ಸನ್ನಿ ಲಿಯೋನ್ ಕಳ್ಳತನ ಮಾಡಿದ್ರಾ? ವಿವಾದದಲ್ಲಿ ಸಿಲುಕಿದ  ನಟಿ

Published : Oct 30, 2019, 10:55 PM ISTUpdated : Oct 31, 2019, 05:19 PM IST
ಸನ್ನಿ ಲಿಯೋನ್ ಕಳ್ಳತನ ಮಾಡಿದ್ರಾ? ವಿವಾದದಲ್ಲಿ ಸಿಲುಕಿದ  ನಟಿ

ಸಾರಾಂಶ

ಸನ್ನಿ ಲಿಯೋನ್‌ ಗೆ ಸುತ್ತಿಕೊಂಡ ವಿವಾದ/ ಕೃತಿ ಚೌರ್ಯ ಮಾಡಿದ್ರಾ ಸನ್ನಿಲಿಯೋನ್/ ಸೋಶಿಯಲ್ ಮೀಡಿಯಾದಲ್ಲಿ ಜೋರಾದ ಸುದ್ದಿ

ಮುಂಬೈ[ಅ. 30]  ಕ್ಯಾನ್ಸರ್ ರೋಗಿಗಳಿಗೆ ಆರ್ಥಿಕ ಸಹಾಯ ಮಾಡುವ ಉದ್ದೇಶದಿಂದ ಸನ್ನಿಲಿಯೋನ್ ಬಣ್ಣಗಳಿಂದ ತುಂಬಿದ ಕಲಾಕೃತಿಯನ್ನು ಹರಾಜಿಗೆ  ಇಟ್ಟಿದ್ದರು. ಇದನ್ನು ಗಮನಿಸಿದ ಡಯೆಟ್ಸಬ್ಯಾ ಎಂಬ ಇನ್ಸ್ಟಾಗ್ರಾಮ್ ಖಾತೆದಾರರು, ಇದು ಫ್ರಾನ್ಸ್ ಚಿತ್ರಕಾರ ಮಲಿಕಾ ಫಾವ್ರೆ ಅವರ ಕೃತಿಚೌರ್ಯ ಎಂಬ ಆಕ್ಷೇಪ ಎತ್ತಿದ್ದಾರೆ. ಕೃತಿ ಚೌರ್ಯ ಮಾಡಲಾಗಿದೆ ಎನ್ನಲಾದ ಮೂಲ ಕಲಾಕೃತಿಯ ಫೋಟೋವನ್ನು ಸನ್ನಿಲಿಯೋನ್ ತಯಾರಿಸಿದ್ದ ಕಲಾಕೃತಿ ಪಕ್ಕದಲ್ಲೇ ಪೋಸ್ಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿದ್ದರು.

ನಾವೆಲ್ಲರೂ ಆರ್ಥಿಕ ಸಹಾಯ ಮಾಡುವ ಉದ್ದೇಶದ ಜೊತೆಗಿದ್ದೇವೆ. ಆದರೆ ಅದಕ್ಕಾಗಿ ಇನ್ನೊಬ್ಬರ ಕೃತಿಯನ್ನು ನಕಲು ಮಾಡಿ ಅವರ ಹೆಸರನ್ನೂ ಉಲ್ಲೇಖ ಮಾಡದೇ ಇರುವುದು ಕೆಟ್ಟದ್ದು ಎಂದು ಸನ್ನಿಗೆ ತಿಳಿವಳಿಕೆ ನೀಡುವ ಕೆಲಸವನ್ನು ಮಾಡಿದ್ದಾರೆ.

ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ಸನ್ನಿ 2 ಕೋಟಿ ನೀಡಿದ್ರಾ?

ಸನ್ನಿ ಲಿಯೋನ್ ಪ್ರತಿಕ್ರಿಯೆ ಬಂದ ಬಳಿಕ ಡಯೆಟ್ಸಬ್ಯಾ ಎಂಬ ಇನ್ಸ್ಟಾಗ್ರಾಮ್ ಖಾತೆದಾರರು ಮಲಿಕಾ ಫಾವ್ರೆ ಅವರ ಪ್ರತಿಕ್ರಿಯೆಯನ್ನೂ ಉಲ್ಲೇಖಿಸಿದ್ದಾರೆ.  ಸನ್ನಿ ಲಿಯೋನ್ ಕನಿಷ್ಠ ಹೆಸರನ್ನಾದರೂ ಉಲ್ಲೇಖಿಸಬೇಕಿತ್ತು. ಬೌದ್ಧಿಕ ಆಸ್ತಿಯ ಬಗ್ಗೆ ಉಲ್ಲೇಖಿಸಿವುದು ನಿಮಗೆ ತಿಳಿದಿಲ್ಲವೇ?  ಎಂದು ಪ್ರಶ್ನೆ ಮಾಡಿದ್ದಾರೆ.

ದೀಪಾವಳಿ ಹಬ್ಬಕ್ಕೆ ಸನ್ನಿ ಲಿಯೋನ್ ಅಭಿಮಾನಿಗಳಿಗೆ ಆಫರ್ ಸಹ ನೀಡಿದ್ದರು. ತಮ್ಮ Suncitystore ಎನ್ನುವ ಆನ್ ಲೈನ್ ಶಾಪಿಂಗ್ ವೆಬ್ ಸೈಟ್ ನಡೆಸುತ್ತಿದ್ದಾಳೆ. ಇಲ್ಲಿ ಕಾಸ್ಮೆಟಿಕ್ಸ್, ಲಿಪ್ ಸ್ಟಿಕ್, ಕ್ರೀಮ್, ಬ್ಯೂಟಿ ಪ್ರಾಡಕ್ಟ್ ಎಲ್ಲವೂ ಸಿಗುತ್ತದೆ. ಈ ಸೈಟ್ ನಲ್ಲಿ ದೀಪಾವಳಿ ಹಬ್ಬಕ್ಕೆ flat 50 ಪರರ್ಸೆಂಟ್ ಆಫರ್  ನೀಡಿ ಸುದ್ದಿಮಾಡಿದ್ದರು.

 

ಅಕ್ಟೋಬರ್ 31ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಟೈಮ್‌ ಬಂದೇಬಿಡ್ತು, ಅಂದು ಹೊಟ್ಟೆ ಉರಿಸಿದ್ದ ರಘು; ಚಕ್ರಬಡ್ಡಿ ಸಮೇತ ವಾಪಸ್‌ ಕೊಟ್ಟ ಗಿಲ್ಲಿ ನಟ
ಪಡೆಯಪ್ಪ 'ನೀಲಾಂಬರಿ'ಗೆ ಮೊದಲ ಆಯ್ಕೆ ಐಶ್ವರ್ಯಾ ರೈ; ಶ್ರೀದೇವಿ-ಮಾಧುರಿಯನ್ನೂ ರಮ್ಯಾ ಕೃಷ್ಣನ್ ಬದಿಗೆ ಸರಿಸಿದ್ದು ಹೇಗೆ?