
ಬೆಳಗಾವಿ: ಇತ್ತೀಚೆಗಷ್ಟೇ ಅಸ್ಸಾಂನ ಎಟಿಎಂ ನಲ್ಲಿ ಇಲಿಗಳು ನೋಟುಗಳನ್ನು ತಿಂದು ಕಚ್ಚಿ ಹಾಕಿದ ಬೆನ್ನಲ್ಲೇ ಇದೀಗ ಮತ್ತೊಂದು ಎಟಿಎಂ ಅವಾಂತರ ಬೆಳಕಿಗೆ ಬಂದಿದೆ.
ಎಸ್.ಬಿ.ಐ ಗೆ ಸೇರಿದ ಎಟಿಎಮ್ ನಲ್ಲಿ ಸುಟ್ಟ, ಹರಿದ ನೋಟುಗಳು ಪತ್ತೆಯಾಗಿದ್ದು, ಎಟಿಎಂ ನಿಂದ ಹಣ ಡ್ರಾ ಮಾಡಿದ ಗ್ರಾಹಕರು ಕಂಗಾಲಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕಣಗಲಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹೆಚ್ ಎ ಎಲ್ ಕಂಪನಿ ನೌಕರ ಭಗವಾನ್ ಎಂಬುವರು ಹಣ ಡ್ರಾ ಮಾಡಿದ್ದು, 2 ಸಾವಿರ ಮುಖಬೆಲೆಯ 6 ನೋಟುಗಳು ಡ್ಯಾಮೇಜ್ ಆಗಿ ಕೈ ಸೇರಿವೆ.
ಹೆಚ್.ಎ.ಎಲ್ ಕಂಪನಿ ಬಳಿಯ ಎಸ್.ಬಿ.ಐ ಎಟಿಎಂನಲ್ಲಿ ಹರಿದ ನೋಟು ಡ್ರಾ ಆಗಿದ್ದು, ಗ್ರಾಹಕ ಭಗವಾನ್ ಬ್ಯಾಂಕ್ ಶಾಖೆಗೆ ದೂರು ನೀಡಿದ್ದಾರೆ. ಇನ್ನೂ ಈ ಘಟನೆ ಇದೇ ಮೊದಲೇನಲ್ಲ, ಈ ಹಿಂದೆಯೂ ಕೂಡ ಇದೇ ಎಟಿಎಂನಲ್ಲಿ ಈ ರೀತಿಯ ಅವಘಡ ವರಿದಿಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.