ಅಂಬಿ ಪಾರ್ಥಿವ ಶರೀರ ದರ್ಶನಕ್ಕೆ ಮಂಡ್ಯದಲ್ಲೂ ವ್ಯವಸ್ಥೆ

By Web DeskFirst Published Nov 25, 2018, 11:39 AM IST
Highlights

ಅಂಬಿ ಅವರ ಪಾರ್ಥಿವ ಶರೀರವನ್ನು ಕೆಲವು ಗಂಟೆಗಳ ಮಟ್ಟಿಗಾದರೂ ಮಂಡ್ಯಕ್ಕೆ ತರಬೇಕು ಎಂದು ಸಂಜಯ ವೃತ್ತದ ಬಳಿ ಅಂಬರೀಷ್ ಅಭಿಮಾನಿಗಳು ಒತ್ತಾಯಿಸಿದ್ದರು.

ಬೆಂಗಳೂರು[ನ.25]: ಅಂಬರೀಷ್ ಅವರ ಪಾರ್ಥಿವ ಶರೀರವನ್ನು ಏರ್’ಲಿಫ್ಟ್ ಮೂಲಕ ಮಂಡ್ಯಗೆ ಕೊಂಡ್ಯೊಯುವುದು ಖಚಿತವಾಗಿದೆ. ಈಗಾಗಲೇ ಮಂಡ್ಯದ ಐಜಿ, ಎಸ್ಪಿ ಜೊತೆ ಮಾತುಕತೆಯಾಗಿದೆ, ಅವರು ಟ್ರಾಫಿಕ್ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ ಎಂಬ ಭರವಸೆ ನೀಡಿದ್ದಾರೆಂದು ಸಂಚಾರಿ ಆಯುಕ್ತ ಹರಿಶೇಖರನ್ ಹೇಳಿದ್ದಾರೆ.

[ವಿಡಿಯೋ] ಅಂಬರೀಷ್ ದರ್ಶನ ಪಡೆದ ಪ್ರಕಾಶ್ ರೈ; ಶಾಕ್‌ಗೆ ಮಾತೇ ಇಲ್ಲ

ಅಂಬಿ ಅವರ ಪಾರ್ಥಿವ ಶರೀರವನ್ನು ಕೆಲವು ಗಂಟೆಗಳ ಮಟ್ಟಿಗಾದರೂ ಮಂಡ್ಯಕ್ಕೆ ತರಬೇಕು ಎಂದು ಸಂಜಯ ವೃತ್ತದ ಬಳಿ ಅಂಬರೀಷ್ ಅಭಿಮಾನಿಗಳು ಒತ್ತಾಯಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ, ಯಾರೂ ಆಕ್ರೋಶದಿಂದ ವರ್ತಿಸಬೇಡಿ. ಅಂಬರೀಷ್ ಅವರ ಪಾರ್ಥಿವ ಶರೀರವನ್ನು ಏರ್’ಲಿಫ್ಟ್ ಮೂಲಕ ತೆಗೆದುಕೊಂಡ ಹೋಗುವ ಬಗ್ಗೆ ಯೋಚಿಸುತ್ತಿದ್ದೇವೆ. ಕೇಂದ್ರ ರಕ್ಷಣಾ ಸಚಿವರನ್ನು ನಾನೇ ಸಂಪರ್ಕಿಸುತ್ತಿದ್ದೇನೆ ಎಂದು ತಿಳಿಸಿದ್ದರು. 

ಮಂಡ್ಯಕ್ಕೆ ಅಂಬಿ ಪಾರ್ಥಿವ ಶರೀರ: ಪ್ರತಿಭಟನೆ-ನಿಷೇಧಾಜ್ಞೆ ಜಾರಿ

ಎಲ್ಲವೂ ಅಂದುಕೊಂಡಂತೆ ಆದರೆ, ಮಂಡ್ಯದ ವಿಶ್ವೇಶ್ವರಯ್ಯ ಸ್ಟೇಡಿಯಂನಲ್ಲಿ ಇಂದು ಸಂಜೆ 4 ಗಂಟೆಯಿಂದ ನಾಳೆ ಬೆಳಗ್ಗೆ 6 ಗಂಟೆವರೆಗೆ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಈಗಾಗಲೇ ಮಂಡ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಸಿದ್ಧತೆ ಆರಂಭವಾಗಿದ್ದು, ಮಂಡ್ಯ, ಮೈಸೂರು, ಹಾಸನ ಸೇರಿದಂತೆ ವಿವಿಧ ಜಿಲ್ಲೆಗಳ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಸಿಎಆರ್, ಡಿಎಆರ್, ಕೆಎಸ್’ಆರ್’ಪಿ ತುಕಡಿಗಳನ್ನು ಭದ್ರತೆಗಾಗಿ ಮಂಡ್ಯದಲ್ಲಿ ನಿಯೋಜಿಸಲಾಗಿದೆ. 

click me!