2 ಕೋಟಿ ವಿಮೆ ಹಣಕ್ಕಾಗಿ ನಿವೃತ್ತ ಯೋಧನ ಕೊಲೆ: ಪೋಸ್ಟ್ ಮಾರ್ಟಮ್ ರಿಪೋರ್ಟ್ ತಿರುಚಿ ಸಿಕ್ಕಿಬಿದ್ದ ಹೆಂಡತಿ!

2 ಕೋಟಿ ವಿಮೆ ಹಣಕ್ಕಾಗಿ ನಿವೃತ್ತ ಯೋಧನ ಕೊಲೆ: ಪೋಸ್ಟ್ ಮಾರ್ಟಮ್ ರಿಪೋರ್ಟ್ ತಿರುಚಿ ಸಿಕ್ಕಿಬಿದ್ದ ಹೆಂಡತಿ!

Published : Jun 16, 2026, 08:53 PM IST
ದೇಶ ಕಾಯ್ದ ಮಾಜಿ ಯೋಧ ಸಂದೀಪ್ ಅವರ ಸಾವು ನೈಸರ್ಗಿಕ ಎಂದು ಭಾವಿಸಲಾಗಿತ್ತು. ಆದರೆ ಮೂರು ತಿಂಗಳ ನಂತರ, 2 ಕೋಟಿ ವಿಮೆ ಹಣಕ್ಕಾಗಿ ಪತ್ನಿ ಸುಮಾ ಹಾಗೂ ಆಕೆಯ ಗೆಳೆಯ ವಿಷ ನೀಡಿ ಕೊಂದಿರುವ ಭಯಾನಕ ಸತ್ಯ ಬಯಲಾಗಿದೆ. ಹಣದ ಹಂಚಿಕೆ ಜಗಳದಿಂದಾಗಿ ಈ ಕೊಲೆ ರಹಸ್ಯವು ವಿಡಿಯೋ ಮೂಲಕ ಬಹಿರಂಗಗೊಂಡಿದೆ.

ದೇಶ ಕಾಯುವ ಸೈನಿಕ ಗಡಿಯಲ್ಲಿ ಶತ್ರುಗಳ ಗುಂಡಿಗೆ ಎದೆಯೊಡ್ಡಿ ಬದುಕಿ ಬಂದಿದ್ದ. ಆದರೆ, ಸ್ವಂತ ಮನೆಯಲ್ಲೇ ಆತನ ಜೀವಕ್ಕೆ ಸಂಚು ರೂಪಿಸಲಾಗಿತ್ತು ಎನ್ನುವುದು ಯಾರಿಗೂ ತಿಳಿದಿರಲಿಲ್ಲ. ಹಣದ ಹಪಾಹಪಿ ಮತ್ತು ಅನೈತಿಕ ಸಂಬಂಧದ ವಿಷಜಾಲಕ್ಕೆ ಬಲಿಯಾದ ಮಾಜಿ ಯೋಧನ ಸಾವಿನ ರಹಸ್ಯ ಈಗ ಮೂರು ತಿಂಗಳ ನಂತರ ಬಯಲಾಗಿದೆ.

ಏನಿದು ಘಟನೆ?
ನಾಲ್ಕು ವರ್ಷಗಳ ಹಿಂದೆ ನಿವೃತ್ತಿ ಹೊಂದಿ ಬಂದಿದ್ದ ಸಂದೀಪ್ ಎಂಬ ಮಾಜಿ ಯೋಧ ತನ್ನ ಪತ್ನಿ ಸುಮ ಮತ್ತು ಇಬ್ಬರು ಮಕ್ಕಳೊಂದಿಗೆ ನೆಮ್ಮದಿಯ ಜೀವನ ನಡೆಸುತ್ತಿದ್ದರು. ಒಂದು ದಿನ ಜಾತ್ರೆಗೆ ಹೋಗುತ್ತಿದ್ದಾಗ ಅವರಿಗೆ ಸಣ್ಣ ಅಪಘಾತ ಸಂಭವಿಸುತ್ತದೆ. ಆಸ್ಪತ್ರೆಗೆ ಸೇರಿದ ಅವರು ಎರಡು ದಿನದ ನಂತರ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪುತ್ತಾರೆ. ಆರಂಭದಲ್ಲಿ ಪೋಸ್ಟ್ ಮಾರ್ಟಮ್ ವರದಿ ಕೂಡ ಇದು ನೈಸರ್ಗಿಕ ಸಾವು ಎಂದೇ ಹೇಳಿತ್ತು.

ಸಂಚಿನ ಮಾಸ್ಟರ್ ಪ್ಲಾನ್:
ಸಂದೀಪ್ ಅವರ ಹೆಸರಿನಲ್ಲಿದ್ದ 2 ಕೋಟಿ ರೂಪಾಯಿ ಇನ್ಶುರೆನ್ಸ್ (ವಿಮೆ) ಹಣದ ಮೇಲೆ ಸುಮ ಕಣ್ಣು ಬಿದ್ದಿತ್ತು. ಇದಕ್ಕಾಗಿ ತನ್ನ ಗೆಳೆಯ ಪುಂಡಲೀಕನ ಜೊತೆ ಸೇರಿ ಸ್ಕೆಚ್ ಹಾಕಿದ್ದಳು. ಅಪಘಾತವನ್ನು ಕೇವಲ ನೆಪವಾಗಿ ಬಳಸಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಸಂದೀಪ್‌ಗೆ ವಿಷವುಣಿಸಿ ಕೊಲೆ ಮಾಡಲಾಗಿತ್ತು. ನಂತರ ಹಣದ ಬಲದಿಂದ ವೈದ್ಯಕೀಯ ವರದಿಯನ್ನು ಕೂಡ ಬದಲಾಯಿಸುವಲ್ಲಿ ಈ ಕಿಡಿಗೇಡಿಗಳು ಯಶಸ್ವಿಯಾಗಿದ್ದರು.

ಬಯಲಾದ ಮರ್ಡರ್ ಮಿಸ್ಟರಿ:
ಸಂದೀಪ್ ಅವರ ಅಂತ್ಯಸಂಸ್ಕಾರ ಮುಗಿದು ಮೂರು ತಿಂಗಳು ಕಳೆದಿತ್ತು. ವಿಮೆ ಹಣ ಕೈಗೆ ಬಂದಾಗ ಸುಮ ಮತ್ತು ಪುಂಡಲೀಕನ ನಡುವೆ ಪಾಲಿನ ವಿಚಾರದಲ್ಲಿ ಜಗಳ ಶುರುವಾಗಿದೆ. ಹಣಕ್ಕಾಗಿ ಸುಮಳ ಮೇಲೆ ಸಿಟ್ಟಿಗೆದ್ದ ಪುಂಡಲೀಕ, ಕೊಲೆಯ ಸಂಪೂರ್ಣ ವಿವರವಿರುವ ವಿಡಿಯೋವೊಂದನ್ನು ಮಾಡಿ ಪೊಲೀಸರಿಗೆ ತಲುಪುವಂತೆ ಮಾಡಿದ್ದಾನೆ. ಈ ವಿಡಿಯೋ ಆಧಾರದ ಮೇಲೆ ಪೊಲೀಸರು ಕೇಸ್ ರೀ-ಓಪನ್ ಮಾಡಿದಾಗ ಈ ಬೆಚ್ಚಿಬೀಳಿಸುವ ಸತ್ಯ ಬಯಲಾಗಿದೆ.

ಹಣಕ್ಕಾಗಿ ಗಂಡನನ್ನೇ ಕೊಂದ ಸುಮ ಮತ್ತು ಆಕೆಗೆ ಸಾಥ್ ನೀಡಿದ ಪುಂಡಲೀಕ ಈಗ ಜೈಲು ಪಾಲಾಗಿದ್ದಾರೆ. ದೇಶ ಕಾಯುವ ಯೋಧನಿಗೆ ಮನೆಯಲ್ಲೇ ಕಂಟಕ ಎದುರಾದ ಈ ಕಥೆ ನಾಗರಿಕ ಸಮಾಜವೇ ತಲೆತಗ್ಗಿಸುವಂತಿದೆ.

20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
27:29ಡಿಕೆ ಸರ್ಕಾರ.. ಹೊಸ ಅವತಾರ: ಮೀನಹೆಜ್ಜೆ.. ಜಾಣಮೌನ.. ಮಿಂಚಿನ ಬಾಣ: ಹೇಗಿದೆ ಬಂಡೆ ಆಡಳಿತ?
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
Read more