ಸೂರತ್‌ನಲ್ಲಿ ಅಣುಬಾಂಬ್‌ ಹಾಕಲು ಯಾಸಿನ್‌ ಭಟ್ಕಳ್‌ ಸಂಚು: ಎನ್‌ಐಎ ಚಾರ್ಜ್‌ಶೀಟ್‌

Published : Apr 04, 2023, 07:01 AM ISTUpdated : Apr 04, 2023, 07:20 AM IST
ಸೂರತ್‌ನಲ್ಲಿ ಅಣುಬಾಂಬ್‌ ಹಾಕಲು ಯಾಸಿನ್‌ ಭಟ್ಕಳ್‌ ಸಂಚು: ಎನ್‌ಐಎ ಚಾರ್ಜ್‌ಶೀಟ್‌

ಸಾರಾಂಶ

ಕರ್ನಾಟಕದ ಭಟ್ಕಳ ಮೂಲದ ಉಗ್ರ ಯಾಸಿನ್‌ ಭಟ್ಕಳ್‌, ಭಾರತದ ವಿರುದ್ಧ ಯುದ್ಧ ಸಾರುವ ಉದ್ದೇಶದಿಂದ ಗುಜರಾತ್‌ನ ಸೂರತ್‌ನಲ್ಲಿ ಅಣುಬಾಂಬ್‌ ಹಾಕಲು ಸಂಚು ರೂಪಿಸಿದ್ದ. ಈ ಮೂಲಕ ದೇಶದ ವಿರುದ್ಧ ಯುದ್ಧ ಸಾರುವ ದೊಡ್ಡ ಹುನ್ನಾರ ನಡೆಸಿದ್ದ ಎಂಬ ಸ್ಫೋಟಕ ವಿಷಯ ಬೆಳಕಿಗೆ ಬಂದಿದೆ.

ನವದೆಹಲಿ: ಕರ್ನಾಟಕದ ಭಟ್ಕಳ ಮೂಲದ ಉಗ್ರ ಯಾಸಿನ್‌ ಭಟ್ಕಳ್‌, ಭಾರತದ ವಿರುದ್ಧ ಯುದ್ಧ ಸಾರುವ ಉದ್ದೇಶದಿಂದ ಗುಜರಾತ್‌ನ ಸೂರತ್‌ನಲ್ಲಿ ಅಣುಬಾಂಬ್‌ ಹಾಕಲು ಸಂಚು ರೂಪಿಸಿದ್ದ. ಈ ಮೂಲಕ ದೇಶದ ವಿರುದ್ಧ ಯುದ್ಧ ಸಾರುವ ದೊಡ್ಡ ಹುನ್ನಾರ ನಡೆಸಿದ್ದ ಎಂಬ ಸ್ಫೋಟಕ ವಿಷಯ ಬೆಳಕಿಗೆ ಬಂದಿದೆ. ಈ ಸಂಬಂಧ ದಿಲ್ಲಿಯ ಪಟಿಯಾಲಾ ಹೌಸ್‌ ಎನ್‌ಐಎ (NIA court) ವಿಶೇಷ ನ್ಯಾಯಾಲಯವು, ಭಟ್ಕಳ್‌ ಹಾಗೂ ಇತರ 10 ಮಂದಿ ವಿರುದ್ಧ ದೋಷಾರೋಪ ದಾಖಲು ಮಾಡಿದೆ.

ಭಟ್ಕಳ್‌ ಸದಸ್ಯನಾಗಿದ್ದ ‘ಇಂಡಿಯನ್‌ ಮುಜಾಹಿದೀನ್‌’ (Indian Mujahideen)ಸಂಘಟನೆಯು, ಮುಸ್ಲಿಂ ಯುವಕರನ್ನು ತನ್ನತ್ತ ಸೆಳೆದುಕೊಂಡು ಉಗ್ರರನ್ನು ನೇಮಿಸುವ ಕುರಿತಂತೆ ಎನ್‌ಐಎ ತನಿಖೆ ನಡೆಸಿತ್ತು. ಈ ಸಂಬಂಧ ದೋಷಾರೋಪ ದಾಖಲಿಸಿದ ವಿಶೇಷ ನ್ಯಾಯಾಧೀಶ ಶೈಲೇಂದ್ರ ಮಲಿಕ್‌, ‘ಆರೋಪಿಗಳು ಬಳಸಿದ ಡಿಜಿಟಲ್‌ ಸಾಧನ (ಮೊಬೈಲ್‌, ಕಂಪ್ಯೂಟರ್‌ ಇತ್ಯಾದಿ..) ವಿಶ್ಲೇಷಿಸಿದಾಗ ಅದರಲ್ಲಿ ಅನೇಕ ಜಿಹಾದಿ ಅಂಶಗಳು ಲಭಿಸಿವೆ. ಜತೆಗೆ ಮುಸ್ಲಿಮೇತರರನ್ನು ಹತ್ಯೆ ಮಾಡಿದ್ದನ್ನು ಸಮರ್ಥಿಸಲಾಗಿದೆ. ಭಟ್ಕಳ್‌ ಕೇವಲ ಉಗ್ರ ಚಟುವಟಿಕೆ ಮಾತ್ರವಲ್ಲ, ಬಾಂಬ್‌ ತಯಾರಿಕೆಯಲ್ಲೂ ಪರಿಣತನಾಗಿದ್ದ ಎಂದು ತಿಳಿದುಬರುತ್ತದೆ’ ಎಂದಿದ್ದಾರೆ.

ಉಪವಾಸ ಸತ್ಯಾಗ್ರಹ ಅಂತ್ಯ ಮಾಡಿದ ಪ್ರತ್ಯೇಕತಾವಾದಿ ನಾಯಕ ಯಾಸಿನ್‌ ಮಲಿಕ್‌!

ಯಾಸಿನ್‌ ಭಟ್ಕಳ್‌ (Yasin Bhatkal) ಹಾಗೂ ಇನ್ನೊಬ್ಬ ಉಗ್ರ ಮೊಹಮ್ಮದ್‌ ಸಾಜಿದ್‌ (Mohammad Sajid) ಇವರ ನಡುವೆ ನಡೆದ ಚಾಟಿಂಗ್‌ ವೇಳೆ, ಸೂರತ್‌ನಲ್ಲಿ ಅಣುಬಾಂಬ್‌ ಇಡುವ ಮುನ್ನ ಮುಸ್ಲಿಮರನ್ನು ತೆರವು ಮಾಡಬೇಕು’ ಎಂಬ ಸಂಭಾಷಣೆ ಗಮನಿಸಬಹುದಾಗಿದೆ ಎಂದು ಕೋರ್ಟ್ ಹೇಳಿದೆ. 2013ರ ಜೂ.1ರ ಇನ್ನೊಂದು ಚಾಟಿಂಗ್‌ನಲ್ಲಿ ಸಾಮಾನ್ಯ ಜನರ ಬದಲು ದೊಡ್ಡ ರಾಜಕಾರಣಿಗಳನ್ನು ಕೊಲ್ಲಬೇಕು ಎಂದು ಮಾತುಕತೆ ನಡೆಸಲಾಗಿದೆ. ಛತ್ತೀಸ್‌ಗಢದ ಕಾಂಗ್ರೆಸ್‌ ನಾಯಕನ ಮೇಲಿನ ಮಾವೋವಾದಿ ದಾಳಿಯನ್ನೂ ಉಲ್ಲೇಖಿಸಲಾಗಿದೆ.

ಆದರೆ, ಭಟ್ಕಳ್‌ ಪರ ವಕೀಲ ಇದನ್ನು ಮೇಲಿನ ಕೋರ್ಟಿನಲ್ಲಿ ಪ್ರಶ್ನಿಸುವುದಾಗಿ ಹೇಳಿದ್ದಾರೆ. ಹಳೆಯ ಕೇಸಿನಲ್ಲಿ ಚಾಟ್‌ಗಳನ್ನೇ ಈ ಪ್ರಕರಣದಲ್ಲೂ ಪ್ರಸ್ತಾಪಿಸಲಾಗುತ್ತಿದೆ. ಇದು ನಿಯಮಬಾಹಿರ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಭಟ್ಕಳ್‌ 2013ರಲ್ಲೇ ಬಂಧಿತನಾಗಿದ್ದು, ವಿವಿಧ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿ ಸದ್ಯ ದಿಲ್ಲಿಯ ತಿಹಾರ್‌ ಜೈಲಿನಲ್ಲಿದ್ದಾನೆ.

Ahmedabad Bomb Attack: 21 ಬಾಂಬ್.. 38 ಜನರಿಗೆ ಗಲ್ಲು..  ಯಾಸೀನ್ ಭಟ್ಕಳ ಜನ್ಮ ಜಾತಕ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ