'ಏ ಲೋ ಆಜಾದಿ..'ಸಿಎಎ ವಿರೋಧಿಗಳತ್ತ ಗುಂಡು ಹಾರಿಸಿದ ಆಗುಂತಕ!

Suvarna News   | ANI
Published : Jan 30, 2020, 02:27 PM ISTUpdated : Jan 30, 2020, 04:59 PM IST
'ಏ ಲೋ ಆಜಾದಿ..'ಸಿಎಎ ವಿರೋಧಿಗಳತ್ತ ಗುಂಡು ಹಾರಿಸಿದ ಆಗುಂತಕ!

ಸಾರಾಂಶ

ಸಿಎಎ ವಿರೋಧಿ ಹೋರಾಟಗಾರರ ಮೇಲೆ ಗುಂಡಿನ ದಾಳಿ| ದೆಹಲಿಯ ಜಾಮಿಯಾ ಮಿಲ್ಲಿಯಾ ವಿವಿ ಬಳಿ ಘಟನೆ| ಸಿಎಎ ವಿರೋಧಿ ಪ್ರತಿಭಟನಾಕಾರರತ್ತ ಗುಂಡು ಹಾರಿಸಿದ ಆಗುಂತಕ| ಏ ಲೋ ಆಜಾದಿ..'(ಸ್ವಾತಂತ್ರ್ಯ ತೋಗೊಳ್ಳಿ) ಅರಚಿ ಗುಂಡು ಹಾರಿಸಿದ ಆಗುಂತಕ| ಪ್ರದರ್ಶನಕಾರರ ಮೇಲೆ ಗುಂಡು ಹಾರಿಸಿದ ವ್ಯಕ್ತಿಯನ್ನು ಬಂಧಿಸಿದ ಪೊಲೀಸರು|

ನವದೆಹಲಿ(ಜ.30): ಸಿಎಎ ವಿರೋಧಿ ಪ್ರದರ್ಶನಕಾರರತ್ತ ಆಗುಂತಕನೋರ್ವ ಗುಂಡು ಹಾರಿಸಿದ ಘಟನೆ ದೆಹಲಿಯ ಜಾಮಿಯಾ ಮಿಲ್ಲಿಯಾ ವಿವಿ ಬಳಿ ನಡೆದಿದೆ.

"

ಸಿಎಎ ವಿರೋಧಿ ಪ್ರತಿಭಟನಾಕಾರರು ಮೆರವಣಿಗೆ ಹೊರಟಿದ್ದಾಗ ಏಕಾಏಕಿ ನುಗ್ಗಿದ ಆಗುಂತಕ, ತನ್ನ ಬಳಿಯಿದ್ದ ಪಿಸ್ತೂಲಿನಿಂದ ಪ್ರದರ್ಶನಕಾರರತ್ತ ಗುಂಡು ಹಾರಿಸಿದ್ದಾನೆ.

ಸಿಎಎ ವಿರೋಧಿಗಳಿಗೆ ‘ಗೋಲಿ ಮಾರೋ’ ಎಂದ ಕೇಂದ್ರ ಸಚಿವ!

ಏಕಾಏಕಿ ಪಿಸ್ತೂಲನ್ನು ಹೊರತೆಗೆದ ಆಗುಮತಕ, 'ಏ ಲೋ ಆಜಾದಿ..'(ಸ್ವಾತಂತ್ರ್ಯ ತೋಗೊಳ್ಳಿ)ಎಂದು ಅರಚುತ್ತಾ ಪ್ರದರ್ಶನಕಾರರತ್ತ ಗುಂಡು ಹಾರಿಸಿದ್ದಾನೆ.

ಈ ವೇಳೆ ಸಿಎಎ ವಿರೋಧಿ ಪ್ರತಿಭಟನಾಕಾರನೋರ್ವನಿಗೆ ಗುಂಡು ತಗುಲಿದ್ದು, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸದ್ಯ ಗುಂಡು ಹಾರಿಸಿದ ಆಗುಂತಕನನ್ನು ಪೊಲೀಸರು ಬಂಧಿಸಿದ್ದು, ಆತನಿಂದ ಪಿಸ್ತೂಲನ್ನು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
 

ಜನವರಿ 30ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ನ್ಯಾ। ಸ್ವಾಮಿನಾಥನ್‌ ವಾಗ್ದಂಡನೆಗೆ 56 ನಿವೃತ್ತ ಜಡ್ಜ್‌ಗಳ ಕಿಡಿ
ಕೊಬ್ಬರಿ ರೈತರಿಗೆ ಕೇಂದ್ರ ಬಂಪರ್ : ಬೆಂಬಲ ಬೆಲೆ ಹೆಚ್ಚಳ