
ಬೆಂಗಳೂರು(ಜೂನ್ 15): ವಿಧಾನಪರಿಷತ್ ಸಭಾಪತಿ ಡಿಎಚ್ ಶಂಕರಮೂರ್ತಿ ಅವರನ್ನು ಕೆಳಗಿಸಲು ಕಾಂಗ್ರೆಸ್ ಪಟ್ಟ ಅತೀವ ಶ್ರಮ ನಿರುಪಯುಕ್ತವಾಗಿದೆ. ಸಭಾಪತಿ ವಿರುದ್ಧ ಕಾಂಗ್ರೆಸ್ ಮಂಡಿಸಿದ ಅವಿಶ್ವಾಸ ನಿರ್ಣಯಕ್ಕೆ ಪರಿಷತ್'ನಲ್ಲಿ ಸೋಲುಂಟಾಗಿದೆ. ಒಂದು ಮತದ ಅಂತರದಿಂದ ಸಭಾಪತಿ ಬಚಾವಾಗಿದ್ದಾರೆ. ಕಾಂಗ್ರೆಸ್'ನ ಅವಿಶ್ವಾಸ ನಿರ್ಣಯದ ಪರವಾಗಿ 36 ಮತಗಳು ಚಲಾಯಿತವಾದರೆ, ನಿರ್ಣಯದ ವಿರುದ್ಧವಾಗಿ 37 ಮತಗಳು ಬಂದಿವೆ. ಈ ಮೂಲಕ ಅವಿಶ್ವಾಸ ನಿರ್ಣಯಕ್ಕೆ ಸೋಲುಂಟಾಗಿದೆ.
ವಿಧಾನಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ ಅಧ್ಯಕ್ಷತೆಯಲ್ಲಿ ಇಂದು ಮೇಲ್ಮನೆಯಲ್ಲಿ ಚುನಾವಣೆ ನಡೆಯಿತು. ತಲೆ ಎಣಿಕೆ ಮೂಲಕ ನಿರ್ಣಯದ ಪರ ಮತ್ತು ವಿರೋಧ ಮತಗಳನ್ನ ಎಣಿಕೆ ಮಾಡಲಾಯಿತು.
ವಿಧಾನಪರಿಷತ್'ನಲ್ಲಿ ಕಾಂಗ್ರೆಸ್ 33 ಸ್ಥಾನಗಳನ್ನು ಹೊಂದಿದೆ. ಆದರೆ, ಬಿಜೆಪಿ ಹಾಗೂ ಜೆಡಿಎಸ್ ಒಟ್ಟು ಸೇರಿ 34 ಸ್ಥಾನಗಳನ್ನು ಹೊಂದಿವೆ. ಐವರು ಪಕ್ಷೇತರರ ಪೈಕಿ ಇಬ್ಬರು ನಿರ್ಣಯದ ವಿರುದ್ಧವಾಗಿ, ಅಂದರೆ ಶಂಕರಮೂರ್ತಿ ಪರವಾಗಿ ಮತ ಚಲಾಯಿಸಿದ್ದಾರೆ. ಜೆಡಿಎಸ್ ಜೊತೆ ಪಕ್ಷೇತರರೂ ಸೇರಿಕೊಂಡು ಬಿಜೆಪಿಯ ಮಾನ ಉಳಿಸಿದ್ದಾರೆ.
ಇನ್ನು, ಅವಿಶ್ವಾಸ ನಿರ್ಣಯಕ್ಕೆ ಸೋಲುಂಟಾದ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡ ಡಿಎಚ್ ಶಂಕರಮೂರ್ತಿ ಅವರೇ ಸಭಾಪತಿ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.