ಪ್ರಕರಣದಲ್ಲಿಇವರಿಗೆಕೆಳನ್ಯಾಯಾಲಯಕ್ಲೀನ್ಚಿಟ್ಕೊಟ್ಟಿದ್ದನ್ನುಪ್ರಶ್ನಿಸಿಸಲ್ಲಿಸಲಾಗಿರುವಅರ್ಜಿಯವಿಚಾರಣೆನಡೆಸುತ್ತಿರುವಸುಪ್ರೀಂಕೋರ್ಟ್, ಪ್ರಕರಣವನ್ನುಪುನಃತೆರೆಯಬೇಕೇಅಥವಾಬೇಡವೇಎಂಬಬಗ್ಗೆಬುಧವಾರತೀರ್ಪುಪ್ರಕಟಿಸಲಿದೆ.
ನವದೆಹಲಿ(ಏ.18): ಬಾಬ್ರಿ ಮಸೀದಿ ಧ್ವಂಸಕ್ಕೆ ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಸೇರಿ 13 ಹಿರಿಯ ಮುಖಂಡರ ಹಣೆಬರಹ ಬುಧವಾರ ನಿರ್ಧಾರವಾಗುವ ನಿರೀಕ್ಷೆಯಿದೆ. ಪ್ರಕರಣದಲ್ಲಿ ಇವರಿಗೆ ಕೆಳ ನ್ಯಾಯಾಲಯ ಕ್ಲೀನ್ಚಿಟ್ ಕೊಟ್ಟಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್, ಪ್ರಕರಣವನ್ನು ಪುನಃ ತೆರೆಯಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಬುಧವಾರ ತೀರ್ಪು ಪ್ರಕಟಿಸಲಿದೆ. ಏ.7ರಂದು ಕೋರ್ಟ್ ತೀರ್ಪು ಕಾಯ್ದಿರಿಸಿತ್ತು. ಪ್ರಕರಣದಲ್ಲಿ ಎಂ.ಎಂ. ಜೋಶಿ, ಉಮಾಭಾರತಿ, ಕಲ್ಯಾಣ ಸಿಂಗ್ ಅವರ ಹೆಸರೂ ಇದೆ.