ನಟ ಓಂ ಪುರಿ ‘ದೆವ್ವ’ ಆಗಿದ್ದಾರಂತೆ !

Published : Apr 18, 2017, 05:49 PM ISTUpdated : Apr 11, 2018, 12:50 PM IST
ನಟ ಓಂ ಪುರಿ ‘ದೆವ್ವ’ ಆಗಿದ್ದಾರಂತೆ !

ಸಾರಾಂಶ

ಉರಿ ಭಯೋತ್ಪಾದಕ ದಾಳಿಯ ಬಳಿಕ ಪಾಕಿಸ್ತಾನಿ ಕಲಾವಿದರ ಪರವಾಗಿ ಓಂ ಪುರಿ ಮಾತನಾಡಿದ್ದರು. ಹೀಗಾಗಿ ಅವರನ್ನು

ಮುಂಬೈ(ಏ.18): ಪ್ರಸಿದ್ಧ ವ್ಯಕ್ತಿಗಳು ಸತ್ತಾಗಲೆಲ್ಲಾ ಅವರ ಸಾವಿನ ಹಿಂದೆ ಸಂಚಿನ ಬಗ್ಗೆ ಸಂಶಯಿಸಲಾಗುತ್ತದೆ. ಆದರೆ ಇಲ್ಲೊಂದು ಕತೆ ಕೇಳಿದರೆ ನಿಮಗೆ ಹಾಸ್ಯಾಸ್ಪದವೆನಿಸದಿರದು. ಬಾಲಿವುಡ್‌ನ ಖ್ಯಾತ ನಟ ಓಂ ಪುರಿಯವರ ‘ದೆವ್ವ’ ಮುಂಬೈನ ಅವರ ಮನೆ ಮುಂದೆ ಸುತ್ತಾಡುತ್ತಿದೆ ಎಂದು ಪಾಕಿಸ್ತಾನಿ ಸುದ್ದಿ ವಾಹಿನಿಯ ಆ್ಯಂಕರ್ ಆಮಿರ್ ಲಿಯಾಖತ್ ಎಂಬುವವರು ಹೇಳಿರುವುದು ಭಾರೀ ಚರ್ಚೆಯನ್ನು ಹುಟ್ಟು ಹಾಕಿದೆ. ಉರಿ ಭಯೋತ್ಪಾದಕ ದಾಳಿಯ ಬಳಿಕ ಪಾಕಿಸ್ತಾನಿ ಕಲಾವಿದರ ಪರವಾಗಿ ಓಂ ಪುರಿ ಮಾತನಾಡಿದ್ದರು. ಹೀಗಾಗಿ ಅವರನ್ನು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹತ್ಯೆ ಮಾಡಿಸಿದ್ದರು. ಹೀಗಾಗಿ ದೋವಲ್ ವಿರುದ್ಧ ದ್ವೇಷ ಸಾಸಲು ಓಂ ಪುರಿ ದೆವ್ವ ಬಂದಿದೆ ಎಂದು ಬೋಲ್ ನ್ಯೂಸ್ ಸುದ್ದಿ ವಾಹಿನಿಯ ಕಾರ್ಯಕ್ರಮದಲ್ಲಿ ಲಿಯಾಖತ್ ಹೇಳಿದ್ದರು. ಸುದ್ದಿಯೊಂದಿಗೆ ಜ. 14ರ ಸಿಟಿಟಿವಿ ತುಣುಕನ್ನೂ ಪ್ರದರ್ಶಿಸಲಾಗಿತ್ತು. ವಿಷಯಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗಳಾಗಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯಾವ ರಾಜ್ಯದಲ್ಲಿ ಗರಿಷ್ಠ ಬೆಲೆಗೆ ಮಾರಾಟವಾಗುತ್ತೆ ಪೆಟ್ರೋಲ್? ಕಡಿಮೆಗೆ ಎಲ್ಲಿ ಸಿಗುತ್ತೆ?
ದಾವಣಗೆರೆ: ಶಾಸಕ ಶಾಮನೂರು ಶಿವಶಂಕರಪ್ಪ ನಿಧನಕ್ಕೆ ಕಲಾಪ ಮುಂದಕ್ಕೆ ಇದೇ ಮೊದಲು