Illegal Sand Mining: ರೈತರ ಜಮೀನಲ್ಲೇ ಅಕ್ರಮ ಮರಳುಗಾರಿಕೆ: ಗ್ರಾಮಸ್ಥರ ಆಕ್ರೋಶ

By Kannadaprabha NewsFirst Published Dec 23, 2021, 7:02 AM IST
Highlights

*  ಯಾವುದೇ ಕ್ರಮಕ್ಕೆ ಮುಂದಾಗದ ಕಂದಾಯ ಇಲಾಖೆಯ ಅಧಿಕಾರಿಗಳು
*  ಬೆಳೆ ನಾಶ ಮಾಡುತ್ತಿರುವ ಮರಳು ಕಳ್ಳರು
*  ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮರಳು ದಂಧೆ 
 

ಅಶೋಕ ಸೊರಟೂರ

ಲಕ್ಷ್ಮೇಶ್ವರ(ಡಿ.23):  ನದಿ, ಹಳ್ಳಗಳಲ್ಲಿ ‘ಅಕ್ರಮ ಮರಳುಗಾರಿಕೆ’(Illegal Sand Mining) ನಡೆಸುತ್ತಿದ್ದ ದಂಧೆಕೋರರ ಕಣ್ಣೀಗ ರೈತರ(Farmers) ಜಮೀನಿನ ಮೇಲೆ ಬಿದ್ದಿದೆ!. ಸಮೀಪದ ಬಟ್ಟೂರ ಗ್ರಾಮದ ಪಕ್ಕದಲ್ಲಿ ಹರಿಯುತ್ತಿರುವ ಹಳ್ಳದ ಅಕ್ಕಪಕ್ಕದ ಜಮೀನಿನಲ್ಲಿಯೇ(Land) ‘ಅಕ್ರಮ ಮರಳು ಗಣಿಗಾರಿಕೆ’ ಅವ್ಯಾಹತವಾಗಿ ನಡೆಯುತ್ತಿದ್ದರೂ ಕಂದಾಯ ಇಲಾಖೆಯ(Revenue Department) ಅಧಿಕಾರಿಗಳು ಮೌನಕ್ಕೆ ಶರಣಾಗಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಬಟ್ಟೂರ ಗ್ರಾಮದ ಪಕ್ಕದಲ್ಲಿ ಹರಿಯುತ್ತಿರುವ ಹಳ್ಳ ಹಾಗೂ ಪಕ್ಕದಲ್ಲಿನ ಪಟ್ಟಾ ಜಮೀನಿನಲ್ಲಿ ಹುದುಗಿರುವ ಮರಳನ್ನು ಅಕ್ರಮವಾಗಿ ಎತ್ತಿ ಟ್ರ್ಯಾಕ್ಟರ್‌ ಮತ್ತು ಟ್ರಕ್‌ಗಳ ಮೂಲಕ ಸಾಗಾಟದ ದಂಧೆ ಜೋರಾಗಿದೆ. ಕಳೆದ ಹಲವು ವರ್ಷಗಳಲ್ಲಿ ಹಳ್ಳದಲ್ಲಿ ಸಂಗ್ರಹವಾಗುತ್ತಿದ್ದ ಮರಳನ್ನು ಮಾತ್ರ ಕದ್ದುಮುಚ್ಚಿ ಮಾರಾಟ ಮಾಡುತ್ತಿದ್ದ ಅಕ್ರಮ ಮರಳುಗಳ್ಳರು, ಈಗ ಸಾಗುವಳಿ ಮಾಡುತ್ತಿರುವ ಜಮೀನಿನಲ್ಲಿ ಜೆಸಿಬಿ(JCB) ಮೂಲಕ ಕಂದಕ ತೋಡಿ ಅದರಲ್ಲಿ ಅಡಗಿರುವ ಮರಳನ್ನು ಎತ್ತಿ ರಾಜಾರೋಷವಾಗಿ ಸಾಗಿಸುತ್ತಿದ್ದಾರೆ.

ಕೊಪ್ಪಳ: ಗಣಿ ಸಚಿವ ಆಚಾರ್‌ ಸ್ವಕ್ಷೇತ್ರದಲ್ಲೇ ಎಗ್ಗಿಲ್ಲದೆ ನಡೀತಿದೆ ಅಕ್ರಮ ಮರಳುಗಾರಿಕೆ

ಮರಳು ದಂಧೆಕೋರರು ಜಮೀನಿನ ಮಾಲೀಕರಿಗೆ ಹಣದ(Money) ಆಸೆ ತೋರಿಸುತ್ತಾರೆ. ಬಳಿಕ ಮನಸೋ ಇಚ್ಛೆಯಾಗಿ ಮರಳು ತೆಗೆದು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾರೆ. ಈ ರೀತಿಯ ಮರಳುಗಾರಿಕೆಯಿಂದ ಜಮೀನಿನಲ್ಲಿನ ಬೆಳೆಯೂ(Crop Damage) ಹಾಳಾಗುತ್ತಿದೆ. ಅಲ್ಲದೆ ಕೃಷಿ ಯೋಗ್ಯ ಭೂಮಿ ಮೇಲ್ಪದರದ ಫಲವತ್ತಾದ ಮಣ್ಣಲ್ಲಿ ಹಳ್ಳ ತೋಡುವುದರಿಂದ ಜಮೀನು ನಾಶವಾಗುತ್ತಿದೆ. ಜೆಸಿಬಿ ಮೂಲಕ ಹೊಲದಲ್ಲಿ ಹಳ್ಳ ತೋಡಿ ಹಾಗೆ ಬಿಡುವುದರಿಂದ ನೀರು ತುಂಬಿಕೊಂಡಿರುವ ಗುಂಡಿಯ ಆಳ ಗೊತ್ತಾಗದೆ ಮಕ್ಕಳು ಈಜಲು ಹೋಗಿ ಗುಂಡಿಯಲ್ಲಿ ಬಿದ್ದು ಪ್ರಾಣ ಬಿಟ್ಟ ಉದಾಹರಣೆಗಳು ಸಾಕಷ್ಟಿದ್ದರೂ ಅಕ್ರಮ ಮರಳು ಗಣಿಗಾರಿಕೆ ಮಾಡುವವರಿಗೆ ಇದ್ಯಾವುದು ಕಣ್ಣಿಗೆ ಕಾಣಿಸುತ್ತಿಲ್ಲ.

ಬಟ್ಟೂರ ಗ್ರಾಮದ ಪಟ್ಟಾ ಜಮೀನಿನಲ್ಲಿ ಬಿತ್ತನೆ ಮಾಡಿದ್ದರೂ ಅದನ್ನೂ ಲೆಕ್ಕಿಸದೆ ಜೋಳ, ಶೇಂಗಾ, ಮೆಣಸಿನಕಾಯಿ, ಈರುಳ್ಳಿ ಮತ್ತು ಬಿಟಿ ಹತ್ತಿ ಬೆಳೆಯ ಹೊಲಗಳಲ್ಲಿ ಟ್ರ್ಯಾಕ್ಟರ್‌ಗಳನ್ನು ಹಾಯಿಸಿಕೊಂಡು ಹೋಗುವ ಮೂಲಕ ಬೆಳೆಯನ್ನು ನಾಶ ಮಾಡುತ್ತಿದ್ದಾರೆ. ಅಹೋರಾತ್ರಿ ಅಕ್ರಮವಾಗಿ ಮರಳು ಎತ್ತಿ ಹೊಲಗಳಲ್ಲಿ ಹಾದು ಹೋಗುತ್ತಿರುವ ಮರಳು ಕಳ್ಳರನ್ನು ಪ್ರಶ್ನಿಸಿದರೆ ಅವರಿಗೆ ಬೆದರಿಕೆ ಹಾಕುವ ಮೂಲಕ ದರ್ಪ ತೋರಿಸುತ್ತಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಲಕ್ಷ್ಮೇಶ್ವರ: ಮರಳು ಕಳ್ಳರಿಗೆ ಸ್ಮಶಾನವೂ ಸಾಲುತ್ತಿಲ್ಲ..!

ತಾಲೂಕಿನ ಕೆಲವೆಡೆ ಜಮೀನುಗಳಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿರುವ ಕುರಿತು ಮಾಹಿತಿ ಲಭಿಸಿದ್ದು, ಈ ಕುರಿತು ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ(Department of Mines and Geology) ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ. ಗುರುವಾರ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಅಂತ ತಹಸೀಲ್ದಾರ್‌ ಭ್ರಮರಾಂಬಾ ಗುಬ್ಬಿಶೆಟ್ಟಿ ತಿಳಿಸಿದ್ದಾರೆ.  

ಜಮೀನಿನಲ್ಲಿ ಅಕ್ರಮವಾಗಿ ಮರಳು ಎತ್ತಿ ಮಾರಾಟ ಮಾಡುವ ದಂಧೆ ಜೋರಾಗಿದ್ದರೂ ಕಂದಾಯ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಅಂತ ಹೆಸರು ಹೇಳಲು ಇಚ್ಛಿಸದ ಬಟ್ಟೂರ ಗ್ರಾಮಸ್ಥ ಹೇಳಿದ್ದಾರೆ. 

ಎತ್ತಿನ ಬಂಡಿಯಲ್ಲಿ ಅಕ್ರಮ ಮರಳು ಸಾಗಾಟ..!

ಹೂವಿನಹಡಗಲಿ ತಾಲೂಕಿನಲ್ಲಿ 7 ಮರಳು ಸ್ಟಾಕ್‌ಯಾರ್ಡ್‌ಗಳಲ್ಲಿ ಬೇಡಿಕೆಗೆ ತಕ್ಕಷ್ಟು ಮರಳು(Sand) ಸಂಗ್ರಹ ಇಲ್ಲ. ಜತೆಗೆ ಕೆಲವು ಸ್ಟಾಕ್‌ಯಾರ್ಡ್‌ಗಳು(Stockyard) ನಿಯಮಗಳನ್ನು ಉಲ್ಲಂಘನೆ ಮಾಡಿರುವ ಹಿನ್ನೆಲೆ ಬಂದ್‌ ಆಗಿವೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ಎತ್ತಿನ ಬಂಡಿಗಳ ಮೂಲಕ ತುಂಗಭದ್ರಾ ನದಿಯಲ್ಲಿ(Tungabhadra River) ಮರಳು ಲೂಟಿ ಮಾಡುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.
 

click me!