
ಹೈದರಾಬಾದ್: ಪದ್ಮಾವತ್ ಚಿತ್ರ ಬಿಡುಗಡೆಗೆ ಸಂಬಂಧಿಸಿ ನಡೆಯುತ್ತಿರುವ ಹಿಂಸಾಚಾರಕ್ಕೆ ಪ್ರತಿಕ್ರಿಯಿಸಿರುವ ಎಐಎಂಐಎಂ ಮುಖಂಡ ಅಸಾದುದ್ದೀನ್ ಒವೈಸಿ, ಬಿಜೆಪಿಯು ‘ಪಕೋಡಾ’ ರಾಜಕೀಯ ಮಾಡುತ್ತಿದೆಯೆಂದು ವ್ಯಂಗ್ಯವಾಡಿದ್ದಾರೆ.
ಪದ್ಮಾವತಿ ಚಿತ್ರವನ್ನು ಪ್ರತಿಭಟಿಸುತ್ತಿರುವವರನ್ನು ಕೆಂಪು ಹಾಸಿ ಸ್ವಾಗತಿಸಿದ್ದು ಖುದ್ದು ಪ್ರಧಾನಿ ಮೋದಿ ಹಾಗೂ ಬಿಜೆಪಿ. ಈಗ ಆ ಮಂದಿ ಕಾನೂನನ್ನು ಮೀರಿ ಬೆಳೆದಿದ್ದಾರೆ, ಮಕ್ಕಳ ಮೇಲೆ ಹಲ್ಲೆ ನಡೆಸಿ ಆಸ್ತಿ-ಪಾಸ್ತಿಗಳಿಗೆ ಬೆಂಕಿಯಿಡುತ್ತಿದ್ದಾರೆ. ಇದೆಲ್ಲವೂ ಬಿಜೆಪಿಯ ‘ಜಾಣ’ ಬೆಂಬಲದಿಂದ ನಡೆಯುತ್ತಿದೆ. ಬಿಜೆಪಿಯದ್ದು ಇದೊಂದು ಪಕೋಡಾ ರಾಜಕೀಯ, ಎಂದು ಒವೈಸಿ ಕಿಡಿಕಾರಿದ್ದಾರೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಪ್ರಧಾನಿ ಮೋದಿ, ಪಕೋಡಾ ಮಾರಿ ರೂ.200 ಸಂಪಾದನೆ ಮಾಡುವುದು ಕೂಡಾ ಉದ್ಯೋಗವೇ ಎಂದಿದ್ದರು. ಆ ಬಳಿಕ ಪ್ರತಿಪಕ್ಷಗಳು ಅದನ್ನೇ ಮೋದಿ ವಿರುದ್ಧ ಅಸ್ತ್ರವಾಗಿ ಮೋದಿ ಬಳಸುತ್ತಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.