ವಿಷ್ಣುವರ್ಧನ್‌ ಅಭಿನಯದ ಜೀವನಜ್ಯೋತಿ ಸಿನಿಮಾದಲ್ಲಿ ನಟಿಸಿದ್ದ ಹಿರಿಯ ನಟಿ ಪುಷ್ಪಲತಾ ನಿಧನ

Published : Feb 05, 2025, 04:00 PM IST
ವಿಷ್ಣುವರ್ಧನ್‌ ಅಭಿನಯದ ಜೀವನಜ್ಯೋತಿ ಸಿನಿಮಾದಲ್ಲಿ ನಟಿಸಿದ್ದ ಹಿರಿಯ ನಟಿ ಪುಷ್ಪಲತಾ ನಿಧನ

ಸಾರಾಂಶ

ಹಿರಿಯ ನಟಿ ಪುಷ್ಪಲತಾ, ವಿಷ್ಣುವರ್ಧನ್ ಅವರ 'ಜೀವನ ಜ್ಯೋತಿ' ಸಿನಿಮಾದಲ್ಲಿ ನಟಿಸಿದ್ದವರು, ಇತ್ತೀಚೆಗೆ ನಿಧನರಾದರು. ಚೆನ್ನೈನಲ್ಲಿ ನೆಲೆಸಿದ್ದ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.

ಬೆಂಗಳೂರು (ಫೆ.5): ಸಾಹಸಸಿಂಹ ವಿಷ್ಣುವರ್ಧನ್‌, ಅಂಬಿಕಾ ಅಭಿನಯದ ಜೀವನಜ್ಯೋತಿ ಸಿನಿಮಾದಲ್ಲಿ, ವಿಷ್ಣುವರ್ಧನ್‌ ವಾಸವಿದ್ದ ಗೆಸ್ಟ್‌ ಹೌಸ್‌ನ ಮಾಲೀಕರ ಪಾತ್ರದಲ್ಲಿ ನಟಿಸಿದ್ದ ಹಿರಿಯ ನಟಿ ಪುಷ್ಪಲತಾ ದೀರ್ಘಕಾಲದ ಅನಾರೋಗ್ಯದಿಂದ ಬುಧವಾರ ನಿಧನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು. ಜೀವನ ಜ್ಯೋತಿ ಅವರು ನಟಿಸಿದ್ದ ಕನ್ನಡದ ಕೊನೆಯ ಸಿನಿಮಾವಾಗಿತ್ತು. ಇದಲ್ಲದೆ, 1984ರಲ್ಲಿ ಬಿಡುಗಡೆಯಾದ ಒಲವೇ ಬದುಕು, 1981ರಲ್ಲಿ ಬಂದ ಹೆಣ್ಣಿನ ಸೇಡು ಹಾಗೂ 1974ರಲ್ಲಿ ರಿಲೀಸ್‌ ಆದ ಡಾ.ರಾಜ್‌ಕುಮಾರ್‌ ಅವರ ಎರಡು ಕನಸು ಸಿನಿಮಾದಲ್ಲೂ ಇವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಸಿನಿಮಾದಿಂದ ದೂರವಾದ ಬಳಿಕ ಚೆನ್ನೈನಲ್ಲಿಯೇ ವಾಸವಿದ್ದ ಪುಷ್ಪಲತಾ ತಮ್ಮ ಸಿನಿಮಾದಲ್ಲಿ ಸಾಕಷ್ಟು ತಮಿಳು ಸಿನಿಮಾಗಳಲ್ಲಿ ನಟಿಸಿದ್ದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಪುಷ್ಪಲತಾ ಅವರಿಗೆ ಕೆಲ ಕಾಲದಿಂದ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿತ್ತು.

ಹಿರಿಯ ನಟಿಯ ನಿಧನದ ನಂತರ ಅನೇಕ ಅಭಿಮಾನಿಗಳು ಮತ್ತು ಹಿತೈಷಿಗಳು ಸಾಮಾಜಿಕ ಮಾಧ್ಯಮಗಳಲ್ಲಿ  ಸಂತಾಪವನ್ನು ವ್ಯಕ್ತಪಡಿಸಿದ್ದಾರೆ. ಚಲನಚಿತ್ರೋದ್ಯಮದಾದ್ಯಂತ ಮತ್ತು ಅವರ ಅಭಿಮಾನಿಗಳಿಂದ ಅವರು ಸಿನಿಮಾಗೆ ನೀಡಿದ ಕೊಡುಗೆಗಳನ್ನು ಮತ್ತು ಅವರ ಅದ್ಭುತ ವೃತ್ತಿಜೀವನದಲ್ಲಿ ಅವರು ನೀಡಿದ ಕೊಡುಗೆಯನ್ನ ಸ್ಮರಿಸಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಪುಷ್ಪಲತಾ ಅವರ ಪತಿ ಎವಿಎಂ ರಾಜನ್, ಅವರ ಇಬ್ಬರು ಹೆಣ್ಣುಮಕ್ಕಳು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ. 

ಪುಷ್ಪಲತಾ ಕೊಯಮತ್ತೂರಿನ ಮೆಟ್ಟುಪಾಳಯಂನಲ್ಲಿ ಕ್ಯಾಥೋಲಿಕ್ ಚೆಟ್ಟಿನಾಡು ಕುಟುಂಬದಲ್ಲಿ ಜನಿಸಿದರು. ಎಂಟು ಮಂದಿ ಒಡಹುಟ್ಟಿದವರಲ್ಲಿ ಇವರು ಐದನೆಯವರಾಗಿದ್ದರು. ಅವರು ಒಂಬತ್ತನೇ ವಯಸ್ಸಿನಲ್ಲಿ ಶಾಸ್ತ್ರೀಯ ನೃತ್ಯದಲ್ಲಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು. ಭರತನಾಟ್ಯ ಕಲಾವಿದೆಯಾಗಿದ್ದ ಪುಷ್ಪಲತಾ,  ಅವರ ನಟನಾ ವೃತ್ತಿಜೀವನವು 1955 ರ ಚಲನಚಿತ್ರ ನಲ್ಲ ತಂಗೈನಲ್ಲಿ ಅತಿಥಿ ಪಾತ್ರದೊಂದಿಗೆ ಪ್ರಾರಂಭವಾಯಿತು. 1962 ರಲ್ಲಿ, ಅವರು ಕೊಂಗ ನಟ್ಟು ತಂಗಮ್ ಚಿತ್ರದಲ್ಲಿ ನಾಯಕಿಯಾಗ ಪಾದಾರ್ಪಣೆ ಮಾಡಿದ್ದರು.

ಸೀರಿಯಲ್‌ನಲ್ಲಿ ಅತ್ತೆ-ಅಳಿಯ, ನಿಜ ಜೀವನದಲ್ಲಿ ಗಂಡ-ಹೆಂಡ್ತಿ, ಮಕ್ಕಳಿಲ್ಲ ಅನ್ನೋದೇ ಕೊರಗು!

ತಮ್ಮ ವರ್ಣರಂಜಿತ ಸಿನಿಮಾ ಜೀವನದಲ್ಲಿ ಅವರು ನೂರಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದರಲ್ಲಿ ಸರದಾ, ಪಾರ್ ಮ್ಯಾಗಲೇ ಪಾರ್, ನಾನುಮ್ ಒರು ಪೆನ್, ಯರುಕ್ಕು ಸೊಂತಂ, ತಾಯೆ ಉನಕ್ಕಾಗ, ಕರ್ಪೂರಂ, ಜೀವನಾಂಶಂ, ಧರಿಸನಂ, ಕಲ್ಯಾಣರಾಮನ್, ಸಕಲಕಲಾ ವಲ್ಲವನ್, ಸಿಮ್ಲಾ ಸ್ಪೆಷಲ್, ಮತ್ತು ಪುತ್ತು ವೆಲ್ಲಂ. ಅವರು ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಕೆಲಸ ಮಾಡಿದರು, ಶಿವಾಜಿ ಗಣೇಶನ್ ಮತ್ತು ರಜನಿಕಾಂತ್ ಅವರಂತಹ  ನಟರೊಂದಿಗೆ ಪರದೆಯನ್ನು ಹಂಚಿಕೊಂಡಿದ್ದರು.

ಭಾರತದ ಅತ್ಯಂತ ದುಬಾರಿ ಷೇರುಗಳು: ನಂ. 1 ಸ್ಥಾನದಲ್ಲಿ ಇರೋದು ಯಾವುದು? ಖರೀದಿ ಮಾಡಿದ್ರೆ ಕೋಟ್ಯಧಿಪತಿ ಆಗೋದು ಪಕ್ಕಾ!

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬೆಳಗೆದ್ದು .. ನಾಚುತ್ತಲೇ ಮಲಗುವ ಕೋಣೆಯ ರಹಸ್ಯ ಬಹಿರಂಗಪಡಿಸಿದ ಪಿಗ್ಗಿ
ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!