ಕ್ಷಣದಲ್ಲಿ ಬೇಕಾದರೂ ಸೇತುವೆ ಮುರಿದು ಬೀಳಬಹುದು ಎಂದು ವರದಿಯೊಂದು ಹೇಳ್ತಿದೆ.
ಕನ್ಸಲ್ಟಂಟ್ ಕಂಪನಿಯು ಮಾರ್ಚ್ 8 ರಂದೇ ಗುತ್ತಿಗೆದಾರ ಕಂಪನಿಗೆ ನೂನ್ಯತೆ ಬಗ್ಗೆ ರಿಪೋರ್ಟ್ ನೀಡಿ, ಬೇರಿಂಗ್ ಬದಲಾಯಿಸುವಂತೆ ಸಲಹೆ ನೀಡಿದೆ. ಆದ್ರೆ, ಕಂಪನಿ ಕ್ಯಾರೇ ಎಂದಿಲ್ಲ.. ಬದಲಾಗಿ ಸಾರ್ವಜನಿಕ ಬಳಕೆಗೆ ಅನುವು ಮಾಡಿಕೊಟ್ಟಿದೆ.
ಅಷ್ಟಕ್ಕೂ ಇದು ರಾಷ್ಟ್ರೀಯ ಹೆದ್ದಾರಿಯಲ್ಲಿನ ಸೇತುವೆ. ಭಾರೀ ವಾಹನಗಳ ಓಡಾಟ ಹೆಚ್ಚಾಗೇ ಇರುತ್ತೆ. ಅಂಥದ್ರಲ್ಲಿ ಈಗಲೇ ಕುಸಿಯುವ ಮುನ್ಸೂಚನೆ ಸಿಕ್ಕ ಸೇತುವೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಮುಂದಾಗುವ ಅನಾಹುತಕ್ಕೆ ಬ್ರೇಕ್ ಹಾಕಬೇಕಿದೆ.
- ಕಡತೋಕಾ ಮಂಜು, ಸುವರ್ಣ ನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.