ನಿರೀಕ್ಷೆ ಸುಳ್ಳು ಮಾಡದ ದಬಾಂಗ್ 3; ಸುದೀಪ್‌ ಸಖತ್‌ ಸ್ಟೈಲ್‌ಗೆ ಜೈ ಎಂದ ಪ್ರೇಕ್ಷಕರು!

Suvarna News   | Asianet News
Published : Dec 20, 2019, 03:01 PM ISTUpdated : Dec 20, 2019, 05:30 PM IST
ನಿರೀಕ್ಷೆ ಸುಳ್ಳು ಮಾಡದ ದಬಾಂಗ್ 3; ಸುದೀಪ್‌ ಸಖತ್‌ ಸ್ಟೈಲ್‌ಗೆ ಜೈ ಎಂದ ಪ್ರೇಕ್ಷಕರು!

ಸಾರಾಂಶ

ಬಾಲಿವುಡ್ ಸುಲ್ತಾನ್ ಹಾಗೂ ಕನ್ನಡದ ಪೈಲ್ವಾನ್ ಅಭಿನಯದ ದಬಾಂಗ್ 3 ಸಿನಿಮಾ ರಿಲೀಸ್ ಆಗಿದೆ ...ಕನ್ನಡದಲ್ಲಿಯೂ ಡಬ್ಬಿಂಗ್ ಆಗಿ ಚಿತ್ರ ತೆರೆಗೆ ಬಂದಿದ್ದು ಡಬ್ಬಿಂಗ್ ಸಿನಿಮಾಗೆ ಪ್ರೇಕ್ಷಕ ಪ್ರಭು ಅಸ್ತು ಅಂದಿದ್ದಾನೆ. 

ಭಾರೀ ನಿರೀಕ್ಷೆ ಹುಟ್ಟು ಹಾಕಿದ್ದ ಕಿಚ್ಚ ಸುದೀಪ್- ಸಲ್ಮಾನ್ ಖಾನ್ ಅಭಿನಯದ 'ದಬಾಂಗ್-3' ರಿಲೀಸ್ ಆಗಿದೆ. ಸಿನಿಮಾ ನೋಡಿದ ಪ್ರೇಕ್ಷಕ ಡಬ್ಬಿಂಗ್‌ಗೆ ಜೈ ಎಂದಿದ್ದಾರೆ. ಕಿಚ್ಚ ಸುದೀಪ್ ಅಭಿನಯಕ್ಕೆ ಫಿದಾ ಆಗಿದ್ದಾರೆ. ಹುಟ್ಟು ಹಾಕಿದ ನಿರೀಕ್ಷೆ ಮುಟ್ಟುವಲ್ಲಿ ದಬಾಂಗ್ 3 ಯಶಸ್ವಿಯಾಗಿದೆ ಎನ್ನಲಾಗಿದೆ.

 

ಭಾರೀ ಹೈಪ್ ಕ್ರಿಯೆಟ್ ಮಾಡಿದ್ದ ದಬಾಂಗ್ -3 ದೇಶಾದ್ಯಂತ ರಿಲೀಸ್ ಆಗಿದೆ.  ಬಾಲಿವುಡ್ ನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಲ್ಲು ಬಾಯ್ 'ಚುಲ್‌ಬುಲ್ ಪಾಂಡೆ ಪೊಲೀಸ್‌ ಲುಕ್‌ಗೆ ಪ್ರೇಕ್ಷಕರು ಜೈ ಸಲ್ಲುಬಾಯ್ ಎಂದಿದ್ದಾರೆ.  ಹಾಗೂ ಸ್ಯಾಂಡಲ್‌ವುಡ್‌ನಲ್ಲಿ ದಬಾಂಗ್ - 3  ಡಬ್ಬಿಂಗ್ ಆಗಿದೆ. ಕಿಚ್ಚ ಸುದೀಪ್ ಸ್ಟೈಲಿಶ್ ಲುಕ್‌ಗೆ, ರಗಡ್ ಮ್ಯಾನರಿಸಂಗೆ ಸೈ ಆಗಿದ್ದಾರೆ. ಯಾವಾಗಲೂ ಮೋಸ್ಟ್ ಹ್ಯಾಂಡ್ಸಂ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದ ಕಿಚ್ಚ ಸುದೀಪ್ ಇಲ್ಲಿ ಕೊಂಚ ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ವಿಲನ್ ಪಾತ್ರವನ್ನು ಹೀಗೂ ಮಾಡಬಹುದು ಎಂದು ಕಿಚ್ಚನ ಬಲ್ಲಿಸಿಂಗ್ ಪಾತ್ರ ನೋಡಿದರೆ ಗೊತ್ತಾಗುತ್ತದೆ. 

ಡಬ್ಬಿಂಗ್ ಪರ -ವಿರೋಧ ಚರ್ಚೆ ಇನ್ನೂ ಹಾಗೆಯೇ ಇದೆ. ಡಬ್ಬಿಂಗ್ ಚಿತ್ರಗಳೆಂದರೆ ಅಷ್ಟಕ್ಕಷ್ಟೇ ಎನ್ನುವ ಭಾವನೆಯಿದೆ. ಒರಿಜಿನಲ್ ಸಿನಿಮಾದಷ್ಟು ಚೆನ್ನಾಗಿ ಮೂಡಿ ಬಂದಿರುವುದಿಲ್ಲ ಎಂಬ ಅಭಿಪ್ರಾಯವಿದೆ. ಆದರೆ ದಬಾಂಗ್‌ 3 ಯಲ್ಲಿ ಇದು ಸುಳ್ಳಾದಂತೆ ಕಾಣಿಸುತ್ತದೆ. ಪ್ರೇಕ್ಷಕರು ಕಿಚ್ಚ ಸುದೀಪ್ ಮೇಲೆ ನಂಬಿಕೆಯಿಟ್ಟು, ಸಲ್ಲು ಭಾಯ್- ಸುದೀಪ್ ಕಾಂಬಿನೇಶನ್ ಇದೇ ಮೊದಲ ಬಾರಿಯಾದ್ದರಿಂದ ಚೆನ್ನಾಗಿ ಇದ್ದೇ ಇರುತ್ತದೆಂದು ಥಿಯೇಟರ್‌ಗೆ ಬಂದಿದ್ದಾರೆ. ನಿರೀಕ್ಷೆ ಸುಳ್ಳಾಗಿಲ್ಲ, ಚಿತ್ರ ನೋಡಿ ಹೊರ ಬರುವಾಗ ಪ್ರೇಕ್ಷಕನ ಮುಖದಲ್ಲಿ ಮಂದಹಾಸ. ಚಿತ್ರ ಇಲ್ಲಿ ಅರ್ಧ ಗೆದ್ದಂತೆಯೇ. 

ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌ನಲ್ಲಿ ಸಲ್ಲು- ಸೋನಾಕ್ಷಿ ಸೀರೆ ರೊಮ್ಯಾನ್ಸ್‌!

ಗುರುದತ್ ಗಾಣಿಗ ಸಂಭಾಷಣೆ ಸಕತ್ ವರ್ಕೌಟ್ ಆಗಿದೆ. ಉತ್ತರ ಕರ್ನಾಟಕ, ಮಂಡ್ಯ ಭಾಷೆಯ ಪಂಚಿಂಗ್ ಡೈಲಾಗ್‌ಗಳು ಖಡಕ್ ಮಿರ್ಚಿ ಮಂಡಕ್ಕಿ ತಿಂದ ಹಾಗಾಗುತ್ತದೆ.  ಅಲ್ಲಲ್ಲಿ ಕೊಂಚ ಎಳೆದಂತೆ ಭಾಸವಾಗುತ್ತದೆ. 

ಸೆಂಟಿಮೆಂಟ್ ಸೀನ್‌ಗಳು ಸ್ವಲ್ಪ ಬೋರ್ ಹೊಡೆಸುತ್ತದೆ. ಅದನ್ನು ಕಡಿಮೆ ಮಾಡಿ ಕಥೆಯನ್ನು ಇನ್ನಷ್ಟು ಗಟ್ಟಿ ಮಾಡಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಎಂಬುದು ಪ್ರೇಕ್ಷಕರ ಅಭಿಪ್ರಾಯ.  ಚಿತ್ರಕಥೆಯಲ್ಲಿ ಹೊಸದೇನು ಇಲ್ಲ. ಆದರೆ ಸಲ್ಲು ಭಾಯ್- ಸುದೀಪ್ ಕಾಂಬಿನೇಶನ್ ವರ್ಕೌಟ್ ಆಗಿದೆ. 

ಗುರುದತ್ ಗಾಣಿಕ ಸಂಭಾಷಣೆ ಪವರ್‌ಫುಲ್ ಆಗಿದೆ. ಅನೂಪ್ ಭಂಡಾರಿ ಸಾಹಿತ್ಯ ಬರೆದಿರುವ ಹಾಡುಗಳು ಕಚಗುಳಿ ಇಡುವಂತಿದೆ.  ಕಥೆಯಲ್ಲಿ ಹೊಸತನವಿಲ್ಲದಿದ್ದರೂ  ಕಿಚ್ಚ ಸುದೀಪ್‌ಗೆ ಹೈಪ್ ನೀಡಿದ್ದು ಕನ್ನಡಿಗರಿಗೆ ಖುಷಿ ಕೊಟ್ಟಿದೆ.  

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಧುರಂಧಾರ್ ಚಿತ್ರೀಕರಣ ಪಾಕಿಸ್ತಾನದಲ್ಲಿ ಆಗಿತ್ತಾ? ಸಿನಿಮಾದಲ್ಲಿನ ದೃಶ್ಯಗಳ ರಹಸ್ಯ ಬಯಲು ಮಾಡಿದ ನಟ!
ಕಳ್ಳಭಟ್ಟಿ ದಂಧೆ ನಡುವೆ ಅರಳುವ ಪ್ರೀತಿ: ಇಲ್ಲಿದೆ 'ಧರ್ಮಂ' ಸಿನಿಮಾ ವಿಮರ್ಶೆ