2 ಕೋಟಿ ವಿಮೆ ಹಣಕ್ಕಾಗಿ ನಿವೃತ್ತ ಯೋಧನ ಕೊಲೆ: ಪೋಸ್ಟ್ ಮಾರ್ಟಮ್ ರಿಪೋರ್ಟ್ ತಿರುಚಿ ಸಿಕ್ಕಿಬಿದ್ದ ಹೆಂಡತಿ!

2 ಕೋಟಿ ವಿಮೆ ಹಣಕ್ಕಾಗಿ ನಿವೃತ್ತ ಯೋಧನ ಕೊಲೆ: ಪೋಸ್ಟ್ ಮಾರ್ಟಮ್ ರಿಪೋರ್ಟ್ ತಿರುಚಿ ಸಿಕ್ಕಿಬಿದ್ದ ಹೆಂಡತಿ!

Published : Jun 16, 2026, 08:53 PM IST
ದೇಶ ಕಾಯ್ದ ಮಾಜಿ ಯೋಧ ಸಂದೀಪ್ ಅವರ ಸಾವು ನೈಸರ್ಗಿಕ ಎಂದು ಭಾವಿಸಲಾಗಿತ್ತು. ಆದರೆ ಮೂರು ತಿಂಗಳ ನಂತರ, 2 ಕೋಟಿ ವಿಮೆ ಹಣಕ್ಕಾಗಿ ಪತ್ನಿ ಸುಮಾ ಹಾಗೂ ಆಕೆಯ ಗೆಳೆಯ ವಿಷ ನೀಡಿ ಕೊಂದಿರುವ ಭಯಾನಕ ಸತ್ಯ ಬಯಲಾಗಿದೆ. ಹಣದ ಹಂಚಿಕೆ ಜಗಳದಿಂದಾಗಿ ಈ ಕೊಲೆ ರಹಸ್ಯವು ವಿಡಿಯೋ ಮೂಲಕ ಬಹಿರಂಗಗೊಂಡಿದೆ.

ದೇಶ ಕಾಯುವ ಸೈನಿಕ ಗಡಿಯಲ್ಲಿ ಶತ್ರುಗಳ ಗುಂಡಿಗೆ ಎದೆಯೊಡ್ಡಿ ಬದುಕಿ ಬಂದಿದ್ದ. ಆದರೆ, ಸ್ವಂತ ಮನೆಯಲ್ಲೇ ಆತನ ಜೀವಕ್ಕೆ ಸಂಚು ರೂಪಿಸಲಾಗಿತ್ತು ಎನ್ನುವುದು ಯಾರಿಗೂ ತಿಳಿದಿರಲಿಲ್ಲ. ಹಣದ ಹಪಾಹಪಿ ಮತ್ತು ಅನೈತಿಕ ಸಂಬಂಧದ ವಿಷಜಾಲಕ್ಕೆ ಬಲಿಯಾದ ಮಾಜಿ ಯೋಧನ ಸಾವಿನ ರಹಸ್ಯ ಈಗ ಮೂರು ತಿಂಗಳ ನಂತರ ಬಯಲಾಗಿದೆ.

ಏನಿದು ಘಟನೆ?
ನಾಲ್ಕು ವರ್ಷಗಳ ಹಿಂದೆ ನಿವೃತ್ತಿ ಹೊಂದಿ ಬಂದಿದ್ದ ಸಂದೀಪ್ ಎಂಬ ಮಾಜಿ ಯೋಧ ತನ್ನ ಪತ್ನಿ ಸುಮ ಮತ್ತು ಇಬ್ಬರು ಮಕ್ಕಳೊಂದಿಗೆ ನೆಮ್ಮದಿಯ ಜೀವನ ನಡೆಸುತ್ತಿದ್ದರು. ಒಂದು ದಿನ ಜಾತ್ರೆಗೆ ಹೋಗುತ್ತಿದ್ದಾಗ ಅವರಿಗೆ ಸಣ್ಣ ಅಪಘಾತ ಸಂಭವಿಸುತ್ತದೆ. ಆಸ್ಪತ್ರೆಗೆ ಸೇರಿದ ಅವರು ಎರಡು ದಿನದ ನಂತರ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪುತ್ತಾರೆ. ಆರಂಭದಲ್ಲಿ ಪೋಸ್ಟ್ ಮಾರ್ಟಮ್ ವರದಿ ಕೂಡ ಇದು ನೈಸರ್ಗಿಕ ಸಾವು ಎಂದೇ ಹೇಳಿತ್ತು.

ಸಂಚಿನ ಮಾಸ್ಟರ್ ಪ್ಲಾನ್:
ಸಂದೀಪ್ ಅವರ ಹೆಸರಿನಲ್ಲಿದ್ದ 2 ಕೋಟಿ ರೂಪಾಯಿ ಇನ್ಶುರೆನ್ಸ್ (ವಿಮೆ) ಹಣದ ಮೇಲೆ ಸುಮ ಕಣ್ಣು ಬಿದ್ದಿತ್ತು. ಇದಕ್ಕಾಗಿ ತನ್ನ ಗೆಳೆಯ ಪುಂಡಲೀಕನ ಜೊತೆ ಸೇರಿ ಸ್ಕೆಚ್ ಹಾಕಿದ್ದಳು. ಅಪಘಾತವನ್ನು ಕೇವಲ ನೆಪವಾಗಿ ಬಳಸಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಸಂದೀಪ್‌ಗೆ ವಿಷವುಣಿಸಿ ಕೊಲೆ ಮಾಡಲಾಗಿತ್ತು. ನಂತರ ಹಣದ ಬಲದಿಂದ ವೈದ್ಯಕೀಯ ವರದಿಯನ್ನು ಕೂಡ ಬದಲಾಯಿಸುವಲ್ಲಿ ಈ ಕಿಡಿಗೇಡಿಗಳು ಯಶಸ್ವಿಯಾಗಿದ್ದರು.

ಬಯಲಾದ ಮರ್ಡರ್ ಮಿಸ್ಟರಿ:
ಸಂದೀಪ್ ಅವರ ಅಂತ್ಯಸಂಸ್ಕಾರ ಮುಗಿದು ಮೂರು ತಿಂಗಳು ಕಳೆದಿತ್ತು. ವಿಮೆ ಹಣ ಕೈಗೆ ಬಂದಾಗ ಸುಮ ಮತ್ತು ಪುಂಡಲೀಕನ ನಡುವೆ ಪಾಲಿನ ವಿಚಾರದಲ್ಲಿ ಜಗಳ ಶುರುವಾಗಿದೆ. ಹಣಕ್ಕಾಗಿ ಸುಮಳ ಮೇಲೆ ಸಿಟ್ಟಿಗೆದ್ದ ಪುಂಡಲೀಕ, ಕೊಲೆಯ ಸಂಪೂರ್ಣ ವಿವರವಿರುವ ವಿಡಿಯೋವೊಂದನ್ನು ಮಾಡಿ ಪೊಲೀಸರಿಗೆ ತಲುಪುವಂತೆ ಮಾಡಿದ್ದಾನೆ. ಈ ವಿಡಿಯೋ ಆಧಾರದ ಮೇಲೆ ಪೊಲೀಸರು ಕೇಸ್ ರೀ-ಓಪನ್ ಮಾಡಿದಾಗ ಈ ಬೆಚ್ಚಿಬೀಳಿಸುವ ಸತ್ಯ ಬಯಲಾಗಿದೆ.

ಹಣಕ್ಕಾಗಿ ಗಂಡನನ್ನೇ ಕೊಂದ ಸುಮ ಮತ್ತು ಆಕೆಗೆ ಸಾಥ್ ನೀಡಿದ ಪುಂಡಲೀಕ ಈಗ ಜೈಲು ಪಾಲಾಗಿದ್ದಾರೆ. ದೇಶ ಕಾಯುವ ಯೋಧನಿಗೆ ಮನೆಯಲ್ಲೇ ಕಂಟಕ ಎದುರಾದ ಈ ಕಥೆ ನಾಗರಿಕ ಸಮಾಜವೇ ತಲೆತಗ್ಗಿಸುವಂತಿದೆ.

53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
56:36ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?
Read more