ಕಾಂಗ್ರೆಸ್‌ ಟಿಕೆಟ್‌'ಗಾಗಿ 1600 ಮಂದಿ ಅರ್ಜಿ

Published : Mar 13, 2018, 08:32 AM ISTUpdated : Apr 11, 2018, 01:13 PM IST
ಕಾಂಗ್ರೆಸ್‌ ಟಿಕೆಟ್‌'ಗಾಗಿ 1600 ಮಂದಿ ಅರ್ಜಿ

ಸಾರಾಂಶ

ನಿರೀ​ಕ್ಷೆ​ಯಂತೆಯೇ ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ ಅವರು ಚಾಮುಂಡೇ​ಶ್ವರಿ, ಅವರ ಪುತ್ರ ಡಾ.ಯತೀಂದ್ರ ಅವರು ವರು​ಣಾ​ದಿಂದ ಅರ್ಜಿ ಸಲ್ಲಿ​ಸಿ​ರು​ವು​ದು ಸೇರಿ​ದಂತೆ ಹಲ​ವಾರು ಕಾಂಗ್ರೆಸ್‌ ಮುಖಂಡರು ಹಾಗೂ ಅವರ ಪುತ್ರರು ಟಿಕೆಟ್‌ ಕೋರಿ ಅರ್ಜಿ ಸಲ್ಲಿ​ಸಿದ್ದಾರೆ.

ಬೆಂಗ​ಳೂರು(ಮಾ.13): ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ, ಕೆಪಿ​ಸಿಸಿ ಅಧ್ಯಕ್ಷ ಡಾ.ಜಿ. ಪರ​ಮೇ​ಶ್ವರ್‌ ಸೇರಿ​ದಂತೆ ಕಾಂಗ್ರೆ​ಸ್‌ನ ಬಹು​ತೇಕ ಎಲ್ಲಾ ಶಾಸ​ಕರು, ಕಳೆದ ಬಾರಿಯ ಪರಾ​ಜಿತ ಅಭ್ಯ​ರ್ಥಿ​ಗಳು, ಹಿರಿಯ ಮುಖಂಡರು ಹಾಗೂ ಹಲವು ಮುಖಂಡರ ಪುತ್ರರು ಸೇರಿ​ದಂತೆ ವಿಧಾ​ನ​ಸಭಾ ಚುನಾ​ವ​ಣೆಗೆ ಕಾಂಗ್ರೆಸ್‌ ಪಕ್ಷದ ಟಿಕೆಟ್‌ಗಾಗಿ 1600 ಮಂದಿ ಅರ್ಜಿ ಸಲ್ಲಿ​ಸಿ​ದ್ದಾ​ರೆ.

ಟಿಕೆಟ್‌ಗಾಗಿ ಕೆಪಿಸಿಸಿಗೆ ಅರ್ಜಿ ಸಲ್ಲಿ​ಸಲು ಸೋಮ​ವಾರ ಕಡೆಯ ದಿನ​ವಾ​ಗಿದ್ದು, ಸುಮಾರು 2450 ಮಂದಿ ಅರ್ಜಿ​ಯನ್ನು ಪಡೆ​ದು​ಕೊಂಡಿ​ದ್ದರು. ಈ ಪೈಕಿ 1600 ಮಂದಿ ಅರ್ಜಿ​ ಸಲ್ಲಿಸಿದ್ದಾರೆ. ನಿರೀ​ಕ್ಷೆ​ಯಂತೆಯೇ ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ ಅವರು ಚಾಮುಂಡೇ​ಶ್ವರಿ, ಅವರ ಪುತ್ರ ಡಾ.ಯತೀಂದ್ರ ಅವರು ವರು​ಣಾ​ದಿಂದ ಅರ್ಜಿ ಸಲ್ಲಿ​ಸಿ​ರು​ವು​ದು ಸೇರಿ​ದಂತೆ ಹಲ​ವಾರು ಕಾಂಗ್ರೆಸ್‌ ಮುಖಂಡರು ಹಾಗೂ ಅವರ ಪುತ್ರರು ಟಿಕೆಟ್‌ ಕೋರಿ ಅರ್ಜಿ ಸಲ್ಲಿ​ಸಿದ್ದಾರೆ.

2018ರಲ್ಲಿ ನಡೆಯಲಿರುವ 224 ಕ್ಷೇತ್ರಗಳ ಚುನಾವಣೆಗೆ ಸ್ಪರ್ಧೆ ಬಯಸಿ ಮತ್ತೊಮ್ಮೆ ಅರ್ಜಿಸಲ್ಲಿಸಿದ್ದಾರೆ. ಹಾಲಿ 123 ಶಾಸಕರಿಗೆ ಬಹುತೇಕ ಟಿಕೆಟ್ ಸಿಗುವುದು ಖಚಿತ ಎನ್ನಲಾಗುತ್ತಿದೆ ಕಾಂಗ್ರೆಸ್ ಮೂಲಗಳು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅತ್ಯಂತ ಕಡಿಮೆ ಬೆಲೆಯ ಹ್ಯಾಪಿ ನ್ಯೂ ಇಯರ್‌ ಪ್ಲ್ಯಾನ್‌ ರಿಲೀಸ್‌ ಮಾಡಿದ ಜಿಯೋ!
ಪೊಲೀಸ್‌ ಚೆಕಿಂಗ್‌ ವೇಳೆ ಹೋಟೆಲ್‌ ಬಾಲ್ಕನಿಯಿಂದ ಹಾರಿದ ಬೆಂಗಳೂರು ಮಹಿಳೆ, ಸ್ಥಿತಿ ಗಂಭೀರ!