
ಬೆಂಗಳೂರು (ಆ.31): ಎಟಿಎಂನಲ್ಲಿ ಹಣ ಡ್ರಾ ಮಾಡುತ್ತಿದ್ದ ವ್ಯಕ್ತಿಯ ಎಟಿಎಂ ಕಾರ್ಡ್ ಕದ್ದ ಕಳ್ಳನೊಬ್ಬ ಬರೋಬ್ಬರಿ 70 ಸಾವಿರದಷ್ಟು ಹಣವನ್ನ ಕದ್ದು ಎಸ್ಕೇಪ್ ಆಗಿರುವ ಘಟನೆ ಯಶವಂತಪುರ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಿಹಾರ ಮೂಲದ ಬಾಲಮುಕುಂದ್ ಹಣ ಕಳೆದುಕೊಂಡ ವ್ಯಕ್ತಿ. ಇದೇ ತಿಂಗಳ ಆಗಸ್ಟ್ 26 ರನೇ ತಾರೀಖು ಬಾಲಮುಕುಂದ್ ಯಶವಂತಪುದ ರೈಲ್ವೇ ಸ್ಟೇಷನ್ ಬಳಿಯ ಎಟಿಎಂವೊಂದರಲ್ಲಿ ಹಣ ಡ್ರಾ ಮಾಡಲು ಹೋಗಿದ್ದಾರೆ. ಈ ವೇಳೆ ಎಟಿಎಂನಲ್ಲಿ ಹಣ ಡ್ರಾ ಮಾಡುತ್ತಿದ್ದ ಅಪರಿಚಿತ ವ್ಯಕ್ತಿ ಕಾರ್ಡ್ ಸ್ವೈಪ್ ಅಗುತ್ತಿಲ್ಲ ಎಂದು ನಾಟಕವಾಡಿ, ಬಾಲಮುಕುಂದ್ಗೆ ಹಣ ಡ್ರಾ ಮಾಡಿಕೊಳ್ಳಿ ಎಂದು ಹೇಳಿದ್ದಾನೆ. ಬಾಲಮುಕುಂದ್ ತನ್ನ ಎಟಿಎಂ ನಿಂದ ಹಣ ಡ್ರಾ ಮಾಡಿಕೋಳ್ಳುತ್ತಿದ್ದ ವೇಳೆ ಎಟಿಎಂನ ಪಿನ್ ನಂಬರ್ ನೋಡಿಕೊಂಡ ಅಪರಿಚಿತ ವ್ಯಕ್ತಿ ಬಾಲಮುಕುಂದ್ ಎಟಿಎಂ ಕದ್ದು ಬರೋಬ್ಬರಿ 40 ಸಾವಿರದಷ್ಟು ಹಣ ಡ್ರಾ ಮಾಡಿಕೊಂಡು ಎಸ್ಕೇಪ್ ಆಗಿದ್ದಾನೆ. ಆರ್ಎಂಸಿ ಯಾರ್ಡ್ನ ಎಟಿಎಂನಲ್ಲಿ 42 ಸಾವಿರ ಪಕ್ಕದಲ್ಲಿದ್ದ ನಮೃತ ಪೆಟ್ರೋಲ್ ಬಂಕ್'ನಲ್ಲಿ 28 ಸಾವಿರ ಹಣ ಡ್ರಾ ಮಾಡಿದ್ದಾನೆ. ಪೆಟ್ರೋಲ್ ಬಂಕ್ ಕ್ಯಾಶಿಯರ್ಗೆ 2 ಸಾವಿರ ಲಂಚ ಕೊಟ್ಟು 26 ಸಾವಿರ ಹಣ ಪಡೆದ ಅಪರಿಚಿತ ವ್ಯಕ್ತಿ ಎಸ್ಕೇಪ್ ಆಗ್ತಿದ್ದ ದೃಶ್ಯವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಯಶವಂತಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.