ಬೋಯಿಂಗ್ ಚಕ್ರದಡಿ ಸಿಲುಕಿ ಭಾರತೀಯ ಮೂಲದ ತಂತ್ರಜ್ಞ ಸಾವು!

Published : May 08, 2019, 05:12 PM IST
ಬೋಯಿಂಗ್ ಚಕ್ರದಡಿ ಸಿಲುಕಿ ಭಾರತೀಯ ಮೂಲದ ತಂತ್ರಜ್ಞ ಸಾವು!

ಸಾರಾಂಶ

ಬೋಯಿಂಗ್ ವಿಮಾನದ ಚಕ್ರದಡಿ ಸಿಲುಕಿದ ತಂತ್ರಜ್ಞ| ಕುವೈತ್ ವಿಮಾನ ನಿಲ್ದಾಣದಲ್ಲಿ ಭಾರತೀಯ ಮೂಲದ ತಂತ್ರಜ್ಞ ಸಾವು| ಬೋಯಿಂಗ್ 777 ವಿಮಾನದ ಚಕ್ರದಡಿ ಸಿಲುಕಿ ಕೇರಳ ಮೂಲದ ಆನಂದ್ ರಾಮಚಂದ್ರನ್ ಸಾವು|

ಸಾಂದರ್ಭಿಕ ಚಿತ್ರ

ಕುವೈತ್(ಮೇ.08): ಬೋಯಿಂಗ್ ವಿಮಾನವನ್ನು ಪರಿಶೀಲಿಸುತ್ತಿದ್ದ ಭಾರತೀಯ ಮೂಲದ ತಂತ್ರಜ್ಞ, ಅದೇ ವಿಮಾನದ ಚಕ್ರದಡಿ ಸಿಕ್ಕು ಸಾವನ್ನಪ್ಪಿರುವ ದಾರುಣ ಘಟನೆ ಕುವೈತ್ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಕುವೈತ್ ಏರ್’ವೇಸ್’ನ ಬೋಯಿಂಗ್ 777 ವಿಮಾನವನ್ನು ನಿಲ್ದಾಣದಿಂದ ಟರ್ಮಿನಲ್ ಗೆ ಕೊಂಡೊಯ್ಯುತ್ತಿದ್ದ ವೇಳೆ, ಟೋಯಿಂಹಗ್ ಮಶಿನ್ ಮುರಿದು ಬಿದ್ದಿದೆ. ಈ ವೇಳೆ ಸ್ಥಳದಲ್ಲಿ ಕರ್ತವ್ಯನಿರತರಾಗಿದ್ದ ಕೇರಳ ಮೂಲದ ಆನಂದ್ ರಾಮಚಂದ್ರನ್ ವಿಮಾನದ ಚಕ್ರದಡಿ ಸಿಲುಕಿ ಸಾವನ್ನಪ್ಪಿದ್ದಾರೆ.

ಈ ಕುರಿತು ತನಿಖೆಗೆ ಆದೇಶಿಸಿರುವ ಕುವೈತ್ ವಿಮಾನ ನಿಲ್ದಾಣ ಪ್ರಾಧಿಕಾರ, ಆನಂದ್ ರಾಮಚಂದ್ರನ್  ಅವರ ಮೃತದೇಹವನ್ನು ಕೇರಳಕ್ಕೆ ರವಾನಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

'ಟ್ರಂಪ್ ಮಾತ್ರವಲ್ಲ, ಕ್ಲಿಂಟನ್, ಬಿಲ್ ಗೇಟ್ಸ್ ಕೂಡ..' ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಫೋಟೋಗಳು ರಿಲೀಸ್
ಭದ್ರಾವತಿ: ಜೈ ಭೀಮ್ ನಗರದಲ್ಲಿ ಪ್ರೇಮಿಗಳ ವಿಚಾರಕ್ಕೆ ರಕ್ತಪಾತ: ಇಬ್ಬರು ದುರ್ಮರಣ!