
ಧರ್ಮಸ್ಥಳದ ಈ ಬುರುಡೆ ಷಡ್ಯಂತ್ರದ ಕಥೆ ಈಗ ಯಾರೂ ನಿರೀಕ್ಷಿಸದಿದ್ದ ಹಂತಕ್ಕೆ ಬಂದು ನಿಂತಿದೆ.. ಅದಕ್ಕೆ ಕಾರಣ ಏನು?ಬುರುಡೆ ಗ್ಯಾಂಗಿನ ಕತೆಗೆ, ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಕ್ತಾ ಇದೆ.. ಇಲ್ಲಿಂದ ಮುಂದೆ ಈ ಕಹಾನಿ ಎತ್ತ ಕಡೆ ಸಾಗಲಿದೆ?
ಇಡೀ ದೇಶದ ಗಮನ ಸೆಳೆದ ಧರ್ಮಸ್ಥಳದ ಬುರುಡೆ ಪ್ರಕರಣದಲ್ಲಿ ಮತ್ತೊಂದು ತಿರುವು ಎದುರಾಗಿದೆ. ನೂರಾರು ಶವಗಳ ಹೂತಿಡಲಾಗಿದೆ ಎಂದು ಪ್ರತ್ಯಕ್ಷನಾದ ಮಾಸ್ಕ್ ಮ್ಯಾನ್ ಚಿನ್ನಯ್ಯ ಬಳಿಕ ಅರೆಸ್ಟ್ ಆಗಿ ಇಡೀ ಪ್ರಕರಣಕ್ಕೆ ತಿರುವು ಸಿಕ್ಕಿತ್ತು. ಇದೀಗ ಮಾಸ್ಕ್ ಮ್ಯಾನ್ ಚಿನ್ನಯ್ಯ ಧರ್ಮಸ್ಥಳ ವಿರುದ್ಧ ಷಡ್ಯಂತ್ರದಲ್ಲಿ ಕೇರಳ ಫಂಡಿಂಗ್, ಚಿತ್ರುದುರ್ಗ ಕನೆತ್ರನ್ ಸೇರಿದಂತೆ ಹಲವು ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾನೆ. ಬರೋಬ್ಬರಿ 200 ಕೋಟಿ ರೂಪಾಯಿ ಡೀಲ್ ಸೀಕ್ರೆಟ್ ಏನು?