
ನವದೆಹಲಿ(ಜೂ.11): ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಇದೇ ವರ್ಷ(2020)ದಲ್ಲೇ ಐಪಿಎಲ್ ಆಯೋಜಿಸಲು ಎಲ್ಲಾ ಸಾಧ್ಯತೆಗಳ ಬಗ್ಗೆ ಅವಲೋಕನ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಈ ಕುರಿತಂತೆ ಎಲ್ಲಾ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ದಾದಾ ಪತ್ರ ಬರೆದಿದ್ದಾರೆ ಎಂದು ವರದಿಯಾಗಿದೆ.
ಖಾಲಿ ಮೈದಾನದಲ್ಲಿ ಬೇಕಾದರೂ ಐಪಿಎಲ್ ಆಯೋಜಿಸಲು ಬಿಸಿಸಿಐ ರೆಡಿಯಿದೆ ಎಂದು ಗಂಗೂಲಿ ತಿಳಿಸಿದ್ದಾರೆ ಎಂದು 'ದ ಟೈಮ್ಸ್ ಆಫ್ ಇಂಡಿಯಾ' ಬುಧವಾರ(ಜೂ.10)ರಂದು ವರದಿ ಮಾಡಿತ್ತು. ಈ ವರ್ಷವೇ ಐಪಿಎಲ್ ಆಯೋಜನೆಯ ಸಾಧ್ಯತೆಯ ಬಗ್ಗೆ ಎಲ್ಲಾ ಆಯಾಮಗಳನ್ನು ಆಲೋಚಿಸುತ್ತಿದೆ. ಖಾಲಿ ಮೈದಾನದಲ್ಲಿ ಆಯೋಜಿಸುವ ಬಗ್ಗೆಯೂ ಯೋಜನೆಯಿದೆ. ಅಭಿಮಾನಿಗಳು, ಫ್ರಾಂಚೈಸಿ, ಆಟಗಾರರು, ಪ್ರಸಾರದ ಹಕ್ಕು ಪಡೆದವರು, ಪ್ರಾಯೋಜಕರು ಈ ವರ್ಷ ಐಪಿಎಲ್ ನಡೆಸುವುದನ್ನು ಎದುರು ನೋಡುತ್ತಿದ್ದಾರೆ ಎಂದು ಗಂಗೂಲಿ ಹೇಳಿರುವುದಾಗಿ ವರದಿ ಮಾಡಿದೆ.
ಈ ವರ್ಷ ಐಪಿಎಲ್ ಆಯೋಜನೆಯ ಕುರಿತಂತೆ ನಾವೆಲ್ಲಾ ಆಶಾವಾದವನ್ನು ಹೊಂದಿದ್ದೇವೆ. ಪ್ರೇಕ್ಷಕರಿಲ್ಲದೇ ಖಾಲಿ ಮೈದಾನದಲ್ಲಿ ಬೇಕಾದರೂ ಐಪಿಎಲ್ ನಡೆಸುವ ಸಾಧ್ಯತೆಗಳನ್ನು ಆಲೋಚಿಸುತ್ತಿದ್ದೇವೆ. ಬಿಸಿಸಿಐ ಸದ್ಯದಲ್ಲೇ ಈ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ದಾದಾ ತಿಳಿಸಿದ್ದಾರೆ.
ICC ಮಹತ್ವದ ಸಭೆ; ಮಂದಿನ ತಿಂಗಳು T20 ವಿಶ್ವಕಪ್, IPL ಭವಿಷ್ಯ ನಿರ್ಧಾರ!
ಬಹುನಿರೀಕ್ಷಿತ ಐಪಿಎಲ್ ಟೂರ್ನಿಯು ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಮಾರ್ಚ್ 29ರಿಂದ ಆರಂಭವಾಗಬೇಕಿತ್ತು. ಆದರೆ ಕೊರೋನಾ ವೈರಸ್ ವಕ್ಕರಿಸಿಕೊಂಡಿದ್ದರಿಂದ ಟೂರ್ನಿ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. ಇನ್ನು ಅಕ್ಟೋಬರ್-ನವೆಂಬರ್ನಲ್ಲಿ ಟಿ20 ವಿಶ್ವಕಪ್ ಜರುಗಲಿದ್ದು, ಒಂದು ವೇಳೆ ಚುಟುಕು ವಿಶ್ವಕಪ್ ಟೂರ್ನಿ ಮುಂದೂಡಿದರೆ ಆ ವೇಳೆ ಐಪಿಎಲ್ ಭಾರತದಲ್ಲಿ ಜರುಗುವ ಸಾಧ್ಯತೆಯಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.