ವಿಧಾನಸೌಧದ ಶಾಸಕರ ಭವನದ ಗೇಟ್'ನಲ್ಲೇ ಕಿಡ್ನಾಪ್

Published : Jan 21, 2017, 06:41 AM ISTUpdated : Apr 11, 2018, 12:56 PM IST
ವಿಧಾನಸೌಧದ ಶಾಸಕರ ಭವನದ ಗೇಟ್'ನಲ್ಲೇ ಕಿಡ್ನಾಪ್

ಸಾರಾಂಶ

ಧಾನಸೌಧ ಎಲ್ ಹೆಚ್ ಗೇಟ್ ಬಳಿ, ಡಿಸೆಂಬರ್ 28ನೇ ತಾರೀಕು ಉದ್ಯಮಿ ಪದ್ಮನಾಭ್ ಅವರನ್ನು ಅಪಹರಣಕಾರರು ಕಿಡ್ನಾಪ್ ಮಾಡಿದ್ದರು. ಬಳಿಕ ಉಪ್ಪಾರಪೇಟೆಯ ಎಸ್ಎಂವಿ ಕಂಫರ್ಟ್ಸ್ ಲಾಡ್ಜ್​ನ ರೂಂ ನಂಬರ್ 407ನಲ್ಲಿ ಬಂಧಿಸಿಟ್ಟಿದ್ದರು. ಪದ್ಮನಾಭ್ ನಡೆಸುತ್ತಿರುವ ಗಣಿಯನ್ನು ಜಿಪಿಎ ಮಾಡಿಕೊಡುವಂತೆ ಬೆದರಿಕೆ ಹಾಕಿ, ಖಾಲಿ ಇ-ಸ್ಟಾಂಪ್ ಪೇಪರ್ ಮೇಲೆ ಸಹಿಯನ್ನೂ ಹಾಕಿಸಿಕೊಂಡಿದ್ದರು.

ಬೆಂಗಳೂರು(ಜ.21): ವಿಧಾನಸೌಧದ ಶಾಸಕರ ಭವನದ ಗೇಟ್ ಬಳಿ, ಕಿಡ್ನಾಪ್ ನಡೆಯುತ್ತದೆ. ಇದನ್ನ ಊಹಿಸಿಕೊಳ್ಳೋಕೂ ಸಾಧ್ಯವಿಲ್ಲ. ಆದರೆ, ಅಂಥಾದ್ದೊಂದು ಘಟನೆ ನಡೆದುಹೋಗಿದೆ.

ವಿಧಾನಸೌಧ ಎಲ್ ಹೆಚ್ ಗೇಟ್ ಬಳಿ, ಡಿಸೆಂಬರ್ 28ನೇ ತಾರೀಕು ಉದ್ಯಮಿ ಪದ್ಮನಾಭ್ ಅವರನ್ನು ಅಪಹರಣಕಾರರು ಕಿಡ್ನಾಪ್ ಮಾಡಿದ್ದರು. ಬಳಿಕ ಉಪ್ಪಾರಪೇಟೆಯ ಎಸ್ಎಂವಿ ಕಂಫರ್ಟ್ಸ್ ಲಾಡ್ಜ್​ನ ರೂಂ ನಂಬರ್ 407ನಲ್ಲಿ ಬಂಧಿಸಿಟ್ಟಿದ್ದರು. ಪದ್ಮನಾಭ್ ನಡೆಸುತ್ತಿರುವ ಗಣಿಯನ್ನು ಜಿಪಿಎ ಮಾಡಿಕೊಡುವಂತೆ ಬೆದರಿಕೆ ಹಾಕಿ, ಖಾಲಿ ಇ-ಸ್ಟಾಂಪ್ ಪೇಪರ್ ಮೇಲೆ ಸಹಿಯನ್ನೂ ಹಾಕಿಸಿಕೊಂಡಿದ್ದರು.

ಸುಧಾಕರ್ ಮತ್ತು ಆಂದ್ರ ಮೂಲದ ಸೂರ್ಯನಾರಾಯಣ ಎಂಬುವರಿಂದ ಕಿಡ್ನಾಪ್ ಆಗಿದ್ದ ಉದ್ಯಮಿ ಪದ್ಮನಾಭ್, ಹೇಗೋ ಅಪಹರಣಕಾರರಿಂದ ತಪ್ಪಿಸಿಕೊಂಡು ಬಂದು ಜನವರಿ 16ರಂದು ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ಧಾರೆ. ಪ್ರಕರಣವನ್ನ ಬನಶಂಕರಿ ಪೊಲೀಸರು ಉಪ್ಪಾರಪೇಟೆ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಮೂವರ ಮೇಲೆ ಪ್ರಕರಣ ದಾಖಲಿಸಿ ತನಿಖೆಯನ್ನೂ ಕೈಗೆತ್ತಿಕೊಂಡಿದ್ದಾರೆ. ಸದ್ಯಕ್ಕೆ ದೂರು ವಿಧಾನಸೌಧ ಠಾಣೆಗೆ ದೂರು ವರ್ಗಾವಣೆಯಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಬಡ್ಡಿ ಟೂರ್ನಿ ವೇಳೆಯಲ್ಲೇ ಪ್ಲೇಯರ್‌ ರಾಣಾ ಬಲ್ಚೌರಿಯಾ ಕೊ*ಲೆ!
ಅತ್ಯಂತ ಕಡಿಮೆ ಬೆಲೆಯ ಹ್ಯಾಪಿ ನ್ಯೂ ಇಯರ್‌ ಪ್ಲ್ಯಾನ್‌ ರಿಲೀಸ್‌ ಮಾಡಿದ ಜಿಯೋ!