
ಪಂಜಾಬ್(ಜ.21): ಕೇವಲ 16 ವರ್ಷದ ಯುವಕನೋರ್ವ 8 ವರ್ಷದ ಬಾಲಕನ ಕೊಲೆಗೈದು, ಅವನ ದೇಹವನ್ನು ತುಂಡರಿಸಿ, ಮಾಂಸ ತಿಂದು, ರಕ್ತ ಕುಡಿದ ಭೀಕರ ಕೃತ್ಯ ಪಂಜಾಬ್'ನ ಲೂಧಿಯಾನದಲ್ಲಿ ನಡೆದಿದೆ.
8 ವರ್ಷದ ದೀಪು ಕುಮಾರ್ ಇದೇ ಸೋಮವಾರ ಕಾಣೆಯಾಗಿದ್ದ. ಮರುದಿನ ಖಾಲಿ ಪ್ಲಾಟ್'ವೊಂದರಲ್ಲಿ ಶಿರಚ್ಛೇದಗೈದ ಸ್ಥಿತಿಯಲ್ಲಿ ದೀಪುವಿನ ಶವ ದುರ್ಗಿ ಏರಿಯಾದಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆಗಿಳಿದಿದ್ದರು. ತನಿಖೆಯ ವೇಳೆ ಈ ಏರಿಯಾದ ಸಿಸಿಟಿವಿ ದೃಶ್ಯಾವಳಿಯನ್ನು ಪೊಲೀಸರು ಪರಿಶೀಲಿಸಿದ್ದಾರೆ.
ಈ ವೇಳೆ ಹತ್ಯೆಯಾದ ದೀಪು ಮತ್ತೊಬ್ಬ ಬಾಲಕನ ಜೊತೆಗಿರುವುದು ದೃಶ್ಯಾವಳಿಯಲ್ಲಿ ಕಂಡು ಬಂದ ಹಿನ್ನೆಲೆಯಲ್ಲಿ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ದೀಪುವಿನ ಕೊಲೆ ಬಗ್ಗೆ ಆರೋಪಿ ಬಾಯ್ಬಿಟ್ಟಿದ್ದಾನೆ. ಕೊಲೆಗೈದ ಆರೋಪಿ 8 ನೇ ತರಗತಿ ಓದುತ್ತಿದ್ದಾನೆ ಎಂದು ತಿಳಿದು ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.