ಪ್ರೇಮಿ ವರಿಸಲು ಹೋದವಳು ಇನ್ನೊಬ್ಬನ ವರಿಸಿ ಬಂದಳು!

Kannadaprabha News   | Kannada Prabha
Published : Sep 01, 2025, 05:29 AM IST
friendship marriage rising trend urban youth india

ಸಾರಾಂಶ

ಪ್ರೇಮಿಯನ್ನು ಮದುವೆಯಾಗಲು ಮನೆ ಬಿಟ್ಟು ಓಡಿಹೋಗಿದ್ದ ಯುವತಿ ಆತ ಸಿಗದೇ ಇದ್ದಾಗ, ರೈಲು ನಿಲ್ದಾಣದಲ್ಲಿ ಸಿಕ್ಕ ಮತ್ತೊಬ್ಬ ವ್ಯಕ್ತಿಯನ್ನು ಮದುವೆಯಾಗಿ ಮನೆಗೆ ಮರಳಿದ ವಿಚಿತ್ರ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.

ಇಂದೋರ್‌: ಪ್ರೇಮಿಯನ್ನು ಮದುವೆಯಾಗಲು ಮನೆ ಬಿಟ್ಟು ಓಡಿಹೋಗಿದ್ದ ಯುವತಿ ಆತ ಸಿಗದೇ ಇದ್ದಾಗ, ರೈಲು ನಿಲ್ದಾಣದಲ್ಲಿ ಸಿಕ್ಕ ಮತ್ತೊಬ್ಬ ವ್ಯಕ್ತಿಯನ್ನು ಮದುವೆಯಾಗಿ ಮನೆಗೆ ಮರಳಿದ ವಿಚಿತ್ರ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.

ಶ್ರದ್ಧಾ ಎಂಬಾಕೆ ಸಾರ್ಥಕ್‌ನನ್ನು ಪ್ರೀತಿಸುತ್ತಿದ್ದಳು. ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು. ಆತನನ್ನು ಮದುವೆಯಾಗಲು ಶ್ರದ್ಧಾ ಮನೆಯಿಂದ ಓಡಿ ಹೋಗಿದ್ದಳು. ಆದರೆ ರೈಲು ನಿಲ್ದಾಣದಲ್ಲಿ ಸಾರ್ಥಕ್‌ ‘ನಾನು ನಿನ್ನನ್ನು ಮದುವೆಯಾಗುವುದಿಲ್ಲ’ ಎಂದು ಹೇಳಿ ಹೊರಟುಹೋಗಿದ್ದಾನೆ.

ಇದರಿಂದ ತೀವ್ರವಾಗಿ ನೊಂದ ಶ್ರದ್ಧಾ, ದಿಕ್ಕು ದೆಸೆಯಿಲ್ಲದೇ ಯಾವುದೋ ರೈಲು ಹತ್ತಿ ರತ್ಲಾಂಗೆ ಬಂದಿದ್ದಾಳೆ. ಅಲ್ಲಿ ಅದೃಷ್ಟಕ್ಕೆ ಶ್ರದ್ಧಾ ಕಾಲೇಜಿನಲ್ಲಿ ವಿದ್ಯುತ್‌ ಕೆಲಸ ಮಾಡಿದ್ದ ಎಲೆಕ್ಟ್ರಿಶಿಯನ್‌ ಭೇಟಿಯಾಗಿ, ಆಕೆಯ ಮನವೊಲಿಸಿ ಮನೆಗೆ ಕಳುಹಿಸಲು ಯತ್ನಿಸಿದ್ದಾನೆ. ಆದರೆ ಇದಕ್ಕೆ ಒಪ್ಪದ ಶ್ರದ್ಧಾ ‘ನಾನು ಮದುವೆಯಾಗಲು ಬಂದಿದ್ದೇನೆ. ಈಗ ಒಬ್ಬಂಟಿಯಾಗಿ ಮನೆಗೆ ಹೋಗುವುದಿಲ್ಲ’ ಎಂದು ಹಠ ಹಿಡಿದಿದ್ದಾಳೆ. ಈ ವೇಳೆ ನಾನೇ ಮದುವೆ ಆಗುತ್ತೇನೆ ಎಂದಿದ್ದಾನೆ. ಅದಕ್ಕೆ ಆಕೆಯೂ ಒಪ್ಪಿದ ಕಾರಣ ಇಬ್ಬರೂ ಮದುವೆಯಾಗಿದ್ದಾರೆ. ಬಳಿಕ ಇಬ್ಬರೂ ಶ್ರದ್ಧಾಳ ಮನೆಗೆ ಬಂದು ತಂದೆಯ ಆಶೀರ್ವಾದ ಪಡೆದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..