ಯಾವ ಯಾವ ಜಿಲ್ಲೆಗಳಲ್ಲಿ ಕೊರೋನಾ ಕಾಟ: ಸುವರ್ಣ ರೌಂಡ್ ಅಪ್

By Suvarna NewsFirst Published Mar 14, 2020, 10:41 AM IST
Highlights

ಕರ್ನಾಟಕದಲ್ಲಿ 6 ಮಂದಿಗೆ ಕೊರೋನಾ ಸೋಂಕು ದೃಢ| ರಾಜ್ಯದ 32 ಆಸ್ಪತ್ರೆಯಲ್ಲಿ 32 ಕೊರೋನಾ ಶಂಕಿತರ ಮೇಲೆ ನಿಗಾ| 1012 ಮನೆಯಲ್ಲಿಯೇ ಪ್ರತ್ಯೇಕ ನಿಗಾದಲ್ಲಿರುವವರು| 639 ಕರೋನಾ ಶಂಕಿತರ ಕಫ, ರಕ್ತದ ಮಾದರಿ ಸಂಗ್ರಹ| 540 ಮಂದಿಗೆ ನಗಟಿವ್| 1,05 292 ಪ್ರಯಾಣಿಕರನ್ನ ಬೆಂಗಳೂರು, ಮಂಗಳೂರು ವಿಮಾನ ನಿಲ್ದಾಣಗಳಲ್ಲಿ ತಪಾಸಣೆ| 5394 ಮಂದಿ ಮಂಗಳೂರು ಹಾಗೂ ಕಾರವಾರ ಕಡಲ ಬಂದರಿನಲ್ಲಿ ತಪಾಸಣೆ ಒಳಪಟ್ಟವರು|

ಬೆಂಗಳೂರು(ಮಾ.15): ಮಹಾಮಾರಿ ಕೊರೋನಾ ವೈರಸ್‌ ವಿಶ್ವಾದ್ಯಂತ ಭಾರೀ ಸಂಚಲನ ಮೂಡಿಸಿದೆ. ಜನರು ಮನೆ ಬಿಟ್ಟು ಹೊರಗೆ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಕೊರೋನಾ ವೈರಸ್‌ಗೆ ದೇಶದಲ್ಲಿ ಇಬ್ಬರು ಬಲಿಯಾಗಿದ್ದಾರೆ. ಕಲಬುರಗಿಯಲ್ಲಿ 75 ವರ್ಷದ ವೃದ್ಧ ಮೊದಲ ಬಲಿಯಾಗಿದ್ದರೆ, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮತ್ತೋರ್ವ 69 ವರ್ಷದ ವೃದ್ಧ ಸಾವನ್ನಪ್ಪಿದ್ದಾರೆ. 

"

ಹೀಗಾಗಿ ಇಡೀ ದೇಶಾದ್ಯಂತ ಭಯದಲ್ಲಿ ಜನತೆ ಜೀವನ ಕಳೆಯುವಂತಾಗಿದೆ. ಕೊರೋನಾ ವೈರಸ್‌ ಹರಡದಿರಲು ಕರ್ನಾಟಕ ಸರ್ಕಾರ ಕೂಡ ಮಹತ್ವದ ಹೆಜ್ಜೆ ಇಟ್ಟಿದ್ದು ಇಂದಿನಿಂದ(ಶನಿವಾರ) ಒಂದು ವಾರ ಇಡೀ ರಾಜ್ಯ ಬಂದ್ ಆಗಿರಲಿದೆ. ಅಂದರೆ ಶಾಪಿಂಗ್ ಮಾಲ್, ಚಿತ್ರಮಂದಿರ, ಮದುವೆ ಸಮಾರಂಭ, ಪ್ರತಿಭಟನೆ, ಬಾರ್ ರೆಸ್ಟೋರೆಂಟ್ ಸೇರಿದಂತೆ ಹೆಚ್ಚು ಜನ ಸೇರುವ ಸಭೆ ಸಮಾರಂಭಗಳನ್ನ ರದ್ದು ಮಾಡಲಾಗಿದೆ.

ಕೊರೋನಾ ವೈರಸ್‌ನಿಂದ ರದ್ದಾದ ಕ್ರಿಕೆಟ್ ಹಾಗೂ ಕ್ರೀಡಾಕೂಟದ ವಿವರ!

ಇನ್ನು ರಾಜ್ಯದ ಯಾವ ಯಾವ ಜಿಲ್ಲೆಗಳಲ್ಲಿ ಎಷ್ಟೆಷ್ಟು ಮಂದಿ ಕೊರೋನಾ ವೈರಸ್ ಸಂಬಂಧ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬುದರ ಮಾಹಿತಿ ಇಲ್ಲಿದೆ ಮಾಹಿತಿ. 

ಕೊರೋನಾ ವೈರಸ್‌ನಿಂದಾಗಿ ಕಲಬುರಗಿಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಭಾರೀ ಕಟ್ಟೆಚ್ಚರ ವಹಿಸಲಾಗುತ್ತಿದೆ. ಮೃತಪಟ್ಟ ವ್ಯಕ್ತಿಯ ಕುಟುಂಬದವರು, ಈಗಾಗಲೇ ಸೋಂಕು ಪತ್ತೆಯಾಗಿರುವ ವ್ಯಕ್ತಿಗಳು ಮತ್ತು ವಿದೇಶದಿಂದ ಬಂದ ಶಂಕಿತರು ಸೇರಿದಂತೆ ಒಟ್ಟಾರೆ ರಾಜ್ಯದಲ್ಲಿ 1345 ಜನರ ಮೇಲೆ ನಿಗಾ ವಹಿಸಲಾಗಿದೆ.

'ಕೊರೋನಾ ವೈರಸ್‌ ಮೂಲ ಚೀನಾ ಅಲ್ಲ, ಅಮೆರಿಕಾ!'

ಕಲಬುರಗಿಯಲ್ಲಿ 46 ಜನರ ಮೇಲೆ ನಿಗಾ ವಹಿಸಲಾಗಿದೆ. ಇದರಲ್ಲಿ ಕೊರೋನಾ ವೈರಸ್‌ಗೆ ಮೃತಪಟ್ಟ ವ್ಯಕ್ತಿಯ ಕುಟುಂಬದವರು ಮತ್ತು ಇತ್ತೀಚೆಗೆ ವಿದೇಶದಿಂದ ಆಗಮಿಸಿದ ವ್ಯಕ್ತಿಗಳು ಸೇರಿದ್ದಾರೆ. ಗದಗದಲ್ಲಿ 41 ಜನರ ಮೇಲೆ ನಿಗಾ ವಹಿಸಲಾಗಿದೆ. ಇದರಲ್ಲಿ ಸಿಂಗಾಪುರ, ಮಲೇಷ್ಯಾ ಪ್ರವಾಸಕ್ಕೆ ತೆರಳಿದ್ದ ಲಕ್ಷ್ಮೇಶ್ವರ ಪಟ್ಟಣದ 17 ಜನ ಹಾಗೂ ಮೆಕ್ಕಾ ಮದೀನಾ ಪ್ರವಾಸಿ ಮುಗಿಸಿಕೊಂಡು ಬಂದಿರುವ 12 ಹಾಗೂ ಪಕ್ಕದ ಕೇರಳ ಸೇರಿದಂತೆ ದೇಶದಲ್ಲಿನ ಇನ್ನಿತರ ಭಾಗಗಳಿಂದ ಆಗಮಿಸಿರುವ 12 ಜನರ ಸೇರಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ ಇದುವರೆಗೆ ಯಾರೊಬ್ಬರಲ್ಲಿಯೂ ಸೋಂಕು ಪತ್ತೆಯಾಗಿಲ್ಲ. ಆದರೆ, ವಿದೇಶದಿಂದ ಬಂದ ಒಬ್ಬರನ್ನು ಆಸ್ಪತ್ರೆಯೊಂದರಲ್ಲಿ ಪ್ರತ್ಯೇಕವಾಗಿರಿಸಿ ನಿಗಾ ವಹಿಸಲಾಗಿದೆ. ಹಾಸನದಲ್ಲಿ ಒಟ್ಟು ಐವರ ಮೇಲೆ ನಿಗಾ ವಹಿಸಲಾಗಿದೆ. ಇದರಲ್ಲಿ ಇತ್ತೀಚೆಗೆ ಮೆಕ್ಕಾ-ಮದೀನಾದಿಂದ ಮರಳಿದ ಒಬ್ಬ ವ್ಯಕ್ತಿಯೂ ಸೇರಿದ್ದಾರೆ.

ಉಳಿದಂತೆ ದಾವಣಗೆರೆಯಲ್ಲಿ 24, ಬಾಗಲಕೋಟೆಯಲ್ಲಿ 16, ಬೆಳಗಾವಿಯಲ್ಲಿ 14, ವಿಜಯಪುರದಲ್ಲಿ 5, ದಕ್ಷಿಣ ಕನ್ನಡದಲ್ಲಿ 6, ಉಡುಪಿಯಲ್ಲಿ 9, ರಾಯಚೂರಲ್ಲಿ 5 ಮಂದಿಯ ಮೇಲೆ ನಿಗಾ ವಹಿಸಲಾಗಿದೆ. ಬಳ್ಳಾರಿ, ಕೊಪ್ಪಳ, ಚಿಕ್ಕಮಗಳೂರಿನಲ್ಲಿ ಇಬ್ಬರ ಮೇಲೆ ಮತ್ತು ಕೊಡಗು, ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ ಒಬ್ಬರ ಮೇಲೆ ಜಿಲ್ಲಾಡಳಿತ ನಿಗಾ ವಹಿಸುತ್ತಿದೆ.
 

click me!