ರಾಮ ಮತ್ತು ಅಲ್ಲಾ ನಡುವಿನ ಚುನಾವಣೆ ಎಂದ ಸುನೀಲ್ ಕುಮಾರ್'ಗೆ ಕನಿಷ್ಟ ಜ್ಞಾನವಿಲ್ಲ: ರಮಾನಾಥ್ ರೈ

Published : Jan 25, 2018, 04:36 PM ISTUpdated : Apr 11, 2018, 01:00 PM IST
ರಾಮ ಮತ್ತು ಅಲ್ಲಾ ನಡುವಿನ ಚುನಾವಣೆ ಎಂದ ಸುನೀಲ್ ಕುಮಾರ್'ಗೆ ಕನಿಷ್ಟ ಜ್ಞಾನವಿಲ್ಲ: ರಮಾನಾಥ್ ರೈ

ಸಾರಾಂಶ

ಕಾರ್ಕಳ ಕ್ಷೇತ್ರದ ಸುನೀಲ್ ಕುಮಾರ್‍ ನನ್ನ ಕ್ಷೇತ್ರ ಬಂಟ್ವಾಳದಲ್ಲಿ ವೃಥಾ ಆರೋಪ  ಮಾಡಿದ್ದಾರೆ. ಬಂಟ್ವಾಳ ಕ್ಷೇತ್ರದ ಚುನಾವಣೆ ರಾಜೇಶ್ ನಾಯಕ್ ರಮಾನಾಥ್ ರೈ ನಡುವೆ ಅಲ್ಲ ರಾಮ ಮತ್ತು ಅಲ್ಲಾ ನಡುವೆ ಚುನಾವಣೆ ಎಂದು ಕನಿಷ್ಟ ಜ್ಙಾನ ಇಲ್ಲದ ಸುನಿಲ್ ಕುಮಾರ್ ಈ ಹೇಳಿಕೆ ನೀಡಿದ್ದಾರೆ ಎಂದು ರಮಾನಾಥ್ ರೈ ಪ್ರತಿಕ್ರಿಯಿಸಿದ್ದಾರೆ.

ಉಡುಪಿ (ಜ.25):  ಕಾರ್ಕಳ ಕ್ಷೇತ್ರದ ಸುನೀಲ್ ಕುಮಾರ್‍ ನನ್ನ ಕ್ಷೇತ್ರ ಬಂಟ್ವಾಳದಲ್ಲಿ ವೃಥಾ ಆರೋಪ  ಮಾಡಿದ್ದಾರೆ. ಬಂಟ್ವಾಳ ಕ್ಷೇತ್ರದ ಚುನಾವಣೆ ರಾಜೇಶ್ ನಾಯಕ್ ರಮಾನಾಥ್ ರೈ ನಡುವೆ ಅಲ್ಲ ರಾಮ ಮತ್ತು ಅಲ್ಲಾ ನಡುವೆ ಚುನಾವಣೆ ಎಂದು ಕನಿಷ್ಟ ಜ್ಙಾನ ಇಲ್ಲದ ಸುನಿಲ್ ಕುಮಾರ್ ಈ ಹೇಳಿಕೆ ನೀಡಿದ್ದಾರೆ ಎಂದು ರಮಾನಾಥ್ ರೈ ಪ್ರತಿಕ್ರಿಯಿಸಿದ್ದಾರೆ.

‍ದೇವರು ಒಬ್ಬನೇ ಎಂದು ನಾನು ತಿಳಿದುಕೊಂಡಿದ್ದೇನೆ.  ದೇವರ ಮೇಲೆ ನಂಬಿಕೆ ಗೌರವ ಇದ್ದವರು ಸಣ್ಣ ಮಾತು ಆಡಬಾರದು. ಬಿಜೆಪಿ ಈ ರೀತಿಯ ಪ್ರಚೋದನಾಕಾರಿ ಹೇಳಿಕೆಗೆ ಅವಕಾಶ ನೀಡಿರುವುದು ಸಮಾಜಕ್ಕೆ ಅವಮಾನ.  ಮತೀಯ ಸೂಕ್ಷ್ಮ ಪ್ರದೇಶದಲ್ಲಿ ಪ್ರಚೋದನೆ ನೀಡುವ ಹೇಳಿಕೆ ಎಷ್ಟು ಸರಿ? ಎಂದು ರಮಾನಾಥ್ ರೈ ಪ್ರಶ್ನಿಸಿದ್ದಾರೆ.

ಸುನಿಲ್ ಕುಮಾರ್‍ ಮನಸಲ್ಲಿ ಮತೀಯ ವಿಚಾರವೇ ತುಂಬಿದೆ.  ಹುಲಿಯೋಜನೆ ಹೆಸರಲ್ಲಿ ಭಯ ಹುಟ್ಟಿಸಿ ಸುಳ್ಳು ಹೇಳಿ ಶಾಸಕರಾದವರು.  ಜೋಳಿಗೆ ಹಿಡಿದು ಬಂದವರು ಎಷ್ಟು ಸ್ವತ್ತು ಸಂಪತ್ತು ಮಾಡಿದ್ದಾರೆಂದು ನಂಗೆ ಗೊತ್ತು.  ನನ್ನನ್ನು ಮತೀಯವಾದಿ, ಜಾತಿವಾದಿ ಎಂದು ಯಾರು ಕರೆದಿಲ್ಲ.  ಧರ್ಮದ ಹೆಸರಲ್ಲಿ,  ದೇವರ ಹೆಸರಲ್ಲಿ ರಾಜಕೀಯ ಮಾಡುವ ಸುನಿಲ್ ಕುಮಾರ್ ‍ಚುನಾವಣೆ ಬಂದಾಗ ನನ್ನ ಕ್ಷೇತ್ರದಲ್ಲಿ ಮತೀಯ ವಿಚಾರ ಎತ್ತಿರುವುದು ಸರಿಯಲ್ಲ.  ಸುನೀಲ್ ಕುಮಾರ್‍ ನನ್ನ ಜಾತ್ಯಾತೀತ ನಿಲುವು  ಪ್ರಶ್ನಿಸುತ್ತಿದ್ದಾರೆ. ನನ್ನನ್ನು ಸುನಿಲ್ ಕುಮಾರ್‍ ಏನೂ ಮಾಡಲು ಆಗಲ್ಲ ಎಂದು  ಕಾರ್ಕಳದಲ್ಲಿ ಸಚಿವ ರಮಾನಾಥ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಎಂ ರಾಂಗ್‌ ಫ್ಲೈಟ್‌ ಹತ್ತಿದ್ದಾರೆ: ಸಿದ್ಧರಾಮಯ್ಯ ವಿರುದ್ಧ ಆರ್‌.ಅಶೋಕ್‌ ಗರಂ!
ನನ್ನ-ಸಿಎಂ ಸಿದ್ದರಾಮಯ್ಯ ನಡುವೆ ಒಪ್ಪಂದವಾಗಿದೆ: ಡಿ.ಕೆ.ಶಿವಕುಮಾರ್ ಹೇಳಿಕೆ ಹಾಟ್ ಟಾಪಿಕ್!