'ಮನೆ ಮಗನಿಗೆ ಮನವಿ': ಅಳಿಯ ಚಿರು ಸರ್ಜಾಗೆ ಮಾವನ ಭಾವುಕ ಪತ್ರ..!

Suvarna News   | Asianet News
Published : Jun 17, 2020, 11:50 AM ISTUpdated : Jun 17, 2020, 01:30 PM IST
'ಮನೆ ಮಗನಿಗೆ ಮನವಿ': ಅಳಿಯ ಚಿರು ಸರ್ಜಾಗೆ ಮಾವನ ಭಾವುಕ ಪತ್ರ..!

ಸಾರಾಂಶ

ಮನೆ ಮನಗನಂತಿದ್ದ ಚಿರಂಜೀವಿ ಸರ್ಜಾ ಅಗಲಿಕೆಯ ನೋವಿನಿಂದ ನಟ ಅರ್ಜುನ್ ಸರ್ಜಾ ಅವರು ಹೊರಬಂದಿಲ್ಲ. ಪ್ರೀತಿಯ ಅಳಿಯನ ಜೊತೆ ಮಾವನಿಗಿಂತ ಹೆಚ್ಚು ಗೆಳೆಯನಾಗಿಯೇ ಬೆರೆತಿದ್ದ ಅರ್ಜುನ್ ಸರ್ಜಾ ಮನೆ ಮಗನಲ್ಲಿ ಒಂದು ಮನವಿ ಮಾಡಿದ್ದಾರೆ. ಏನದು..? ಇಲ್ಲಿ ಓದಿ. 

ಮನೆ ಮನಗನಂತಿದ್ದ ಚಿರಂಜೀವಿ ಸರ್ಜಾ ಅಗಲಿಕೆಯ ನೋವಿನಿಂದ ನಟ ಅರ್ಜುನ್ ಸರ್ಜಾ ಅವರು ಹೊರಬಂದಿಲ್ಲ. ಪ್ರೀತಿಯ ಅಳಿಯನ ಜೊತೆ ಮಾವನಿಗಿಂತ ಹೆಚ್ಚು ಗೆಳೆಯನಾಗಿಯೇ ಬೆರೆತಿದ್ದ ಅರ್ಜುನ್ ಸರ್ಜಾ ಮನೆ ಮಗನಲ್ಲಿ ಒಂದು ಮನವಿ ಮಾಡಿದ್ದಾರೆ.

ಮನೆ ಮಗನಿಗೆ ಮಾವನ ಮನವಿ ಎಂಬ ತಲೆ ಬರಹದಲ್ಲಿ ಅರ್ಜುನ್ ಸರ್ಜಾ ಕಿರು ಬರಹವೊಂದನ್ನು ಬರೆದಿದ್ದು, ಅಳಿಯ ಚಿರು ಸರ್ಜಾ ಅವರನ್ನು ನೆನಪು ಮಾಡಿಕೊಂಡಿದ್ದಾರೆ. ಈ ಮೂಲಕ ಚಿರು ಅಗಲಿಕೆಯ ನೋವನ್ನ ಸರ್ಜಾ ಹಂಚಿಕೊಂಡಿದ್ದಾರೆ.

ಚಿರು ನಿಧನಕ್ಕೆ ನಸ್ರಿಯಾ ಸಂತಾಪ: ಹಳೇ ಫೋಟೋ ಪೋಸ್ಟ್ ಮಾಡಿದ ನಟಿ

ತನ್ನದೇ ಮಾತುಗಳಲ್ಲಿ ತನ್ನ ನೋವನ್ನ ಹಂಚಿಕೊಂಡಿರೋ ಅರ್ಜುನ್, ನೀನು ಕೊಟ್ಟ ನೋವು  ಮರಿಬೇಕು ಅಂದರೆ ನಿನ್ನಿಂದ ಮಾತ್ರ ಸಾಧ್ಯ. ಮೇಘನಾ ಹೊಟ್ಟೆಯಲ್ಲಿ ಮಗುವಾಗಿ ಬಂದು ನಮ್ಮ ನೋವನ್ನ ಮರೆಸು. ನೀನು ಸದಾ ಚಿರಂಜೀವಿ ಎಂದಿಗೂ ನಿನ್ನ ನೆನಪು ಚಿರಂಜೀವಿ ಎಂದು ಭಾವುಕವಾಗಿ ಬರೆದಿದ್ದಾರೆ.

ಹೀಗಿದೆ ಆ ಪತ್ರ:

ಚಿನ್ನ ಮಗನೇ, ನಿನ್ನ ಮನ್ನಿಗೆ ಯಾರಾದ್ರೂ ಏಜಾರು ಮಾಡಿದ್ರೆ.. ನೀನು ಕೋಪ ಮಾಡ್ಕೊಂಡು ಸ್ವಲ್ಪ ಮಾತಾಡ್ತಿದ್ರು.. ನಮ್ಮನ್ನ ಬೈಕೊಂಡಿದ್ರು, ನಮಗ್ಎ ಹೇಳದೆ ಹೇಳ್ದೆ ಯಾವ್ದಾರು ಊರಿಗೆ ಹೋಗಿ ಬಂದಿದ್ರು ಪರವಾಗಿರಿರ್ತಿರ್ಲಿಲ್ಲ. ಆದ್ರೆ ವಾಪಸ್ಸೇ ಬರಕ್ಕಾಗ್ದಿರೋ ಅಂತ ಊರಿಗೆ ಹೋಗಿ ನಮ್ಗೆಲ್ಲಾ ಇಂತ ಶಿಕ್ಷೆ ಕೊಡ್ಬಿಟ್ಯಲ್ಲಪ್ಪ.

ಕಣ್ಣು ಮುಚ್ಚುದ್ರು ನೀನೆ, ಕಣ್ಣು ತೆರೆದ್ರು ನೀನೆ, ನಿನ್ನ ನಗು ಮುಖ, ಸರಿ ಸ್ವಲ್ಪ ದಿನ ಕಳೆದ್ರೆ ಮರ್ತುಬಿಡ್ತಾರೆ ಅಂತ ನೀಡು ತಿಳ್ಕೊಂಡಿದ್ರೆ ಅದು ಸುಳ್ಳು. ನಮ್ಗೆಲ್ಲರಿಗೂ ಇದು ದೊಡ್ಡ ಗಾಯ. ಆದರೆ ಇರೋ ಅಂತ ಗಾಯ ಯಾವಾಗ್ಲೂ ನೀನು ನಮ್ಮ ಮನ್ಸಲ್ಲಿ. ಹೃದಯದಲ್ಲೆ ಇರ್ತೀಯ ಕಂದ.

ನಿನ್ನ ತಾತ ನಿಂಗೆ ಚಿರಂಜೀವಿ ಅಂತ ಹೆಸರಿಟ್ರು. ಅದ್ಯಾವತ್ತು ಸುಳ್ಳಾಗಲ್ಲ. ನಿನ್ನ ಮಾತು, ನಿನ್ನ ಚಿರುನಗು, ನಿನ್ನ ನೆನಪು, ನಮ್ಮ ಸಂಬಂಧ ಯಾವಾಗ್ಲೂ ಚಿರಂಜೀವಿಯಾಗೇ ಇರುತ್ತೆ ಬಂಗಾರ.

ಚಿರು.. ಎಲ್ರು ಹೇಳ್ತಾರೆ ಈ ನೋವನ್ನ ತಡ್ಕೊಳ್ಳೋ ಶಕ್ತಿ ಆ ದೇವರು ನಿಮ್ಮ ಇಡೀ ಕುಟುಂಬಕ್ಕೆ ಕೊಡ್ಬೇಕು ಅಂತ. ಆದರೆ ಅದು ನಿನ್ನ ಕೈಯಲ್ಲೇ ಇದೆ. ಹೇಗೆ ಅಂದ್ರೆ, ನೀನೆ ನಿನ್ನ ಮಗುವಾಗಿ ನಮ್ಮ ಮಡಿಲಿಗೆ ಬಂದ್ಬಿಡು ಕಂದ. ಆ ಮಗು ನಗಗುವಿನಲ್ಲೇ ನಿನ್ನ ನೋಡ್ತೀವಿ ಪ್ಲೀಸ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಿಷಬ್‌ ಶೆಟ್ಟಿ, ವಿಜಯ್ ಕಿರಗಂದೂರು ವ್ಯಾಪಾರಿಗಳು, ದೈವಾರಾಧನೆಯನ್ನ ವ್ಯಾಪಾರಕ್ಕೆ ಹಾಕಿದ್ದಾರೆ: ದೈವಾರಾಧಕ ಬೇಸರ
BBK 12: ಗಿಲ್ಲಿ ನಟನಿಗೆ ಏನ್‌ ಮಾಡೋದು ಅಂತ ನಿರ್ಧಾರ ಮಾಡಿ: ರಘು ಬಳಿ ಕಾವ್ಯ ಶೈವ ಬೇಸರ ತೋಡಿಕೊಂಡ್ರು