Mysuru: ಸರಗೂರು ಅಂಚೆ ಕಚೇರಿಯಲ್ಲಿ 1.3 ಕೋಟಿ ರೂಪಾಯಿ ಮಾಯ; CBIನಿಂದ ಇಬ್ಬರ ಬಂಧನ,

Published : Jul 09, 2026, 08:01 AM IST
Post Office

ಸಾರಾಂಶ

ಮೈಸೂರು ಜಿಲ್ಲೆಯ ಸರಗೂರು ಅಂಚೆ ಕಚೇರಿಯಲ್ಲಿ 44 ಉಳಿತಾಯ ಖಾತೆಗಳಿಂದ 1.3 ಕೋಟಿ ರು. ದುರ್ಬಳಕೆ ಮಾಡಿದ ಆರೋಪದ ಮೇಲೆ ಸಿಬಿಐ ಇಬ್ಬರು ನೌಕರರನ್ನು ಬಂಧಿಸಿದೆ. ಆರೋಪಿಗಳು ಗ್ರಾಹಕರ ಲಾಗಿನ್ ವಿವರಗಳನ್ನು ಬಳಸಿ ಹಣವನ್ನು ತಮ್ಮ ಮತ್ತು ಸಂಬಂಧಿಕರ ಖಾತೆಗಳಿಗೆ ವರ್ಗಾಯಿಸಿ ವಂಚನೆ ಎಸಗಿದ್ದಾರೆ. ಈ ಪ್ರಕರಣದ ಕುರಿತು ಸಿಬಿಐ ಹೆಚ್ಚಿನ ತನಿಖೆ ನಡೆಸುತ್ತಿದೆ.

ಬೆಂಗಳೂರು: ಅಂಚೆ ಕಚೇರಿಯಲ್ಲಿ 44 ಖಾತೆದಾರರ ಉಳಿತಾಯ ಖಾತೆಗಳ 1.3 ಕೋಟಿ ರು. ದುರ್ಬಳಕೆ ಮಾಡಿದ ಆರೋಪದಡಿ ಮೈಸೂರು ಜಿಲ್ಲೆಯ ಸರಗೂರು ಅಂಚೆ ಕಚೇರಿಯ ಇಬ್ಬರು ನೌಕರರನ್ನು ಸಿಬಿಐ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ.ಅಂಚೆ ಕಚೇರಿ ಸಹಾಯಕ ಪೋಸ್ಟ್ ಮಾಸ್ಟರ್‌ ಮತ್ತು ಪೋಸ್ಟ್ ಮ್ಯಾನ್‌ ಬಂಧಿತರು. ಇಬ್ಬರು ಆರೋಪಿಗಳನ್ನು ಸಿಬಿಐ ಅಧಿಕಾರಿಗಳು ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆದುಕೊಂಡಿದ್ದಾರೆ.

ಗುರುತಿನ ಚೀಟಿಗಳು, ಪಾಸ್‌ ವರ್ಡ್‌ ದುರ್ಬಳಕೆ

ಈ ಇಬ್ಬರು ನೌಕರರು 2022-2025ರ ಅವಧಿಯಲ್ಲಿ ಅಂಚೆ ಕಚೇರಿಯ ಉಳಿತಾಯ ಖಾತೆದಾರರ ಲಾಗಿನ್‌ ಗುರುತಿನ ಚೀಟಿಗಳು, ಪಾಸ್‌ ವರ್ಡ್‌ಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಗ್ರಾಹಕರ ಉಳಿತಾಯ ಖಾತೆಗಳ ಹಣವನ್ನು ಸ್ವಂತ ಖಾತೆಗಳು ಹಾಗೂ ತಮ್ಮ ಸಂಬಂಧಿಕರ ಖಾತೆಗಳಿಗೆ ಜಮೆ ಮಾಡಿಕೊಂಡು ವ್ಯವಸ್ಥಿತವಾಗಿ ವಂಚಿಸಿರುವುದು ಈವರೆಗಿನ ತನಿಖೆಯಿಂದ ತಿಳಿದು ಬಂದಿದೆ. ಆರೋಪಿಗಳು ಇತರೆ ಗ್ರಾಹಕರ ಖಾತೆಗಳ ಹಣವನ್ನು ದುರುಪಯೋಗಪಡಿಸಿಕೊಂಡಿರುವ ಶಂಕೆ ಇದ್ದು, ಹೆಚ್ಚಿನ ತನಿಖೆಯಿಂದ ಮತ್ತಷ್ಟು ವಿಚಾರಗಳು ಬಯಲಿಗೆ ಬರಲಿವೆ.

ಇದನ್ನೂ ಓದಿ: 'ನಿಮ್ಮನ್ನ ಸುಮ್ನೆ ಬಿಡೋಲ್ಲ..' ಮಂಡ್ಯ ಭ್ರಷ್ಟ ಪಿಡಿಒ ನಿವಾಸಗಳ ಮೇಲೆ ಲೋಕಾಯುಕ್ತ ಪೊಲೀಸರ ದಾಳಿ!

ಇಬ್ಬರು ಆರೋಪಿಗಳ ಬಂಧನ

ಸರಗೂರು ಅಂಚೆ ಕಚೇರಿಯಲ್ಲಿ ಗ್ರಾಹಕರ ಹಣ ದುರ್ಬಳಕೆ ಸಂಬಂಧ ಕಳೆದ ಮಾರ್ಚ್‌ 6ರಂದು ನೀಡಲಾದ ಲಿಖಿತ ದೂರಿನ ಮೇರೆಗೆ ವಂಚನೆ, ನಂಬಿಕೆ ದ್ರೋಹ, ಕ್ರಿಮಿನಲ್‌ ಪಿತೂರಿ, ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಇದೀಗ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸಿಬಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: Bengaluru: 2ನೇ ವಿಮಾನ ನಿಲ್ದಾಣ ಎಲ್ಲಿ? ಕನಕಪುರ, ನೆಲಮಂಗಲ ರಸ್ತೆಯ ಈ ಗ್ರಾಮಗಳು ಶಾರ್ಟ್‌ಲಿಸ್ಟ್‌

PREV
Read more Articles on
click me!

Recommended Stories

Belagavi border dispute: ಕರ್ನಾಟಕದಲ್ಲಿನ ಮರಾಠಿ ಹೋರಾಟಗಾರರ ಪರ ಮಹಾರಾಷ್ಟ್ರ ಸಿಎಂ ದೊಡ್ಡ ಘೋಷಣೆ! ಸುಪ್ರೀಂಗೆ ಅರ್ಜಿ
NH 169: ತನಿಕೋಡ್‌ನಿಂದ SK ಬಾರ್ಡರ್‌ವರೆಗೆ ಭಾರೀ ವಾಹನಗಳಿಗೆ ನಿಷೇಧ; ಪರ್ಯಾಯ ಮಾರ್ಗ ಹೀಗಿದೆ