ಮಹಿಳಾ ಅಧಿಕಾರಿಗಳಿಗೆ ಕಮಾಂಡ್ ಪೋಸ್ಟ್ ಏಕಿಲ್ಲ?: ಸುಪ್ರೀಂ ಪ್ರಶ್ನೆ!

Suvarna News   | Asianet News
Published : Jan 30, 2020, 02:53 PM IST
ಮಹಿಳಾ ಅಧಿಕಾರಿಗಳಿಗೆ ಕಮಾಂಡ್ ಪೋಸ್ಟ್ ಏಕಿಲ್ಲ?: ಸುಪ್ರೀಂ ಪ್ರಶ್ನೆ!

ಸಾರಾಂಶ

ಸೇನೆಯಲ್ಲಿ ಮಹಿಳಾ ಅಧಿಕಾರಿಗಳಿಗೆ ಕಮಾಂಡ್ ಪೋಸ್ಟ್| ಮಹಿಳಾ ಅಧಿಕಾರಿಗಳ ಪರ ಬ್ಯಾಟ್ ಬೀಸಿದ ಸುಪ್ರೀಂಕೋರ್ಟ್| 'ಸೇನೆಗೆ ಮಹಿಳೆ ಹಾಗೂ ಪುರುಷ ಎಂಬ ಬೇಧಭಾವ ಇಲ್ಲ'| ಮಹಿಳಾ ಅಧಿಕಾರಿಗಳಿಗೆ ಸೈನ್ಯ ತುಕಡಿಯ ಮುಂದಾಳತ್ವ ಕೊಡಿ ಎಂದ ಸುಪ್ರೀಂಕೋರ್ಟ್ | ನ್ಯಾ. ಚಂದ್ರಚೂಡ್‌ ಹಾಗೂ ಅಜಯ್ ರಸ್ತೋಗಿ ನೇತೃತ್ವದ ದ್ವಿಸದಸ್ಯ ಪೀಠ| ಮಹಿಳಾ ಅಧಿಕಾರಿಗಳನ್ನು ಖಾಯಂಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಿಸಿದ ನ್ಯಾಯಪೀಠ|

ನವದೆಹಲಿ(ಜ.30): ಭಾರತೀಯ ಸೇನೆಯಲ್ಲಿ ಮಹಿಳಾ ಅಧಿಕಾರಿಗಳಿಗೆ ಕಮಾಂಡ್ ಪೋಸ್ಟ್(ಯುದ್ಧ ಭೂಮಿಯಲ್ಲಿ ಕರ್ತವ್ಯ) ನೀಡದಿರುವ ಕುರಿತು ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಸೇನೆಗೆ ಮಹಿಳೆ ಹಾಗೂ ಪುರುಷ ಎಂಬ ಬೇಧಭಾವ ಇಲ್ಲ. ಅದಾಗ್ಯೂ ಮಹಿಳಾ ಅಧಿಕಾರಿಗಳಿಗೆ ಸೈನ್ಯ ತುಕಡಿಯ ಮುಂದಾಳತ್ವ ವಹಿಸದಿರುವುದು ಆಶ್ಚರ್ಯ ತಂದಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.

ಮಹಿಳಾ ಬಲ: ಗಣರಾಜ್ಯೋತ್ಸವ ಪರೇಡ್ ಮುನ್ನಡೆಸಿದ ಕ್ಯಾಪ್ಟನ್ ತಾನ್ಯಾ!

ಕೂಡಲೇ ಮಹಿಳಾ ಸೇನಾಧಿಕಾರಿಗಳಿಗೆ ಕಮಾಂಡ್ ಪೋಸ್ಟ್ ನೀಡಲು ಭಾರತೀಯ ಸೇನೆ ಮುಂದಾಗಬೇಕು ಎಂದು ನ್ಯಾ. ಚಂದ್ರಚೂಡ್‌ ಹಾಗೂ ಅಜಯ್ ರಸ್ತೋಗಿ ನೇತೃತ್ವದ ದ್ವಿಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.

ಸೈನ್ಯದಲ್ಲಿ ಮಹಿಳಾ ಅಧಿಕಾರಿಗಳನ್ನು ಖಾಯಂಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ ನ್ಯಾಯಪೀಠ, ಇದೀಗ ಮಹಿಳಾ ಅಧಿಕಾರಿಗಳಿಗೆ ಸೈನ್ಯ ತುಕಡಿಯ ಮುಮದಾಳತ್ವ ವಹಿಸುವ ಕಾಲ ಬಂದಿದೆ ಎಂದು ಹೇಳಿತು.

ಗಮನ ಸೆಳೆದ CRPF ವುಮೆನ್ ಡೇರ್‌ಡೆವಿಲ್ಸ್ ಸಾಹಸ ಪ್ರದರ್ಶನ!

ಸೈನ್ಯದಲ್ಲಿ ಪುರುಷ ಅಧಿಕಾರಿಗಳು ನಿರ್ವಹಿಸುವ ಎಲ್ಲಾ ಕರ್ತವ್ಯಗಳನ್ನು ನಿಭಾಯಿಸಲು ಮಹಿಳಾ ಅಧಿಕಾರಿಗಳೂ ಸಶಕ್ತರಾಗಿದ್ದು, ಅವರಿಗೆ ಕೇವಲ ಕಚೇರಿ ಕೆಲಸ ನೀಡುವುದು ಸಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.

ಮುಧೋಳದ ಅನ್ಮೋಲ್‌ ನೌಕಾಪಡೆ ಮಹಿಳಾ ಕ್ಯಾಪ್ಟನ್‌

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಟಿಹಾರ್ ಜಂಕ್ಷನ್‌ನಲ್ಲಿ ಮಹಿಳೆಯ ಭಯಾನಕ ಅನುಭವ: 30-40 ಪುರುಷರು ನುಗ್ಗಲು ಯತ್ನ, ಶೌಚಾಲಯದಲ್ಲಿ ಸಿಲುಕಿದ ಮಹಿಳೆ!
ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!