ನಮಗೇ 'ರಾಮಾಯಣ' ಮೊದಲ ಶೋ ತೋರಿಸಲೇಬೇಕು, ಇಲ್ಲಿದಿದ್ದರೆ ಉಗ್ರ ಪ್ರತಿಭಟನೆ; ಎಚ್ಚರಿಕೆ ಕೊಟ್ಟಿದ್ಯಾರು?

Published : Aug 03, 2026, 03:37 PM IST
Ramayana

ಸಾರಾಂಶ

ರಾಮಾಯಣ ಸಿನಿಮಾ ನೋಡಿ, ಬಳಿಕ ಸಾವಿರಾರು ಜನರಿಗೆ ಉಚಿತವಾಗಿ ಈ ಸಿನಿಮಾ ತೋರಿಸಲು ಶ್ರೀ ರಾಮಲೀಲಾ ಸಮಿತಿ ರೆಡಿಯಿದೆ, ಆದರೆ ಅದಕ್ಕೆ ಕಂಡಿಶನ್ ಒಂದೇ—ಸಿನಿಮಾ ಶಾಸ್ತ್ರೋಕ್ತವಾಗಿರಬೇಕು! ಚಿತ್ರತಂಡ ಸಂಘಟನೆಯ ಈ ಮನವಿಗೆ ಒಪ್ಪಿ 'ಸ್ಪೆಷಲ್ ಸ್ಕ್ರೀನಿಂಗ್' ಏರ್ಪಡಿಸುತ್ತಾರಾ? ಅಥವಾ ವಿವಾದವನ್ನು ಮೈಮೇಲೆ ಎಳೆದುಕೊಳ್ತಾರಾ? ಕಾದು ನೋಡಬೇಕು.

'ರಾಮಾಯಣ' ಸಿನಿಮಾಗೆ ಸಂಕಷ್ಟ! 4,000 ಸಿನಿಮಾಗೆ ಶುರುವಾಯ್ತು ವಿಘ್ನ!?

ಬಾಲಿವುಡ್ ಅಂಗಳದಲ್ಲಿ ಈಗ ಎಲ್ಲಿ ಕೇಳಿದರೂ ನಿರ್ದೇಶಕ ನಿತೇಶ್ ತಿವಾರಿ (Nitesh Tiwari) ಅವರ ಮ್ಯಾಜಿಕ್ ಸೃಷ್ಟಿ 'ರಾಮಾಯಣ' (Ramayana) ಸಿನಿಮಾದ್ದೇ ಸದ್ದು. ಬರೋಬ್ಬರಿ 4,000 ಕೋಟಿ ರೂಪಾಯಿಗಳ ಬಜೆಟ್, ರಣಬೀರ್ ಕಪೂರ್ (Ranbir Kapoor) ರಾಮನಾದರೆ, ನಮ್ಮ ಹೆಮ್ಮೆಯ ರಾಕಿಂಗ್ ಸ್ಟಾರ್ ಯಶ್ (Yash) ಇಲ್ಲಿ ಲಂಕೇಶ್ವರ ರಾವಣ! ನಟಿ ಸಾಯಿ ಪಲ್ಲವಿ (Sai Pallavi) ಸೀತೆ. ಇಷ್ಟೆಲ್ಲಾ ಸ್ಟಾರ್ ಪವರ್ ಇದ್ದರೂ ಸಿನಿಮಾ ರಿಲೀಸ್‌ಗೂ ಮುನ್ನವೇ ವಿವಾದದ ಕಿಡಿ ಹೊತ್ತಿಕೊಂಡಿದೆ.

ಸಂಘಟನೆಯ 'ರಾಮ'ಬಾಣ: "ನಮಗೆ ಮೊದಲು ಸಿನಿಮಾ ತೋರಿಸಿ!"

ಸಿನಿಮಾ ಬೆಳ್ಳಿತೆರೆಗೆ ಬರುವ ಮೊದಲೇ 'ಶ್ರೀ ರಾಮಲೀಲಾ ಮಹಾಸಂಘ' ಚಿತ್ರತಂಡಕ್ಕೆ ಖಡಕ್ ಎಚ್ಚರಿಕೆ ನೀಡಿದೆ. "ಸಿನಿಮಾ ಬಿಡುಗಡೆ ಮಾಡುವ ಮುನ್ನ ನಮಗೊಂದು ಸ್ಪೆಷಲ್ ಶೋ ಅರೇಂಜ್ ಮಾಡಿ. ಸಿನಿಮಾದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ದೃಶ್ಯಗಳಿದ್ದರೆ ನಾವು ಸುಮ್ಮನಿರಲ್ಲ" ಎಂದು ಸಂಘದ ಅಧ್ಯಕ್ಷ ಅರ್ಜುನ್ ಕುಮಾರ್ ಗುಡುಗಿದ್ದಾರೆ. ಒಂದು ವೇಳೆ ತಮ್ಮ ಮಾತನ್ನು ನಿರ್ಲಕ್ಷಿಸಿದರೆ, ದೇಶಾದ್ಯಂತ ಚಿತ್ರಮಂದಿರಗಳ ಮುಂದೆ ಪ್ರತಿಭಟನೆಯ ಬಿಸಿ ಮುಟ್ಟಿಸುವುದಾಗಿ ಅವರು ಬಾಲಿವುಡ್ ಮಂದಿಗೆ 'ಧಮ್ಕಿ' ಹಾಕಿದ್ದಾರೆ.

ರಣಬೀರ್ ಕಪೂರ್ ಮೇಲೆ ಅಸಮಾಧಾನ: "ರಾಮ ವೀಕ್ ಅಂದ್ರಾ?"

ಈ ವಿವಾದದ ನಡುವೆ ಸಂಘಟನೆ ಒಂದು ಶಾಕಿಂಗ್ ಹೇಳಿಕೆ ನೀಡಿದೆ. "ನಮಗೆ ರಣಬೀರ್ ಕಪೂರ್ ರಾಮನ ಪಾತ್ರದಲ್ಲಿ ಅಷ್ಟು ಪವರ್‌ಫುಲ್ ಆಗಿ ಕಾಣಿಸುತ್ತಿಲ್ಲ. ಟ್ರೈಲರ್ ನೋಡಿದ ಮೇಲೆ ರಣಬೀರ್ ರಾಮನ ಪಾತ್ರಕ್ಕೆ ತುಂಬಾ ವೀಕ್ ಅನಿಸುತ್ತಿದ್ದಾರೆ" ಎಂದು ಅಭಿಪ್ರಾಯಪಟ್ಟಿದ್ದಾರೆ. ಕೋಟ್ಯಂತರ ಜನರ ಆರಾಧ್ಯ ದೈವ ರಾಮನ ಪಾತ್ರಕ್ಕೆ ರಣಬೀರ್ ಎಷ್ಟು ನ್ಯಾಯ ಒದಗಿಸುತ್ತಾರೆ ಎಂಬ ಸಂಶಯ ಈಗ ಈ ಸಂಘಟನೆಯನ್ನು ಕಾಡುತ್ತಿದೆ.

'ಆದಿಪುರುಷ್' ನೆನಪು ತರಿಸಿದ ಆತಂಕ!

ಸಂಘಟನೆ ಇಷ್ಟೊಂದು ಗರಂ ಆಗಲು ಮುಖ್ಯ ಕಾರಣ ಪ್ರಭಾಸ್ ನಟನೆಯ 'ಆದಿಪುರುಷ್'. "ಆ ಸಿನಿಮಾದಲ್ಲಿ ಲಂಕೆಯನ್ನು ಕಪ್ಪಗೆ ತೋರಿಸಿದ್ದರು, ರಾವಣನ ಲುಕ್ ವಿಚಿತ್ರವಾಗಿತ್ತು. ಮೊಘಲ್ ಕಾಲದ ಕ್ಯಾರೆಕ್ಟರ್‌ಗಳಂತೆ ರಾಮಾಯಣದ ಪಾತ್ರಗಳನ್ನು ಚಿತ್ರಿಸಿದ್ದರು. ಅಂತಹ ತಪ್ಪುಗಳು ಈ ಸಿನಿಮಾದಲ್ಲೂ ಮರುಕಳಿಸಬಾರದು. ಸನಾತನ ಧರ್ಮದ ನಂಬಿಕೆಗಳಿಗೆ ಚ್ಯುತಿ ಬಂದರೆ ನಾವು ಸುಮ್ಮನೆ ಕೂರಲ್ಲ" ಎಂದು ಸಂಘಟನೆ ಖಡಕ್ ಆಗಿ ಹೇಳಿದೆ.

ಸ್ಟಾರ್‌ಗಳ ದಂಡು, ನಿರೀಕ್ಷೆಗಳ ಬೆಟ್ಟ!

ಒಂದೆಡೆ ಸಾಯಿ ಪಲ್ಲವಿ ಸೀತೆಯಾಗಿ, ಸನ್ನಿ ಡಿಯೋಲ್ ಹನುಮಂತನಾಗಿ ನಟಿಸುತ್ತಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಅದರಲ್ಲೂ ಯಶ್ ರಾವಣನಾಗಿ ಕಾಣಿಸಿಕೊಳ್ಳುತ್ತಿರುವುದು ಚಿತ್ರಕ್ಕೆ ಮೌಂಟ್ ಎವರೆಸ್ಟ್‌ನಷ್ಟು ಹೈಪ್ ನೀಡಿದೆ. ಆದರೆ, 2026ರ ದೀಪಾವಳಿಗೆ ರಿಲೀಸ್ ಆಗಬೇಕಿರುವ ಈ ಚಿತ್ರಕ್ಕೆ ಈಗಲೇ ಸಂಕಷ್ಟ ಎದುರಾಗಿದೆ.

ಮುಂದೇನು?

ರಾಮಲೀಲಾ ಸಮಿತಿಯು ಸಾವಿರಾರು ಜನರಿಗೆ ಉಚಿತವಾಗಿ ಸಿನಿಮಾ ತೋರಿಸಲು ರೆಡಿಯಿದೆ, ಆದರೆ ಅದಕ್ಕೆ ಕಂಡಿಶನ್ ಒಂದೇ—ಸಿನಿಮಾ ಶಾಸ್ತ್ರೋಕ್ತವಾಗಿರಬೇಕು! ಈಗ ಬಾಲಿವುಡ್ ಮಂದಿ ಈ ಸಂಘಟನೆಯ ಮನವಿಗೆ ಒಪ್ಪಿ 'ಸ್ಪೆಷಲ್ ಸ್ಕ್ರೀನಿಂಗ್' ಏರ್ಪಡಿಸುತ್ತಾರಾ? ಅಥವಾ ವಿವಾದವನ್ನು ಮೈಮೇಲೆ ಎಳೆದುಕೊಳ್ತಾರಾ? ಕಾದು ನೋಡಬೇಕು.

ಒಟ್ಟಿನಲ್ಲಿ, ಬಜೆಟ್ ಅದ್ದೂರಿಯಾಗಿದೆ, ಸ್ಟಾರ್‌ಗಳು ಸ್ಟ್ರಾಂಗ್ ಆಗಿದ್ದಾರೆ, ಆದರೆ 'ವಿವಾದ' ಎಂಬ ಅಗ್ನಿಪರೀಕ್ಷೆಯನ್ನು ಈ 'ರಾಮಾಯಣ' ಹೇಗೆ ಎದುರಿಸಲಿದೆ ಎಂಬುದು ಸದ್ಯದ ಕುತೂಹಲ ಕೆರಳಿಸಿದೆ. ಮುಂದಿನ ಬೆಳವಣಿಗೆ ಬಗ್ಗೆ ಕಾದು ನೋಡಲಾಗುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಮಾಯಣ ಟ್ರೈಲರ್ ನೋಡಿ ದರ್ಶನ್ ಫ್ಯಾನ್ಸ್ ಕಣ್ಣಲ್ಲಿ ನೀರು! ಕಾರಣ ಗೊತ್ತಾದ್ರೆ ನಿಮ್ಮ ಕಣ್ಣಲ್ಲೂ ನೀರು ಬರುತ್ತೆ..!
ಮತ್ತೆ ಅಪ್ಪಳಿಸಿದ ಸುನಾಮಿ.. 'ಸಬಾ ಆಜಾದ್‌ ಜೊತೆ ಚೆನ್ನಾಗಿರಿ'- ಹೃತಿಕ್ ರೋಶನ್ ವಿರುದ್ಧ ಕಿಡಿಕಿಡಿಯಾದ ಕಂಗನಾ ರಣಾವತ್!