Bandipura Elephant Camp : ಉಪಟಳ ನೀಡುತ್ತಿದ್ದ 8 ಸಾಕಾನೆ ಬಂಡೀಪುರಕ್ಕೆ

Kannadaprabha News   | Asianet News
Published : Dec 18, 2021, 08:05 AM ISTUpdated : Dec 18, 2021, 08:13 AM IST
Bandipura Elephant Camp : ಉಪಟಳ ನೀಡುತ್ತಿದ್ದ 8 ಸಾಕಾನೆ ಬಂಡೀಪುರಕ್ಕೆ

ಸಾರಾಂಶ

ಉಪಟಳ ನೀಡುತ್ತಿದ್ದ 8 ಸಾಕಾನೆ ಬಂಡೀಪುರಕ್ಕೆ  ದುಬಾರೆ ವ್ಯಾಪ್ತಿಯ ಖಾಸಗಿ ಒಡೆತನದ ಎಂಟು ಆನೆಗಳ ಸ್ಥಳಾಂತರ

 ಕುಶಾಲನಗರ (ಡಿ.18) : ದುಬಾರೆ (Dubare) ಅರಣ್ಯ ಪ್ರದೇಶದ (Forest) ನಡುವೆ ಪ್ರಜ್ಞಾ ಚೌಟ ಅವರಿಗೆ ಸೇರಿದ ‘ಆನೆ ಮನೆ ಫೌಂಡೇಷನ್‌’ ವಶದಲ್ಲಿದ್ದ 8 ಸಾಕಾನೆಗಳನ್ನು ಅರಣ್ಯ ಇಲಾಖೆ ತನ್ನ ವಶಕ್ಕೆ ಪಡೆದು, ಬಂಡೀಪುರ (Bandipura) ಹುಲಿ(Tiger) ಸಂರಕ್ಷಿತ ಪ್ರದೇಶದ ರಾಮಪುರ ಸಾಕಾನೆ ಶಿಬಿರಕ್ಕೆ ಸ್ಥಳಾಂತರಿಸಿದೆ.  ಹಿರಿಯ ರಂಗಕರ್ಮಿ ಡಿ.ಕೆ. ಚೌಟ ಅವರ ಪುತ್ರಿ ಪ್ರಜ್ಞಾ ಚೌಟ ಅವರು ಸರ್ಕಾರದಿಂದ (Karnataka Govt) ಅನುಮತಿ ಪಡೆದು ಕಾಡಿನ ಮಧ್ಯೆ ಆನೆಗಳನ್ನು ಸಾಕುತ್ತಿದ್ದರು. ಆಕರ್ಷಕ ಆನೆ ಮನೆಯನ್ನು ನಿರ್ಮಿಸಿದ್ದರು. ಆದರೆ ಈ ಆನೆಗಳು ಸುತ್ತಮುತ್ತಲ ರೈತರ ಕೃಷಿ (Agriculture) ಭೂಮಿಗೆ ಲಗ್ಗೆ ಹಾಕಿ ಹಾನಿ ಉಂಟು ಮಾಡುತ್ತಿದ್ದರಿಂದ ಈ ಸಾಕಾನೆಗಳಿಗೆ ಕಡಿವಾಣ ಹಾಕುವಂತೆ ರೈತರು ಅರಣ್ಯ ಇಲಾಖೆಯನ್ನು (Forest Department) ಒತ್ತಾಯಿಸಿದ್ದರು.

ಸಾಕಾನೆಗಳಿಂದ ಉಂಟಾಗುತ್ತಿದ್ದ ಸಮಸ್ಯೆ ಕುರಿತು ಇಲಾಖೆಯು ಸರ್ಕಾರಕ್ಕೆ ವರದಿ ನೀಡಿದ ಹಿನ್ನೆಲೆಯಲ್ಲಿ ಫೌಂಡೇಷನ್‌ (Foundation) ವಶದಲ್ಲಿದ್ದ ಎಲ್ಲ ಸಾಕಾನೆಗಳನ್ನು ಅರಣ್ಯ ಇಲಾಖೆಯವ ವಶಕ್ಕೆ ಪಡೆದು ಸ್ಥಳಾಂತರ ಮಾಡುವಂತೆ ಬೆಂಗಳೂರಿನ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು(ವನ್ಯಜೀವಿ) ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರು ಆದೇಶಿಸಿದ್ದರು.

ಈ ಆದೇಶದಂತೆ ಹೆಣ್ಣಾನೆಗಳಾದ ಹೀರಣ್ಯ (43), ಮಾಲಾದೇವಿ (34), ಪೂಜಾ (8 ), ಕಮಲಿ (4), ಕನ್ನಿಕಾ (2), ಹೀರಣ್ಯ (2 ತಿಂಗಳು) ಹಾಗೂ ಗಂಡಾನೆಗಳಾದ ಧರ್ಮ (12), ಜಗ (7) ಸೇರಿದಂತೆ ಎಂಟು ಆನೆಗಳನ್ನು (Elephant) ಬಂಡೀಪುರದ ರಾಮಪುರ ಸಾಕಾನೆ ಶಿಬಿರಕ್ಕೆ ಸ್ಥಳಾಂತರಿಸಲಾಯಿತು.

ಮಡಿಕೇರಿ (Madikeri) ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ. ಪೂವಯ್ಯ ಮಾರ್ಗದರ್ಶನಲ್ಲಿ ಸೋಮವಾರಪೇಟೆ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎ.ನೆಹರು, ಕುಶಾಲನಗರ ವಲಯ ಅರಣ್ಯಾಧಿಕಾರಿ ಜೆ. ಅನನ್ಯ ಕುಮಾರ್‌, ಡಿಆರ್‌ಎಫ್‌ಒಗಳಾದ ಕೆ.ಪಿ. ರಂಜನ್‌, ಅನಿಲ್‌ ಡಿಸೋಜ, ಮಾವುತರಾದ ಜೆ.ಕೆ. ಡೋಬಿ, ಜೆ.ಆರ್‌. ಚಿನ್ನಪ್ಪ, ಜೆ.ಎಸ್‌. ಅಣ್ಣಯ್ಯ, ದೊರೆಯಪ್ಪ, ಕಾವಾಡಿಗರಾದ ನಯಾಜ್‌ ಪಾಷ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಗೋಡೆ ಒಡೆದು ಆಹಾರ ತಿಂದ ಆನೆ :  ಆನೆ​ಗಳು ಆಹಾರ ಅರಸಿ ತೋಟಕ್ಕೆ ನುಗ್ಗು​ವುದು, ಬೆಳೆ​ಗ​ಳನ್ನು ನಾಶ​ಪ​ಡಿ​ಸು​ವು​ದನ್ನು ನೋಡಿ​ದ್ದೇವೆ. ಆದರೆ, ಥಾಯ್ಲೆಂಡ್‌​ನಲ್ಲಿ ಹಸಿದ ಆನೆ​ಯೊಂದು ಮನೆ​ಯೊಂದರ ಅಡುಗೆ ಕೋಣೆ​ಯ ಗೋಡೆ​ಯನ್ನೇ ಒಡೆದು ಒಳಗೆ ನುಗ್ಗಿದೆ.

ರಾತ್ರಿ 2 ಗಂಟೆಗೆ ಮೆನೆ​ಯ​ಲ್ಲಿ ದೊಡ್ಡ ಸದ್ದು ಆಗಿ​ದ್ದ​ರಿಂದ ಎಚ್ಚ​ರ​ಗೊಂಡ ಮನೆಯ ಮಂದಿ ಆನೆ​ಯನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ. ಗೋಡೆ​ಯನ್ನು ಒಡೆದ ಆನೆ ತನ್ನ ಸೊಂಡಿ​ಲನ್ನು ಇಳಿ​ಬಿಟ್ಟು ಪ್ಲಾಸ್ಟಿಕ್‌ ಚೀಲ​ದ​ಲ್ಲಿ ತುಂಬಿ​ಟ್ಟಿದ್ದ ಅಕ್ಕಿ​ಯ​ನ್ನು ತಿಂದು​ ಮು​ಗಿ​ಸಿದೆ.

ಮರೆಯಾದ ಮಾವುತನಿಗೆ ಗಜರಾಜನ ಕಣ್ಣೀರ ವಿದಾಯ; ವಿಡಿಯೋ

ಮುಂಜಾನೆ 2 ಗಂಟೆಗೆ ತನ್ನ ಅಡುಗೆಮನೆಯಲ್ಲಿ ಆಹಾರಕ್ಕಾಗಿ ಆನೆ ತುರುಕುತ್ತಿರುವುದನ್ನು ಕಂಡು ಥಾಯ್ ಮಹಿಳೆಯೊಬ್ಬರು ಬೆಚ್ಚಿಬಿದ್ದಿದ್ದಾರೆ. ಆಕೆಯ ಅಡುಗೆಮನೆ ‘ಮುರಿದು ಪ್ರವೇಶಿಸುವ’ ಆನೆಯ ಫೋಟೋ ಮತ್ತು ವೀಡಿಯೊಗಳು ಈಗ ವೈರಲ್ ಆಗಿವೆ.

ಈ ಘಟನೆ ಜೂನ್ 20 ರಂದು ಹುವಾ ಹಿನ್ ಜಿಲ್ಲೆಯ ಚಾಲೆರ್‌ಕಿಯಾಟ್‌ಪಟ್ಟಣ ಗ್ರಾಮದಲ್ಲಿರುವ ರತ್ಚಡವಾನ್ ಪುಯೆಂಗ್‌ಪ್ರಸೊಪ್ಪನ್‌ರ ಮನೆಯಲ್ಲಿ ನಡೆಯಿತು. ಈಗ ವೈರಲ್ ಆಗಿರುವ ವೀಡಿಯೊ ಗೋಡೆ ಒಡೆದು ನಂತರ ಅಡುಗೆ ಮನೆಯೊಳಗೆ ನುಗ್ಗಿದೆ.

ಕಿಚನ್ ಡ್ರಾಯರ್‌ಗಳ ಮೂಲಕ ಪ್ರಾಣಿಗಳು ವಾಗ್ದಾಳಿ ನಡೆಸುವುದನ್ನು ವೀಡಿಯೊದಲ್ಲಿ ಕಾಣಬಹುದು. ಬೂಂಚುಯೆ ಎಂಬ ಆನೆ ಹತ್ತಿರದ ಕೈಂಗ್ ಕ್ರಾಚನ್ ರಾಷ್ಟ್ರೀಯ ಉದ್ಯಾನದಲ್ಲಿ ವಾಸಿಸುತ್ತದೆ, ಆಗಾಗ ಗ್ರಾಮಕ್ಕೆ ಭೇಟಿ ನೀಡುತ್ತದೆ

PREV
click me!

Recommended Stories

ಡಿಕೆಸು ಹೆಸರಿನಲ್ಲಿ ಕೋಟ್ಯಂತರ ವಂಚನೆ ಪ್ರಕರಣ.. 'ಬಂಗಾರಿ' ಕೇಸ್‌ನಲ್ಲಿ ನಟ ಧರ್ಮಗೆ ಧ್ವನಿ ಪರೀಕ್ಷೆ?
ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ