Karnataka Politics :ರಾಜಣ್ಣಗೆ ಸಚಿವ ಸ್ಥಾನ ಬಹುತೇಕ ಖಚಿತ

Kannadaprabha News   | Asianet News
Published : Dec 25, 2021, 04:06 PM IST
Karnataka Politics :ರಾಜಣ್ಣಗೆ ಸಚಿವ ಸ್ಥಾನ ಬಹುತೇಕ ಖಚಿತ

ಸಾರಾಂಶ

ರಾಜಣ್ಣಗೆ ಸಚಿವ ಸ್ಥಾನ ಬಹುತೇಕ ಖಚಿತ ಮಧುಗಿರಿ ಅಭಿವೃದ್ಧಿಗೆ ರಾಜಣ್ಣನನ್ನು ಗೆಲ್ಲಿಸಿ ಕಾಲುವೆ ಸ್ವಚ್ಚತಾ ಕಾರ್ಯಕ್ಕೆ ಚಾಲನೆ ನೀಡಿದ ಪರಿಷತ್‌ ಸದಸ್ಯ ಆರ್‌.ರಾಜೇಂದ್ರ  

ಮಧುಗಿರಿ (ಡಿ.25):  ಕ್ಷೇತ್ರದ ಜನತೆ ಅಭಿವೃದ್ಧಿ ದೃಷ್ಟಿಯಿಂದ ಮುಂಬರುವ ಅಸೆಂಬ್ಲಿ ಚುನಾವಣೆ ( Karnataka Assembly Election) ಗಮನದಲ್ಲಿಟ್ಟುಕೊಂಡು ಸದಾ ಅಭಿವೃದ್ಧಿ ಪರ ಚಿಂತಿಸುವ ಮಾಜಿ ಶಾಸಕ ಕೆ.ಎನ್‌.ರಾಜಣ್ಣ (KN Rajanna) ಅವರನ್ನು ಗೆಲ್ಲಿಸಿ ಕೊಡುವಂತೆ ವಿಧಾನ ಪರಿಷತ್‌ ಸದಸ್ಯ (MLC) ಆರ್‌.ರಾಜೇಂದ್ರ ಹೇಳಿದರು.  ಇತ್ತೀಚೆಗೆ ತಾಲೂಕಿನ ಗಂಜಲಗುಂಟೆ ಗ್ರಾಪಂ ವ್ಯಾಪ್ತಿಯಲ್ಲಿನ ಕೆ.ಎನ್‌.ಆರ್‌. ಅಭಿಮಾನಿ ಬಳಗ , ಆರ್‌.ಆರ್‌.ಅಭಿಮಾನಿ ಬಳಗ ಹಾಗೂ ಕಾಂಗ್ರೆಸ್‌ (Congress) ಪಕ್ಷದ ವತಿಯಿಂದ ಆಯೋಜಿಸಿದ್ದ ಹತ್ತಾರು ವರ್ಷಗಳಿಂದ ಮುಚ್ಚಿ ಹೋಗಿದ್ದ ತಲಪುರಿಗೆ ಕಾಲುವೆ ಸ್ವಚ್ಚತಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

2015ರಲ್ಲಿ ಬಿಜವರ ಕೆರೆ ತುಂಬಿದಾಗ ಅಂದು ಶಾಸಕರಾಗಿದ್ದ ಕೆ.ಎನ್‌.ರಾಜಣ್ಣ (KN Rajanna) ಅವರು ಈ ಕಾಲುವೆಯನ್ನು ದುರಸ್ಥಿ ಮಾಡಿಸಿ ರೈತರಿಗೆ (Farmers) ಅನುಕೂಲ ಮಾಡಿಕೊಟ್ಟಿದ್ದರು. ಇದೀಗ ಮತ್ತೆ ಬಿಜವರ ಕೆರೆ ಕೋಡಿ ಬಿದ್ದಿದ್ದು, ಇದರಿಂದ ಕಾಲುವೆಗಳಲ್ಲಿ ನೀರು ಹರಿದರೆ ಅಂತರ್ಜಲ ವೃದ್ಧಿಸಿ ತಲಪುರಿಗೆಗಳಲ್ಲಿ ನಿರಂತರವಾಗಿ ನೀರು ಬರಲಿದೆ ಎಂದರು.

ರೈತರು (Farmers) ನೀರನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಮನಸ್ತಾಪಗಳನ್ನು ಬದಿಗಿಟ್ಟು ಗ್ರಾಮಗಳಲ್ಲಿ ಉತ್ತಮ ವಾತಾವರಣ ನಿರ್ಮಿಸಿಕೊಂಡು ಒಗ್ಗಟ್ಟಾಗಿ ಇದ್ದರೆ ಗ್ರಾಮಗಳು ಅಭಿವೃದ್ಧಿ ಹೊಂದಲಿವೆ. ಕೋವಿಡ್‌ (Covid) ಕಷ್ಟದ ಕಾಲದಲ್ಲಿ ಈ ಭಾಗದಲ್ಲಿ ಎಸ್ಸೆಸ್ಸೆನ್‌ (SSN) ಮೂಲಕ 10 ಕೋಟಿ ರು. ಗಳವರೆಗೂ ರೈತರಿಗೆ ಸಾಲವನ್ನು ನೀಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್‌ (DCC Bank) ನಿರ್ದೇಶಕ ಬಿ.ನಾಗೇಶ್‌ ಬಾಬು, ಬ್ಲಾಕ್‌ ಕಾಂಗ್ರೆಸ್‌ (Block Congress) ಅಧ್ಯಕ್ಷರಾದ ಎಂ.ಎಸ್‌.ಮಲ್ಲಿಕಾರ್ಜುನಯ್ಯ, ಎಸ್‌.ಆರ್‌.ರಾಜ ಗೋಪಾಲ್‌,ಗಂಜಲ ಗುಂಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಾವಿತ್ರಮ್ಮ, ಡಿ.ಎಚ್‌.ನಾಗರಾಜು, ಎಪಿಎಂಸಿ ಮಾಜಿ ಮಾಜಿ ಅಧ್ಯಕ್ಷ ಮರಿಯಣ್ಣ, ವಿಎಸ್ಸೆಸ್ಸೆನ್‌ ಅಧ್ಯಕ್ಷ ಪಾಜೀಲ್‌, ಗ್ರಾಪಂ ಉಪಾಧ್ಯಕ್ಷೆ ಚೇತನಾ, ಸದಸ್ಯರಾದ ಮಾಲಾ, ನಾಗಭೂಷಣ, ರಾಮಚಂದ್ರಪ್ಪ, ಲಕ್ಷ್ಮಿನಾರಾಯಣ, ರಂಗರಾಜು, ಅಮರಾವತಿ ದಾಸೇಗೌಡ, ವೀರೇಶ್‌, ಭಕ್ತರಹಳ್ಳಿ ವೀರನಾಗಪ್ಪ, ಜಿ.ಎನ್‌.ರವಿ, ತಿಮ್ಮಣ್ಣ, ಕೆ.ರಮೇಶ್‌, ಪಟೇಲ್‌ ರಾಮಣ್ಣ, ಬ್ಯಾಂಕ್‌ ರಾಮಚಂದ್ರಪ್ಪ, ಎಚ್‌.ಎಸ್‌.ನಾಗಭೂಷಣ, ರಂಗರಾಜು ಮುಂತಾದವರಿದ್ದರು.

ರಾಜಣ್ಣ ಮಂತ್ರಿಯಾಗುವುದು ಸತ್ಯ :  ಕೆ.ಎನ್‌.ರಾಜಣ್ಣ ಶಾಸಕರಾಗಿದ್ದ ಕಾಲದಲ್ಲಿ ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಆದ ಅಭಿವೃದ್ಧಿ ಕಾರ್ಯಗಳು ಕಣ್ಮುಂದೆ ಇದೆ. 2023ರ ಚುನಾವಣೆಯಲ್ಲಿ ಅವರನ್ನು ಶಾಸಕರನ್ನಾಗಿಸಿ. ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ರಚನೆಯಾಗುವುದು ಬಹುತೇಕ ಖಚಿತ, ಆಗ ರಾಜಣ್ಣನವರು ಮಂತ್ರಿಯಾಗುವುದು ಕೂಡ ಅಷ್ಟೇ ಸತ್ಯ ಎಂದು ವಿಧಾನ ಪರಿಷತ್‌ ಸದಸ್ಯ ಆರ್‌.ರಾಜೇಂದ್ರ ಭವಿಷ್ಯ ನುಡಿದರು.

2023ರ ಚುನಾವಣೆಯ ಭವಿಷ್ಯ : 

ಸ್ಥ​ಳೀಯ ಸಂಸ್ಥೆ​ಗ​ಳಿಂದ ವಿ​ಧಾನ ಪ​ರಿ​ಷ​ತ್ತಿಗೆ ನ​ಡೆದ ಚು​ನಾ​ವ​ಣೆ​ಯಲ್ಲಿ (Election)  ಕಾಂಗ್ರೆಸ್‌ (Congress) ಪಕ್ಷಕ್ಕೆ ಶೇ.48ರಷ್ಟು ಮತ ಬಂದಿದ್ದು, ಇದು ಮುಂಬ​ರುವ 2023ರ ವಿ​ಧಾನಸಭಾ ಚು​ನಾವ​ಣೆಗೆ (Assembly election) ದಿ​ಕ್ಸೂ​ಚಿ​ಯಾ​ಗಿದೆ ಎಂದು ಕೆ​ಪಿ​ಸಿಸಿ ಕಾ​ರ್ಯಾ​ಧ್ಯಕ್ಷ ಸಲೀಂ ಅ​ಹ​ಮ್ಮದ್‌ ತಿ​ಳಿ​ಸಿ​ದರು. ವಿಧಾನ ಪರಿಷತ್‌ ಚುನಾವಣೆಯಲ್ಲಿ ಬಿ​ಜೆ​ಪಿಗೆ ಶೇ.41ರಷ್ಟುಮತ ಬಂದಿ​ದ್ದರೆ, ಜೆ​ಡಿ​ಎಸ್‌ಗೆ (JDS) ಶೇ.12ರಷ್ಟು ಮಾತ್ರ ಮತ ಬಂದಿದೆ. ಹಾ​ನ​ಗಲ್‌ ಉಪ ಚು​ನಾ​ವ​ಣೆ​ಯಲ್ಲೂ ಕಾಂಗ್ರೆಸ್‌ (Congress) ಪ​ಕ್ಷಕ್ಕೆ ಗ​ಣ​ನೀಯ ಪ್ರ​ಮಾ​ಣ​ದಲ್ಲಿ ಮತ ಗ​ಳಿ​ಸಿಕೊಂಡಿದೆ. ಇದು ಮುಂದಿನ ದಿ​ನ​ಗ​ಳಲ್ಲಿ ಜ​ನರು ಕಾಂಗ್ರೆಸ್‌ ಪ​ಕ್ಷ​ದತ್ತ ವಾ​ಲಿ​ದ್ದಾರೆ ಎಂಬುದರ ಸಂಕೇತವಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇ​ಳಿ​ದರು.

ಜ​ನ​ವಿ​ರೋಧಿ ಸರ್ಕಾರ:  ಕೇಂದ್ರ ಹಾಗೂ ರಾ​ಜ್ಯ​ದಲ್ಲಿ ಆ​ಡ​ಳಿತ ನ​ಡೆ​ಸು​ತ್ತಿ​ರುವ ಬಿ​ಜೆಪಿ (BJP) ನೇ​ತೃ​ತ್ವದ ಸರ್ಕಾರ ಜ​ನ​ವಿ​ರೋ​ಧಿ​ಯಾ​ಗಿದೆ. ತೈಲೋತ್ಪನ್ನ ಬೆಲೆಗಳು ಗಗನಕ್ಕೇರಿವೆ. ಸಿಲಿಂಡರ್‌ ಬೆಲೆ 350 ರು.ನಿಂದ 1000 ರು.ವರೆಗೂ ಹೆಚ್ಚಾ​ಗಿ​ದೆ. ವರ್ಷಕ್ಕೆ 15 ಲಕ್ಷ ಉ​ದ್ಯೋಗ ಸೃ​ಷ್ಟಿ​ಸು​ವು​ದಾಗಿ ಹೇ​ಳಿದ್ದ ಕೇಂದ್ರ ಸರ್ಕಾರ ಈ​ವ​ರೆ​ವಿಗೂ ಉ​ದ್ಯೋಗ ಸೃ​ಷ್ಟಿಗೆ ಆದ್ಯ​ತೆ​ಯನ್ನೇ ನೀ​ಡಿಲ್ಲ ಎಂದು ಹ​ರಿ​ಹಾ​ಯ್ದರು.

ದು​ರ​ಹಂಕಾರ ಪ್ರ​ದರ್ಶನ:  ರೈ​ತರ (Farmers) ವಿ​ರೋ​ಧದ ನ​ಡು​ವೆಯೂ ಕೃಷಿ ಕಾ​ಯ್ದೆ​ಗ​ಳನ್ನು ಜಾ​ರಿ​ಗೊ​ಳಿಸಿ ಒಂದು ವರ್ಷದ ಬ​ಳಿಕ ವಾ​ಪಸ್‌ ಪ​ಡೆ​ದಿದ್ದಾರೆ. ಇ​ದ​ರಿಂದಾಗಿ 700 ಮಂದಿ ರೈ​ತರು ಹು​ತಾ​ತ್ಮ​ರಾ​ಗಿ​ದ್ದಾರೆ. ಇ​ದಕ್ಕೆ ಪ್ರ​ಧಾನಿ ನ​ರೇಂದ್ರ​ ಮೋ​ದಿ​ಯ​ವರ ದು​ರ​ಹಂಕಾ​ರದ ನ​ಡೆಯೇ ಕಾ​ರಣ ಎಂದು ಟೀ​ಕಿ​ಸಿ​ದರು.

PREV
Read more Articles on
click me!

Recommended Stories

ಅಂಕಣ | ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!
ಜಾಸ್ತಿ ಬೇಡ ಎರಡೇ ಮಕ್ಕಳನ್ನಷ್ಟೇ ಮಾಡಿಕೊಳ್ಳಿ: ನವದಂಪತಿಗಳಿಗೆ ಸಿಎಂ ಸಲಹೆ