ರೆಹಮಾನ್‌ ಗೊತ್ತಿಲ್ಲ, ಭಾರತ ರತ್ನ ತಂದೆಯ ಉಗುರಿಗೆ ಸಮ : ನಟ ಬಾಲಕೃಷ್ಣ

Kannadaprabha News   | Asianet News
Published : Jul 23, 2021, 08:32 AM ISTUpdated : Jul 23, 2021, 08:34 AM IST
ರೆಹಮಾನ್‌ ಗೊತ್ತಿಲ್ಲ, ಭಾರತ ರತ್ನ ತಂದೆಯ ಉಗುರಿಗೆ ಸಮ : ನಟ ಬಾಲಕೃಷ್ಣ

ಸಾರಾಂಶ

ಆಸ್ಕರ್‌ ಪುರಸ್ಕೃತ ಖ್ಯಾತ ಸಂಗೀತ ನಿರ್ದೇಶಕ ಎ.ಆರ್‌.ರೆಹಮಾನ್‌ ಯಾರೆಂದೇ ನನಗೆ ಗೊತ್ತಿಲ್ಲ ದೇಶದ ಅತ್ಯುನ್ನತ ನಾಗರಿಕ ಗೌರವವಾದ ‘ಭಾರತ ರತ್ನ’  ಬಗ್ಗೆ ವಿವಾದಿತ ಹೇಳಿಕೆ ‘ಭಾರತ ರತ್ನ ತಂದೆಯ ಕಾಲಿನ ಉಗುರಿಗೂ ಸಮ ಎಂದು ಖ್ಯಾತ ನಟ ನಂದಮೂರಿ ಬಾಲಕೃಷ್ಣ ವಿವಾದ 

ಹೈದರಾಬಾದ್‌ (ಜು.23): ಆಸ್ಕರ್‌ ಪುರಸ್ಕೃತ ಖ್ಯಾತ ಸಂಗೀತ ನಿರ್ದೇಶಕ ಎ.ಆರ್‌.ರೆಹಮಾನ್‌ ಯಾರೆಂದೇ ನನಗೆ ಗೊತ್ತಿಲ್ಲ. ಇನ್ನು ದೇಶದ ಅತ್ಯುನ್ನತ ನಾಗರಿಕ ಗೌರವವಾದ ‘ಭಾರತ ರತ್ನ’ ನಮ್ಮ ತಂದೆಯ ಕಾಲಿನ ಉಗುರಿಗೂ ಸಮ ಎಂದು ಹೇಳುವ ಮೂಲಕ ತೆಲುಗಿನ ಖ್ಯಾತ ನಟ ನಂದಮೂರಿ ಬಾಲಕೃಷ್ಣ ವಿವಾದ ಸೃಷ್ಟಿಸಿದ್ದಾರೆ.

ತೆಲುಗು ಟಿವಿ ಚಾನೆಲ್‌ ಜೊತೆ ನಡೆದ ಸಂದರ್ಶನದಲ್ಲಿ ಮಾತನಾಡಿದ ಅವರು, ಎ.ಆರ್‌.ರೆಹಮಾನ್‌ ಯಾರು ಎಂದೇ ನನಗೆ ಗೊತ್ತಿಲ್ಲ. ಅವರು ಆಸ್ಕರ್‌ ಗೆದ್ದಿದ್ದಾರೆ ಎಂದು ಕೇಳಿದ್ದೇನೆ. ಆದರೆ ಅವರ ಬಗ್ಗೆ ನನಗೇನೂ ಗೊತ್ತಿಲ್ಲ. ಅವರ ದಶಕದಲ್ಲಿ ಒಮ್ಮೆ ಹಿಟ್‌ ಹಾಡು ಹಾಡುತ್ತಾರೆ’ ಎಂದು ವ್ಯಂಗ್ಯವಾಡಿದ್ದಾರೆ.

ನಟ, ಶಾಸಕ ಬಾಲ​ಕೃಷ್ಣರಿಂದ ಛಾಯಾ​ಗ್ರಾ​ಹ​ಕಗೆ ಕಪಾ​ಳ​ಮೋ​ಕ್ಷ!

 ಇನ್ನು ‘ಭಾರತ ರತ್ನ ಪ್ರಶಸ್ತಿಯು ನನ್ನ ತಂದೆ ಎನ್‌.ಟಿ. ರಾಮರಾವ್‌ ಅವರ ಕಾಲಿನ ಬೆರಳಿಗೂ ಸಮ ಅಲ್ಲ. ಭಾರತ ರತ್ನವು ನಟ ಹಾಗೂ ಆಂಧ್ರಪ್ರದೇಶ ಸಿಎಂ ಆಗಿದ್ದ ನನ್ನ ತಂದೆಗೆ ಗೌರವ ತಂದುಕೊಡುವುದಿಲ್ಲ. ಬದಲಾಗಿ ನನ್ನ ತಂದೆಯೇ ಭಾರತ ರತ್ನಕ್ಕೆ ಗೌರವ ತಂದುಕೊಡಲಿದ್ದಾರೆ. ಟಾಲಿವುಡ್‌ಗೆ ನನ್ನ ಕುಟುಂಬ ನೀಡಿದ ಕೊಡುಗೆಗೆ ಯಾವ ಪ್ರಶಸ್ತಿಯೂ ಸಮ ಅಲ್ಲ. ನನ್ನ ಕುಟುಂಬ ಅಥವಾ ನನ್ನ ತಂದೆ ಈ ಬಗ್ಗೆ ಬೇಸರ ಪಡುವುದಿಲ್ಲ. ಪ್ರಶಸ್ತಿಗಳೇ ಬೇಸರ ಪಡಬೇಕು’ ಎಂದು ವಿವಾದಿತ ಹೇಳಿಕೆ ನೀಡಿದ್ದಾರೆ.

ಅವರ ಈ ಹೇಳಿಕೆಗೆ ಸಾಮಾಜಿಕ ಜಾಲ ತಾಣದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಸಾವಿರ ಕೋಟಿ ಕುಬೇರ 'ಮಹಾಪುರುಷ'ನಿಗೆ ಡಿವೋರ್ಸ್ ಕೊಡ್ತಾರಾ ಈ ನಟಿ? ಇದೆಂಥ ಶಾಕಿಂಗ್ ಮ್ಯಾಟರ್!
ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!