ತಿವಾರಿ ಪ್ರಕರಣಕ್ಕೆ ಹೊಸ ಟ್ವಿಸ್ಟ್; ಹೋಟೆಲ್'ನಲ್ಲಿ 25 ಸಿಗರೇಟ್ ತುಂಡುಗಳು ಪತ್ತೆ

Published : May 30, 2017, 11:15 AM ISTUpdated : Apr 11, 2018, 01:09 PM IST
ತಿವಾರಿ ಪ್ರಕರಣಕ್ಕೆ ಹೊಸ ಟ್ವಿಸ್ಟ್; ಹೋಟೆಲ್'ನಲ್ಲಿ 25 ಸಿಗರೇಟ್ ತುಂಡುಗಳು ಪತ್ತೆ

ಸಾರಾಂಶ

ಅನುರಾಗ್ ತಿವಾರಿ ಮಾನಸಿಕವಾಗಿ ನೊಂದಿದ್ದು ಹೆಚ್ಚು ಧೂಮಪಾನ ಮಾಡಿರುವುದು ಸಾವಿಗೆ ಕಾರಣವಿರಬಹುದು. ಮಾನಸಿಕ ಖಿನ್ನತೆಗೆ ಒಳಗಾಗಿ ಒತ್ತಡಕ್ಕೆ ಮಣಿದು ಹೆಚ್ಚು ಧೂಮಪಾನ ಮಾಡಿ ಸಾವನ್ನಪ್ಪಿರಬಹುದು ಅಂತಲೂ ಹೇಳಲಾಗ್ತಿದೆ. ಸಿಗರೇಟ್​ ತುಂಡುಗಳನ್ನು ವಶಪಡಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಬೆಂಗಳೂರು(ಮೇ 30): ಕರ್ನಾಟಕದ ಆಹಾರ ಇಲಾಖೆಯ ಆಯುಕ್ತರಾಗಿದ್ದ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ನಿಗೂಢ ಸಾವಿನ ಪ್ರಕರಣಕ್ಕೆ ಟ್ವಿಸ್ಟ್​ ಸಿಕ್ಕಿದೆ. ತಿವಾರಿ ತಂಗಿದ್ದ ಹೋಟೆಲ್'​ನಲ್ಲಿ 25 ಸುಟ್ಟ ಸಿಗರೇಟ್ ತುಂಡುಗಳು ಪತ್ತೆಯಾಗಿವೆ.

ಉತ್ತರ ಪ್ರದೇಶ ಪೊಲೀಸರು ತಿವಾರಿ ಸಾವಿನ ಕುರಿತು ತನಿಖೆ ಕೈಗೊಂಡ ಸಂದರ್ಭದಲ್ಲಿ ಸಿಗರೇಟ್ ತುಂಡುಗಳು ಪತ್ತೆಯಾಗಿದ್ದು, ಇವು ತನಿಖೆಗೆ ಸುಳಿವು ನೀಡಲಿವೆ ಎನ್ನುವುದು ಪೊಲೀಸರ ಅಭಿಪ್ರಾಯವಾಗಿದೆ.

ಅನುರಾಗ್ ತಿವಾರಿ ಮಾನಸಿಕವಾಗಿ ನೊಂದಿದ್ದು ಹೆಚ್ಚು ಧೂಮಪಾನ ಮಾಡಿರುವುದು ಸಾವಿಗೆ ಕಾರಣವಿರಬಹುದು. ಮಾನಸಿಕ ಖಿನ್ನತೆಗೆ ಒಳಗಾಗಿ ಒತ್ತಡಕ್ಕೆ ಮಣಿದು ಹೆಚ್ಚು ಧೂಮಪಾನ ಮಾಡಿ ಸಾವನ್ನಪ್ಪಿರಬಹುದು ಅಂತಲೂ ಹೇಳಲಾಗ್ತಿದೆ. ಸಿಗರೇಟ್​ ತುಂಡುಗಳನ್ನು ವಶಪಡಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಮೇ 17ರಂದು ತಮ್ಮ ಜನ್ಮದಿನದಂದೇ ಅನುರಾಗ್ ತಿವಾರಿ ನಿಗೂಢವಾಗಿ ಸಾವನ್ನಪ್ಪಿದ್ದರು. ಅವರು ತಂಗಿದ್ದ ಸರ್ಕಾರಿ ಗೆಸ್ಟ್​ ಹೌಸ್'​ನಿಂದ 50 ಕೀ.ಮೀ.ದೂರದಲ್ಲಿ ಅವರ ಶವ ಪತ್ತೆಯಾಗಿತ್ತು. ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಆರಂಭದಲ್ಲಿ ಹೇಳಲಾಗಿತ್ತಾದರೂ, ಅವರ ಸಾವಿನ ಕುರಿತಾಗಿ ಅನುಮಾನ ವ್ಯಕ್ತವಾಗಿದೆ.

ಉತ್ತರಪ್ರದೇಶ ಪೊಲೀಸರು ಅನುರಾಗ್ ತಿವಾರಿ ಸಾವನ್ನು ಒಂದು ಕೊಲೆ ಎಂದು ಎಫ್'ಐಆರ್ ಹಾಕಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕರ್ನಾಟಕದ ಆಹಾರ ಇಲಾಖೆಯಲ್ಲಿ ಅನುರಾಗ್ ತಿವಾರಿ ಕೆಲ ಪ್ರಮುಖ ಹಗರಣಗಳನ್ನು ಬಯಲು ಮಾಡುವವರಿದ್ದರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ತಿವಾರಿ ನಿಗೂಢ ಸಾವು ಹಲವು ಪ್ರಶ್ನೆಗಳಿಗೆ ಎಡೆ ಮಾಡಿಕೊಟ್ಟಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾತ್ರಿ ಕಣ್ಣೇ ಕಾಣೊಲ್ಲವೆಂದು ಹಗಲಿನಲ್ಲಿಯೇ ಕಿರುತೆರೆ ನಟ ಪ್ರವೀಣ್ ಮನೆಗೆ ಕನ್ನ ಹಾಕಿದ ಇರುಳು ಕುರುಡ!
ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ