ಕೊನೆಯ ದಿನವನ್ನು ನೆಚ್ಚಿನ ಮನೆಯಲ್ಲಿ ಕಳೆಯಲಿಲ್ಲ ಅಂಬಿ!

Published : Nov 25, 2018, 07:39 AM IST
ಕೊನೆಯ ದಿನವನ್ನು ನೆಚ್ಚಿನ ಮನೆಯಲ್ಲಿ ಕಳೆಯಲಿಲ್ಲ ಅಂಬಿ!

ಸಾರಾಂಶ

ಇತ್ತೀ​ಚೆ​ಗಷ್ಟೇ ಅಂಬರೀಶ್ ಜೆಪಿ ನಗ​ರದ ನಿವಾ​ಸದ ದುರಸ್ತಿ ಕಾರ್ಯಕ್ಕೆ ಮುಂದಾ​ಗಿ​ದ್ದರು. ಹೀಗಾಗಿ ಜೆಪಿ ನಗ​ರದ ನಿವಾ​ಸದ ಬದ​ಲಾಗಿ ವಿಂಡ್ಸರ್‌ ಮ್ಯಾನರ್‌ ಬಳಿ ಇರುವ ತಮ್ಮ ಅಪಾ​ರ್ಟ್‌​ಮೆಂಟ್‌ಗೆ ವಾಸ​ಸ್ಥಾ​ನ​ವನ್ನು ಬದ​ಲಾ​ಯಿ​ಸಿ​ಕೊಂಡಿ​ದ್ದರು ಮತ್ತು ಶನಿ​ವಾರ ಈ ಅಪಾ​ರ್ಟ್‌ಮೆಂಟ್‌​ನಲ್ಲೇ ಹೃದಯಾ​ಘಾ​ತ​ದಿಂದ ಕುಸಿದು ಬಿದ್ದು ಅಸು ನೀಗಿದ್ದಾರೆ.

ಬೆಂಗ​ಳೂರು[ನ.25]: ಜೆಪಿ ನಗ​ರದ ನಿವಾ​ಸ ಅಂಬ​ರೀಶ್‌ ಅವರ ಫೆವ​ರೇಟ್‌ ತಾಣ. ದುರಂತ​ವೆಂದರೇ ಅಂಬ​ರೀಶ್‌ ಅವರು ತಮ್ಮ ಅಂತಿ​ಮ ಕ್ಷಣ​ಗಳನ್ನು ತಮ್ಮ ನೆಚ್ಚಿನ ಮನೆ​ಯಲ್ಲಿ ಕಳೆ​ಯಲು ಆಗ​ಲಿ​ಲ್ಲ.

ಏಕೆಂದರೆ, ಇತ್ತೀ​ಚೆ​ಗಷ್ಟೇ ಅವರು ಜೆಪಿ ನಗ​ರದ ನಿವಾ​ಸದ ದುರಸ್ತಿ ಕಾರ್ಯಕ್ಕೆ ಮುಂದಾ​ಗಿ​ದ್ದರು. ಹೀಗಾಗಿ ಜೆಪಿ ನಗ​ರದ ನಿವಾ​ಸದ ಬದ​ಲಾಗಿ ವಿಂಡ್ಸರ್‌ ಮ್ಯಾನರ್‌ ಬಳಿ ಇರುವ ತಮ್ಮ ಅಪಾ​ರ್ಟ್‌​ಮೆಂಟ್‌ಗೆ ವಾಸ​ಸ್ಥಾ​ನ​ವನ್ನು ಬದ​ಲಾ​ಯಿ​ಸಿ​ಕೊಂಡಿ​ದ್ದರು ಮತ್ತು ಶನಿ​ವಾರ ಈ ಅಪಾ​ರ್ಟ್‌ಮೆಂಟ್‌​ನಲ್ಲೇ ಹೃದಯಾ​ಘಾ​ತ​ದಿಂದ ಕುಸಿದು ಬಿದ್ದು ಅಸು ನೀಗಿ​ದ್ದಾರೆ.

ಮನೆ ದಾಖ​ಲೆ ಕಳೆ​ದು​ಕೊಂಡಿದ್ದ ಅಂಬ​ರೀ​ಶ್‌!

ಬಹಳ ವರ್ಷಗಳಿಂದ ಜೆಪಿ ನಗರದ ನಿವಾಸದಲ್ಲಿ ವಾಸಿಸುತ್ತಿದ್ದ ಅಂಬರೀಷ್‌ ಅವರು ತಮ್ಮ ಮನೆಯ ಎಲ್ಲ ದಾಖಲೆಗಳನ್ನು ಕಳೆದುಕೊಂಡಿದ್ದರು. ಇದ​ರಿಂದಾಗಿ ಮನೆ ದುರಸ್ತಿ ಕಾರ್ಯಕ್ಕೆ ಮುಂದಾ​ಗಲು ಅಡ​ಚ​ಣೆ​ಯಾ​ಗಿತ್ತು.

ಹೀಗಾಗಿ, ಬೆಂಗ​ಳೂರು ನಗ​ರಾ​ಭಿ​ವೃದ್ಧಿ ಸಚಿ​ವ​ರಾ​ಗಿ​ರುವ ಡಾ. ಜಿ. ಪರ​ಮೇ​ಶ್ವರ್‌ ಅವ​ರಿಗೆ ಇತ್ತೀ​ಚೆಗೆ ದೂರ​ವಾಣಿ ಕರೆ ಮಾಡಿದ ಮೂಲ ದಾಖ​ಲೆ ಪ್ರತಿ ದೊರ​ಕಿ​ಸಿಕೊಡು​ವಂತೆ ಬೆಳಗ್ಗೆ 10ಕ್ಕೆ ಕರೆ ಮಾಡಿ​ದ್ದರು. ಅಂಬರೀಷ್‌ ಮಾಡಿಕೊಂಡ ಮನವಿ ಮೇರೆಗೆ ಪರಮೇಶ್ವರ್‌ ಅವರು ಅಧಿಕಾರಿಗಳಿಗೆ ಸೂಚಿಸಿ ಕೇವಲ ಅಂದೇ ಸಂಜೆ ವೇಳೆಗೆ ದಾಖಲೆಗಳನ್ನು ಸಿದ್ಧಪಡಿಸಿಕೊಟ್ಟಿದ್ದರು.

ಹೀಗಿತ್ತು ನೋಡಿ ಅಂರೀಶ್ ನೆಚ್ಚಿನ ಮನೆ!
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತ- ರಷ್ಯಾ ಸಹಕಾರದಲ್ಲಿ ಹೊಸ ಮೈಲುಗಲ್ಲು
ಕನ್ನಡಪ್ರಭದ ಚಿತ್ರಕಲೆ, ಪ್ರಬಂಧ ಸ್ಪರ್ಧೆಗೆ ಸಿಎಂ ಚಾಲನೆ