ಶಿವಮೊಗ್ಗ : ಸಿಗರೇಟ್ - ಬೀಡಿ ಮೂಲ - ಯುವಕನ ಕೊಲೆಯಲ್ಲಿ ಗಲಾಟೆ ಅಂತ್ಯ

Suvarna News   | Asianet News
Published : May 26, 2021, 03:22 PM ISTUpdated : May 26, 2021, 03:26 PM IST
ಶಿವಮೊಗ್ಗ :  ಸಿಗರೇಟ್ - ಬೀಡಿ ಮೂಲ - ಯುವಕನ ಕೊಲೆಯಲ್ಲಿ ಗಲಾಟೆ ಅಂತ್ಯ

ಸಾರಾಂಶ

ಬೀಡಿ-ಸಿಗರೇಟ್ ಮೂಲದಿಂದ ಆರಂಭವಾದ ಜಗಳ ಯುವಕನ ಕೊಲೆಯಲ್ಲಿ ಅಂತ್ಯವಾಯ್ತು ಎರಡು ಗುಂಪುಗಳ ಗಲಾಟೆ ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ನಡೆಯಿತು ಘಟನೆ

ಬೆಂಗಳೂರು (ಮೇ.26):  ಭದ್ರಾವತಿಯಲ್ಲಿ 2 ಗುಂಪಿನ ನಡುವೆ ನಡೆದ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯಗೊಂಡಿದೆ. ಇನ್ನೊರ್ವನ ಸ್ಥಿತಿ ಚಿಂತಾಜನಕವಾಗಿದೆ 

ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಓಲ್ಡ್ ಟೌನ್ ಠಾಣೆಯ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ  ಈ ಘಟನೆ ನಡೆದಿದ್ದು, ಪೌರ ಕಾರ್ಮಿಕ ಸುನಿಲ್ ಎಂಬಾತನ ಕೊಲೆಯಾಗಿದೆ.  ಶ್ರೀಕಾಂತ್ ಎಂಬುವನ ಸ್ಥಿತಿ ಗಂಭೀರವಾಗಿದೆ.

 ತಸ್ರೇಜ್ ಎನ್ನುವವನ ಹುಟ್ಟುಹಬ್ಬ ಆಚರಣೆಗೆ ಶಿವಮೊಗ್ಗದ ಆರ್‌ಎಂಎಲ್ ನಗರದ ಇಬ್ಬರು ಸೇರಿದಂತೆ ಒಟ್ಟು ನಾಲ್ವರು ಭದ್ರಾವತಿಗೆ ಬಂದಿದ್ದರು . ಇವರೆಲ್ಲರೂ ಸೇರಿ  ಅನ್ವರ್ ಕಾಲೋನಿಯಲ್ಲಿ ಪಾರ್ಟಿ ಮಾಡಿದ್ದಾರೆ. ಈ ವೇಳೆ ಸಿಗರೇಟ್ ಹಾಗೂ ಬೀಡಿ ತರಲು ಕೆಲವರು ಲಾಕ್‌ಡೌನ್ ನಡುವೆಯೂ ಭೀಮ್ ನಗರದಲ್ಲಿ ಓಡಾಡಿದ್ದಾರೆ . ಈ ವೇಳೆ ಅಲ್ಲಿದ್ದ ಯುವಕರು (ಕೊಲೆಯಾದ ಸುನಿಲ್-ಶ್ರೀಕಾಂತ್) ಲಾಕ್‌ಡೌನ್ ನಡುವೆ ಹೀಗ್ಯಾಕೆ ಓಡಾಡುತ್ತಿದ್ದೀರಿ ಅಂತಾ ಪ್ರಶ್ನಿಸಿದ್ದಾರೆ.

ಮಹಿಳೆಯ ವಿಚಾರ : ಯುವಕನಿಗೆ ಮೂತ್ರ ಕುಡಿಸಿದ ಆರೋಪದಡಿ PSI ವಿರುದ್ಧವೇ FIR ..
 
ಮೊದಲೇ ನಶೆಯಲ್ಲಿದ್ದ ಯುವಕರ ಗುಂಪು ತಮ್ಮನ್ನ ಪ್ರಶ್ನಿಸಿದವರ ಮೇಲೆ ಹಲ್ಲೆಗೆ ಮುಂದಾಗಿದೆ . ಈ ವೇಳೆ ಸಣ್ಣ ಸಂಘರ್ಷ ನಡೆದು ಅಲ್ಲಿಂದ ಯುವಕರು ತೆರಳಿದ್ದಾರೆ.ಬಳಿಕ ಮತ್ತೆ ಗುಂಪು ಗೂಡಿ ಹೊಡೆದಾಟ ನಡೆಸಿದ್ದು,  ಸಂಘರ್ಷ ತಾರಕಕ್ಕೇರಿ ಶಿವಮೊಗ್ಗದಿಂದ ಬಂದಿದ್ದ ಗುಂಪು ಸುನೀಲ್ ಹಾಗೂ ಶ್ರೀಕಾಂತ್ ಗೆ ಚಾಕುವಿನಿಂದ ಇರಿದು ಪರಾರಿಯಾಗಿದೆ 

ಈ ಸಂಬಂಧ  ಓಲ್ಡ್ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತೌಸೀಫ್  ಹಾಗೂ ನಾಲ್ವರನ್ನು ಬಂದಿಸಿ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.  

PREV
click me!

Recommended Stories

'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC
ನೆಲಮಂಗಲದಲ್ಲಿ ಹಸುವಿನ ಕತ್ತು ಕೊಯ್ದು ವಿಕೃತಿ ಮೆರೆದ ಕಳ್ಳರು; ಬೆಚ್ಚಿಬಿದ್ದ ಗ್ರಾಮಸ್ಥರು