ಡ್ರಾಪ್ ಮಾಡಿ ಬೆಂಚ್ ಕಾಯಿಸಿದರು, ಕೊನೆಗೆ ಹೊರದಬ್ಬಿದರು; CSK ಸೀಕ್ರೆಟ್ ಬಿಚ್ಚಿಟ್ಟ ಆರ್ ಅಶ್ವಿನ್!

Suvarna News   | Asianet News
Published : Apr 27, 2020, 03:34 PM IST
ಡ್ರಾಪ್ ಮಾಡಿ ಬೆಂಚ್ ಕಾಯಿಸಿದರು, ಕೊನೆಗೆ ಹೊರದಬ್ಬಿದರು; CSK ಸೀಕ್ರೆಟ್ ಬಿಚ್ಚಿಟ್ಟ ಆರ್ ಅಶ್ವಿನ್!

ಸಾರಾಂಶ

ಸ್ಪಿನ್ನರ್ ಆರ್ ಅಶ್ವಿನ್‌ಗೆ ಟೀಂ ಇಂಡಿಯಾದಲ್ಲಿ ಅನ್ಯಾಯವಾಗುತ್ತಿದೆ ಅನ್ನೋ ಕೂಗು ಹಲವು ವರ್ಷಗಳಿಂದ ಕೇಳಿ ಬರುತ್ತಿದೆ. ಟೆಸ್ಟ್‌ಗೆ ಮಾತ್ರ ಸೀಮಿತಗೊಳಿಸಿ ಆರ್ ಅಶ್ವಿನ್ ಕಡೆಗಣಿಸಲಾಗುತ್ತಿದೆ ಅನ್ನೋ ಆರೋಪವಿದೆ. ಇದೀಗ ಐಪಿಎಲ್ ಟೂರ್ನಿಯಲ್ಲೂ ಅಶ್ವಿನ್‌ಗೆ ಬಹುದೊಡ್ಡ ಅನ್ಯಾವಾಗಿದೆ ಅನ್ನೋದು ಬಯಲಾಗಿದೆ.   

ಚೆನ್ನೈ(ಏ.27): ಟೀಂ ಇಂಡಿಯಾದ ಪ್ರಮುಖ ಸ್ಪಿನ್ನರ್ ಆಗಿ ಗುರುತಿಸಿಕೊಂಡಿರುವ ಆರ್ ಅಶ್ವಿನ್ ಇತ್ತೀಚಿನ ವರ್ಷಗಳಲ್ಲಿ ಟೆಸ್ಟ್ ತಂಡಕ್ಕೆ ಮಾತ್ರ ಸೀಮಿತವಾಗಿದ್ದಾರೆ. ಈ ಕುರಿತು ಹಲವು ದಿಗ್ಗಜ ಕ್ರಿಕೆಟಿಗರು ಬಿಸಿಸಿಐ ನಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಟೀಂ ಇಂಡಿಯಾದಲ್ಲೂ ಆರ್ ಅಶ್ವಿನ್‌ಗೆ ಅನ್ಯಾಯವಾಗುತ್ತಿದೆ ಎಂದು ಹಲವರು ಎಚ್ಚರಿಸಿದ್ದಾರೆ. ಆದರೆ ಅಶ್ವಿನ್ ವಿಚಾರದಲ್ಲಿ ಯಾವುದೂ ಬದಲಾಗಲಿಲ್ಲ. ಚಿಲ್ಟು ಪಿಲ್ಟು ಸ್ಪಿನ್ನರ್‌ಗಳೆಲ್ಲಾ ಟೀಂ ಇಂಡಿಯಾ ಫ್ರಂಟ್ ಲೈನ್ ಸ್ಪಿನ್ನರ್ ಆಗಿ ಬದಲಾದರೂ ಅಶ್ವಿನ್ ಮಾತ್ರ ವೈಟ್ ಜರ್ಸಿಗೆ ಸೀಮಿತವಾದರು.

ಮಂಕಡ್ ರನೌಟ್ ಮೂಲಕ ಅಭಿಮಾನಿಗಳಿಗೆ ಲಾಕ್‌‌ಡೌನ್‌ ಎಚ್ಚರಿಕೆ ನೀಡಿದ ಅಶ್ವಿನ್!..

ಆರ್ ಅಶ್ವಿನ್‌ಗೆ ಟೀಂ ಇಂಡಿಯಾದಲ್ಲಿ ಮಾತ್ರವಲ್ಲ ಐಪಿಎಲ್ ಟೂರ್ನಿಯಲ್ಲೂ ಅನ್ಯಾಯವಾಗಿದೆ. ಇದೀಗ ತಮಗಾದ ಅನ್ಯಾಯವನ್ನು ಸ್ವತಃ ಆರ್ ಅಶ್ವಿನ್ ಬಿಚ್ಚಿಟ್ಟಿದ್ದಾರೆ. 2008ರಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದ ಆರ್ ಅಶ್ವಿನ್ 2015ರ ವರೆಗೆ ತಂಡದಲ್ಲಿದ್ದರು. ಆದರೆ ಅಶ್ವಿನ್ ಆರಂಭಿಕ 3 ಆವೃತ್ತಿಗಳಲ್ಲಿ ಸಿಎಸ್‌ಕೆ ಪರ ಸಕ್ರೀಯರಾಗಿದ್ದರು. ಬಳಿಕ ತಂಡದ ಅವಕೃಪೆಗೆ ಗುರಿಯಾಗಿ ಬೆಂಚ್ ಕಾಯಬೇಕಾಯಿತು ಎಂದು ಅಶ್ವಿನ್ ಹೇಳಿದ್ದಾರೆ.

2010ರಲ್ಲಿ 2 ಪಂದ್ಯಗಳಲ್ಲಿ ನಾನು ದುಬಾರಿಯಾಗಿದ್ದೆ. ವಿಕೆಟ್ ಬೀಳಲಿಲ್ಲ. ಆದರೆ ತಂಡಕ್ಕಾಗಿ 40 ರಿಂದ 45 ರನ್ ಕಾಣಿಕೆ ನೀಡುತ್ತಿದ್ದೆ. ಹೀಗಾಗಿ ಕೋಚ್ ಸ್ಟೀಫನ್ ಫ್ಲೆಮಿಂಗ್ ಕೆಂಗಣ್ಣಿಗೆ ಗುರಿಯಾಗಿದೆ. ದುಬಾರಿಯಾದ ಬಳಿಕ ನನ್ನ ತಂಡದ ಪ್ಲೇಯಿಂಗ್ ಇಲೆವೆನ್‌ಗೆ ಆಯ್ಕೆ ಮಾಡಲಿಲ್ಲ. ಸಂಪೂರ್ಣವಾಗಿ ನನ್ನನ್ನು ಡ್ರಾಪ್ ಮಾಡಿದ್ದರು. ಕೋಚ್ ನನ್ನ ಜೊತೆ ಏನನ್ನೂ ಹೇಳುತ್ತಿರಲಿಲ್ಲ. 25ರ ಬಳಗದಲ್ಲಿ ನಾನಿದ್ದೆ. ಆದರೆ ಆಡೋ ಹನ್ನೊಂದರಲ್ಲಿ ನನಗೆ ಅವಕಾಶವೇ ಇರಲಿಲ್ಲ. ಹೀಗಾಗಿ ನಾನು ಮನೆಯಲ್ಲೇ ಕುಳಿತು ಸಿಎಸ್‌ಕೆ ಪಂದ್ಯ ನೋಡುತ್ತಿದೆ.

ಪಂದ್ಯ ನೋಡುತ್ತಿರುವಾಗ ಭಾರ ಎನಿಸುತ್ತಿತ್ತು. ಒಂದು ದಿನ ಮತ್ತೆ ಸಿಎಸ್‌ಕೆ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುತ್ತೇನೆ ಎಂದು ನಿರ್ಧಾರ ಮಾಡಿದ್ದೆ. ಆದರೆ ನನಗೆ ಒಂದೇ ಒಂದು ಅವಕಾಶ ಸಿಗಲಿಲ್ಲ. ಕೋಚ್ ಫ್ಲೆಮಿಂಗ್ ಹಾಗೂ ನನ್ನ ನಡೆವೆ ಉತ್ತಮ ಬಾಂಧವ್ಯ ಇರಲಿಲ್ಲ. 2010ರಿಂದ ನಾನು ಸಿಎಸ್‌ಕೆ ಬೆಂಚ್ ಸದಸ್ಯನಾಗಿದ್ದೆ. 2016ರಲ್ಲಿ ಸಿಎಸ್‌ಕೆ ತಂಡ ಅಮಾನತ್ತಾಯಿತು. ಹೀಗಾಗಿ ರೈಸಿಂಗ್ ಪುಣೆ ತಂಡ ಸೇರಿಕೊಂಡೆ. ಬಳಿಕ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕನಾಗಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಇದೀಗ ಡೆಲ್ಲಿ ತಂಡ ಸೇರಿಕೊಂಡಿದ್ದೇನೆ. ಆದರೆ ಈ ಬಾರಿ ಕೊರೋನಾ ವೈರಸ್ ಕಾರಣ ಐಪಿಎಲ್ ಟೂರ್ನಿಯೇ ತಾತ್ಕಾಲಿಕ ರದ್ದಾಗಿದೆ ಎಂದು ಅಶ್ವಿನ್ ತಮ್ಮ ಸಿಎಸ್‌ಕೆ ಪಯಣ ಬಿಚ್ಚಿಟ್ಟಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IPL 2026 ಐಪಿಎಲ್ ಹರಾಜಿನಿಂದ ಹಿಂದೆ ಸರಿದ ಮತ್ತಿಬ್ಬರು ಸ್ಟಾರ್ ಆಲ್ರೌಂಡರ್ಸ್!
IPL 2026 ಆಟಗಾರರ ಹರಾಜಿನ ಲಿಸ್ಟ್‌ ಫೈನಲ್: 2 ಕೋಟಿ ಮೂಲ ಬೆಲೆ ಹೊಂದಿರುವ ಆಟಗಾರ ಪಟ್ಟಿ ಔಟ್, ಕೇವಲ 2 ಭಾರತೀಯರಿಗೆ ಸ್ಥಾನ!