ರಾಜ್ಯವನ್ನು ಬರಗಾಲ ಪೀಡಿತವೆಂದು ಘೋಷಿಸಲಿ: ಬಿ.ಎನ್‌.ಬಚ್ಚೇಗೌಡ

By Kannadaprabha NewsFirst Published Aug 23, 2023, 3:30 AM IST
Highlights

ಈ ಬಾರಿ ಮುಂಗಾರು ಕೈಕೊಟ್ಟ ಹಿನ್ನೆಲೆ ಬಿತ್ತನೆಕಾರ್ಯ ಕುಂಠಿತಗೊಂಡಿದೆ. ಹೀಗಾಗಿ ರಾಜ್ಯವನ್ನು ಪರಪೀಡಿತ ವಲಯಕ್ಕೆ ಸೇರಿಸಿ, ಕಾಮಗಾರಿಗಳನ್ನು ಪ್ರಾರಂಭಿಸಲು ಜಿಲ್ಲಾ ಪಂಚಾಯಿತಿಗೆ ಸೂಚಿಸಬೇಕು. ಇಲ್ಲವಾದಲ್ಲಿ ಜನತೆ ದಂಗೆಯೇಳುತ್ತಾರೆ ಎಂದ ಸಂಸದ ಬಿ.ಎನ್‌.ಬಚ್ಚೇಗೌಡ 

ಚಿಕ್ಕಬಳ್ಳಾಪುರ(ಆ.23):  ಕರ್ನಾಟಕ ರಾಜ್ಯವನ್ನು ಬರಗಾಲ ಪೀಡಿತ ಎಂದು ಕೆಂದ್ರ ಮತ್ತು ರಾಜ್ಯ ಸರ್ಕಾರಗಳು ಘೋಷಣೆ ಮಾಡುವಂತೆ ಸಂಸದ ಬಿ.ಎನ್‌.ಬಚ್ಚೇಗೌಡ ಒತ್ತಾಯಿಸಿದರು. ನಗರ ಹೊರವಲಯದ ಜಿಲ್ಲಾಡಳಿತ ಭವನದ ಸರ್‌.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ ಬ್ಯಾಂಕರ್‌ಗಳ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಈ ಬಾರಿ ಮುಂಗಾರು ಕೈಕೊಟ್ಟಹಿನ್ನೆಲೆ ಬಿತ್ತನೆಕಾರ್ಯ ಕುಂಠಿತಗೊಂಡಿದೆ. ಹೀಗಾಗಿ ರಾಜ್ಯವನ್ನು ಪರಪೀಡಿತ ವಲಯಕ್ಕೆ ಸೇರಿಸಿ, ಕಾಮಗಾರಿಗಳನ್ನು ಪ್ರಾರಂಭಿಸಲು ಜಿಲ್ಲಾ ಪಂಚಾಯಿತಿಗೆ ಸೂಚಿಸಬೇಕು. ಇಲ್ಲವಾದಲ್ಲಿ ಜನತೆ ದಂಗೆಯೇಳುತ್ತಾರೆ ಎಂದರು.
ಕೇಂದ್ರ ಅಕ್ಕಿ ಕೊಡದಿರುವುದು ಅನ್ಯಾಯ

ಭಾರತೀಯ ಆಹಾರ ನಿಗಮದ ಬೆಂಗಳೂರು ವಿಭಾಗೀಯ ಕಚೇರಿ ನಿಗದಿ ಮಾಡಿದಷ್ಟುಹಣಕೊಡಲು ಮುಂದಾಗಿದ್ದರೂ ಕುಂಟು ನೆಪಗಳನ್ನು ಹೇಳಿಕೊಂಡು ಅಕ್ಕಿ ಕೊಡಲು ನಿರಾಕರಿಸಿರುವುದು ರಾಜ್ಯದ ಜನತೆಗೆ ಮಾಡಿದ ಅಪಮಾನ. ಆಹಾರ ವಿತರಣೆಯಲ್ಲಿ ರಾಜಕಾರಣ ಮಾಡುವುದು ಬಿಜೆಪಿಗೆ ಶೋಭೆ ತರುವುದಿಲ್ಲ. ಇಷ್ಟರ ನಡುವೆಯೂ ರಾಜ್ಯ ಸರ್ಕಾರ ನುಡಿದಂತೆ ನಡೆಯುತ್ತಿದೆ. ಕೇಂದ್ರದ 5 ಕೆ.ಜಿ. ಅಕ್ಕಿಯ ಜತೆಗೆ ತನ್ನ ವಾಗ್ದಾನದ 5 ಕೆಜಿ ಅಕ್ಕಿಯ ಹಣವನ್ನು ಫಲಾನುಭವಿಯ ಖಾತೆಗೆ ಡಿಬಿಟಿ ಮೂಲಕ ನೇರವಾಗಿ ವರ್ಗಾವಣೆ ಮಾಡುತ್ತಿದೆ. ಈ ಹಣಕ್ಕೆ 5ಕೆಜಿ ಅಕ್ಕಿ ಬರುವುದಿಲ್ಲಾ .ಬೆಲೆ ಹೆಚ್ಚಾಗಿರುವುದರಿಂದ ಅಕ್ಕಿಯನ್ನೆ ನೀಡುವಂತೆ ಹೇಳಿದರು.

ಬಿಗ್ 3ಯಲ್ಲಿ ವರದಿ ಮಾಡುವಂತೆ ಜಡ್ಜ್ ಸಲಹೆ: 6 ವರ್ಷದಿಂದ ಮುಗಿಯದ ಕಾಮಗಾರಿ 2 ವರ್ಷದಲ್ಲಿ ಕಂಪ್ಲೀಟ್..!

ರಾಜ್ಯ ಸರ್ಕಾರ ರೈತರ ಹಿತವನ್ನು ಕಡೆಗಣಿಸಿ ತಮಿಳುನಾಡಿಗೆ ನೀರು ಬಿಡಲು ಮುಂದಾಗಿರುವುದು ತಪ್ಪು. ಕೆ.ಆರ್‌.ಎಸ್‌ನಲ್ಲಿ 105 ಟಿಎಂಸಿ ನೀರಿನ ಸಂಗಗ್ರಹವಿದ್ದು ಒಳಹರಿವು ಕಡಿಮೆಯಾಗಿದ್ದರೂ ಹೊರಹರಿವು ಹೆಚ್ಚಾಗಿರುವುದು ಅವೈಜ್ಞಾನಿಕ ನಡೆಯಾಗಿದೆ. ಕಾವೇರಿ ಕೊಳ್ಳದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು ಕೆ.ಆರ್‌ಎಸ್‌ ತುಂಬಿಲ್ಲ ಎನ್ನುವುದು ಸರ್ಕಾರಕ್ಕೆ ತಿಳಿಯಬೇಕಿತ್ತು. ಕಾವೇರಿ ಕೇವಲ ಮಂಡ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ಸರಕಾರ ಕೂಡಲೇ ತಮಿಳುನಾಡಿಗೆ ನೀರು ಬಿಡುವುದನ್ನು ನಿಲ್ಲಿಸಿ ರೈತರ ಹಿತ ಕಾಯಬೇಕು ಎಂದರು.

ಲೋಕಸಭೆಗೆ ನನಗೆ ಟಿಕೆಟ್‌ ನೀಡಲ್ಲಾ

ನನಗೆ ಈಗ 81 ವರ್ಷ ಆಗಿದ್ದು, ಪ್ರಧಾನಿ ಮೋದಿ ಪ್ರಕಾರ 75 ವರ್ಷ ದಾಟಿದವರಿಗೆ ಟಿಕೆಟ್‌ ನೀಡುವುದಿಲ್ಲವಾದ್ದರಿಂದ ನನಗೆ ಟಿಕೆಟ್‌ ಕೊಡಲ್ಲ. ಆದರೂ ಚಿಂತೆಯಿಲ್ಲ, ರಾಜಕಾರಣದಲ್ಲಿ ಸಕ್ರಿಯವಾಗಿ ಇರುತ್ತೇನೆ. ನನ್ನ ಮಗ ಶರತ್‌ ಬಚ್ಚೇಗೌಡ ಕಾಂಗ್ರೆಸ್‌ನಲ್ಲಿ ಇರುವುದು ನಿಜ. ಅದು ಅವನ ರಾಜಕೀಯ ಜೀವನ. ನಾನು ಬಿಜೆಪಿಯಲ್ಲಿದ್ದೇನೆ. ಕಾಂಗ್ರೆಸ್‌ಗೆ ಬರುವುದು, ಹೋಗುವುದು ಏನೂ ಇಲ್ಲ ಎಂದು ಹೇಳುವ ಮೂಲಕ ಇನ್ನೂ ಬಿಜೆಪಿಯಲ್ಲೇ ಇದ್ದೇನೆ ಎಂದರು.

ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ

ನಾನು ಇಲ್ಲಿಗೆ ಬರದೇ ಇರಲು ಕಾರಣ ಬಿಜೆಪಿ ಸರಕಾರದ ಅವಧಿಯಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದವರು ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವ ಕಾರಣ ಯಾವ ಕಾರ್ಯಕ್ರಮಗಳಿಗೂ ಹಾಜರಾಗಿಲ್ಲ. ಒಬ್ಬ ಸಂಸದರಿಗೆ ಅಧಿಕೃತ ಆಹ್ವಾನ ಇಲ್ಲ, ಯಾವುದೇ ಕರಪತ್ರಗಳಲ್ಲಿ ಹೆಸರಿಲ್ಲ ಎಂದರೆ ಹೇಗೆ ಬರಲಾಗುತ್ತೆ. ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್‌ ಹೆಸರು ಹೇಳದೆ ಹರಿಹಾಯ್ದರು.

ರಾಜ್ಯದ ಮುಖ್ಯಮಂತ್ರಿಯಾಗಿರುವ ಸಿದ್ಧರಾಮಯ್ಯ ಸಮರ್ಥ ನಾಯಕರಾಗಿದ್ದು ಅವರಿಗೆ ರಾಜ್ಯದ ಆರ್ಥಿಕತೆಯ ಆಗುಹೋಗುಗಳ ಬಗ್ಗೆ ಸ್ಪಷ್ಟಚಿತ್ರಣವಿದೆ. 5 ಗ್ಯಾರಂಟಿಗಳಿಂದ ಜನತೆಗೆ ಅನಾನುಕೂಲಕ್ಕಿಂತ ಅನುಕೂಲವೇ ಹೆಚ್ಚಿದೆ. ಯಾವ ಕಾರಣಕ್ಕೂ ರಾಜ್ಯವನ್ನು ದಿವಾಳಿ ಆಗಲು ಅವರು ಬಿಡುವುದಿಲ್ಲ ಎಂಬ ನಂಬಿಕೆ ನನಗಿದೆ.ಈ ವಿಚಾರದಲ್ಲಿ ಬಿಜೆಪಿ ಜೆಡಿಎಸ್‌ ಟೀಕೆ ಅನಗತ್ಯ ಎಂದರು.

ಸಚಿವ ಎಂ.ಸಿ.ಸುಧಾಕರ್‌ ಅಭಿವೃದ್ದಿಯ ಹರಿಕಾರ: ಸಂಸದ ಮುನಿಸ್ವಾಮಿ

ಬಿಜೆಪಿ ಈಗ ಒಡೆದ ಮನೆ

ಪೂರ್ಣಬಹುಮತ ಪಡೆದಿರುವ ಕಾಂಗ್ರೆಸ್‌ ಸರಕಾರದ ಆಡಳಿತ ವೈಖರಿಯನ್ನು ಟೀಕಿಸುತ್ತಿರುವ ಬಿಜೆಪಿಯದ್ದು ಒಡೆದ ಮನೆಯ ಮನಸ್ಥಿತಿಯಾಗಿದೆ. ನಮ್ಮದು ಶಿಸ್ತಿನ ಪಕ್ಷ ಎಂದು ಹೇಳಿಕೊಳ್ಳುವ ನಾಯಕರಿಗೆ 3 ತಿಂಗಳು ಮುಗಿದರೂ ವಿರೋಧ ಪಕ್ಷದ ನಾಯಕರನ್ನು ಆರಿಸಲು ಕಷ್ಟವಾಗಿದೆ. ಇದರಂತೆ ರಾಜ್ಯ ಬಿಜೆಪಿ ಅಧ್ಯಕ್ಷರನ್ನು ಆರಿಸಲು ಕೂಡ ಆಗಿಲ್ಲ. ನನ್ನ 50 ವರ್ಷದ ರಾಜಕೀಯ ಅನುಭವನದಲ್ಲಿ ಹೇಳುವುದಾದರೆ ಎಚ್‌.ಡಿ.ಕುಮಾರಸ್ವಾಮಿ ಬಿಜೆಪಿ ಸೇರುವುದಿಲ್ಲ. ದೇವೇಗೌಡರು ಬರುಕಿರುವವರೆಗೆ ಜೆಡಿಎಸ್‌ಗೆ ಅವಸಾನದ ಭಯವಿಲ್ಲ ಎಂದರು.

ಮೋದಿ ಪ್ರಧಾನಿ

ಈಗ ದೇಶದಲ್ಲಿ ಪ್ರಧಾನಿ ಮೋದಿ ಹವಾ ಇದೆ. ದೇಶದಲ್ಲಿ ಕ್ಷಿಪ್ರಗತಿಯಲ್ಲಿ ರಾಜಕೀಯ ಕ್ರಾಂತಿ ಆಗುತ್ತಿರುವುದರಿಂದ ಇಂಡಿಯಾ ವರ್ಸಸ್‌ ಎನ್‌ಡಿಎ ನಡುವೆ ಸ್ಪರ್ಧೆಯಿದೆ. ಚುನಾವಣೆಗೆ ಇನ್ನೂ 6 ತಿಂಗಳು ಕಾಲಾವಕಾಶ ಇರುವ ಕಾರಣ ಮೋದಿ ಮತ್ತೊಮ್ಮೆ ಆರಿಸಿ ಬರುತ್ತಾರೋ ಇಲ್ಲವೋ ಎಂದು ಈಗಲೇ ಹೇಳಲಾಗುವುದಿಲ್ಲ. ಬದಲಾವಣೆ ಅಂತೂ ಆಗಲಿದೆ ಎಂದು ಹೇಳಿದರು.

click me!