ಅಂಬಿ ನಿಧನ: ಹಿಂದೂ ಸಮಾವೇಶ ಮುಂದೂಡಿಕೆ

By Web DeskFirst Published Nov 25, 2018, 7:55 AM IST
Highlights

ಮಂಡ್ಯದ ಗಂಡು ಅಂಬರೀಶ್ ಸಾವನ್ನಪ್ಪಿದ ಹಿನ್ನಲೆಯಲ್ಲಿ ಇಂದು ಬೆಂಗಳೂರಿನಲ್ಲಿ ನಡೆಯಬೇಕಿದ್ದ ಹಿಂದೂ ಸಮಾವೇಶ ಮುಂದೂಡಲಾಗಿದೆ.

ಬೆಂಗಳೂರು[ನ.25] ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ವಿಶ್ವ ಹಿಂದೂ ಪರಿಷತ್ ನಗರದಲ್ಲಿ ಆಯೋಜಿಸಿದ್ದ ಹಿಂದೂ ಸಮಾವೇಶ ಅಂಬಿ ನಿಧನದಿಂದ ಮುಂದೂಡಲ್ಪಟ್ಟಿದೆ.

ಬುಲ್ ಬುಲ್ ಮಾತಾಡಕಿಲ್ವಾ... ಎಂದಿದ್ದ ಜಲೀಲ ಇನ್ನು ನೆನಪು ಮಾತ್ರ

ಮಂಡ್ಯದ ಗಂಡು ಅಂಬರೀಶ್ ಸಾವನ್ನಪ್ಪಿದ ಹಿನ್ನಲೆಯಲ್ಲಿ ಇಂದು ಬೆಂಗಳೂರಿನಲ್ಲಿ ನಡೆಯಬೇಕಿದ್ದ ಹಿಂದೂ ಸಮಾವೇಶ ಮುಂದೂಡಲಾಗಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ವಿಎಚ್’ಪಿ ಇಂದು ಬೃಹತ್ ಜನಾಗ್ರಹ ಸಮಾವೇಶ ಹಮ್ಮಿಕೊಂಡಿತ್ತು. ಇದೀಗ ಡಿಸೆಂಬರ್ 02ರಂದು ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.

ಅಂಬಿ ನಿಧನ: 2 ದಿನ ಮಧ್ಯ ನಿಷೇಧ

ಇಂದು ಬೆಳಗ್ಗೆ 7 ಗಂಟೆಗೆ ಸಭೆ ಸೇರಿ ಚರ್ಚೆ ನಡೆಸಿದ ವಿ.ಎಚ್.ಪಿ ಮುಖಂಡರು ಹಾಗೂ ಆರ್’ಎಸ್’ಎಸ್ ನಾಯಕರು ಹಿಂದೂ ಸಮಾವೇಶ ಮುಂದೂಡಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. 

ಕೊನೆಯ ದಿನವನ್ನು ನೆಚ್ಚಿನ ಮನೆಯಲ್ಲಿ ಕಳೆಯಲಿಲ್ಲ ಅಂಬಿ

click me!