ಶಾಸಕ ಸಿ.ಟಿ.ರವಿ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಪಾಲ್ಗೊಂಡಿದ್ದು, ಚಿಕ್ಕಮಗಳೂರಿನಲ್ಲಿ ಆರಂಭವಾದ ದತ್ತಮಾಲೆ ಹಿನ್ನೆಲೆ ಬೆಳಗಾವಿಯಲ್ಲೇ ಮಾಲೆ ಧರಿಸಿದ್ದಾರೆ.
ಬೆಳಗಾವಿ : ಚಿಕ್ಕಮಗಳೂರಿನಲ್ಲಿ ದತ್ತಮಾಲಾ ಅಭಿಯಾನ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಶಾಸಕ ಸಿ.ಟಿ.ರವಿ ಅವರು ವಿಧಾನಮಂಡಲ ಅಧಿವೇಶನ ನಡೆಯುತ್ತಿರುವ ಬೆಳಗಾವಿ ನಗರದಲ್ಲೇ ದತ್ತಮಾಲೆ ಧರಿಸಿದ್ದಾರೆ.
ನಗರದ ಮಹಾವೀರ ಭವನದ ಹತ್ತಿರ ಇರುವ ದತ್ತ ಮಂದಿರದಲ್ಲಿ ದತ್ತಾತ್ರೇಯ ದೇವರಿಗೆ ಪೂಜೆ ಸಲ್ಲಿಸಿ ಅವರು ದತ್ತಮಾಲೆ ಧರಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿವರ್ಷದಂತೆ ಚಿಕ್ಕಮಗಳೂರಿನಲ್ಲೇ ನಾನು ದತ್ತಮಾಲೆ ಧಾರಣೆ ಮಾಡಬೇಕಿತ್ತು. ಆದರೆ ಅಧಿವೇಶನದಲ್ಲಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿಯೇ ಧರಿಸುತ್ತಿದ್ದೇನೆ ಎಂದರು.
ಕಳೆದ ಎರಡು ದಶಕಗಳಿಂದ ಸಹ್ರಸಾರು ಭಕ್ತರು ದತ್ತ ಮಾಲೆಧರಿಸುತ್ತಿದ್ದಾರೆ. ದತ್ತಪೀಠದಲ್ಲಿ ಡಿ.20ರಂದು ಸತಿ ಅನಸೂಯಾ ಜಯಂತಿ, 21 ರಂದು ಶೋಭಾಯಾತ್ರೆ, 22 ರಂದು ದತ್ತ ಜಯಂತಿ ನಡೆಯಲಿದೆ. ನ್ಯಾಯಾಲಯ ಹಾಗೂ ಜನತಾ ನ್ಯಾಯಾಲಯದಲ್ಲಿ ಈ ಜಾಗೃತಿಯ ಮೂಲಕ ದತ್ತ ಪೀಠ ಮುಕ್ತವಾಗಲಿದೆ. ಭಕ್ತಿ ಹಾಗೂ ಶಕ್ತಿ ಆಂದೋಲನದ ಮೂಲಕ ಹಿಂದೂತ್ವ ದ ಜಾಗೃತಿಗಾಗಿ ದತ್ತಪೀಠ ಮುಕ್ತ ಆಗಬೇಕು ಎನ್ನುವುದು ತಮ್ಮ ಸಂಕಲ್ಪವಾಗಿದೆ ಎಂದರು.
ಲೋಕಸಭಾ ಚುನಾವಣೆ ಬೆನ್ನಲ್ಲೇ ಏನಿದು ಸಿ.ಟಿ.ರವಿ ಈ ಹೇಳಿಕೆ? ಮಾರ್ಕೆಟ್ ಹೆಚ್ಚಿಸಿಕೊಳ್ಳಲು ನನ್ನ ಹೆಸರು ಬಳಕೆ: ಡಿಕೆಶಿ