120 ಜನ​ರಿಂದ ಯೋಧನ ಪತ್ನಿ ಅರೆ​ಬೆ​ತ್ತಲೆ ಮಾಡಿ ಹಲ್ಲೆ ಆರೋಪ: ಇದು ಕಟ್ಟುಕತೆ ಎಂದ ತಮಿಳುನಾಡು ಪೊಲೀಸ್‌

By Kannadaprabha NewsFirst Published Jun 12, 2023, 9:31 AM IST
Highlights

ಪ್ರಭಾ​ಕ​ರನ್‌ ಪತ್ನಿ ಹಾಗೂ ಆಕೆಯ ತಾಯಿ ಅಂಗ​ಡಿ​ಯಲ್ಲೇ ಇದ್ದರೂ ಅವ​ರಿಗೆ ಉದ್ರಿ​ಕ್ತರು ಏನೂ ಮಾಡ​ಲಿ​ಲ್ಲ’ ಎಂದು ಪೊಲೀ​ಸರು ಹೇಳಿದ್ದಾ​ರೆ.

ಚೆನ್ನೈ (ಜೂನ್‌ 12, 2023): ತಮಿ​ಳು​ನಾ​ಡಿನ ತಿರು​ವಣ್ಣಾಮಲೈ​ನಲ್ಲಿ ಸೇನಾ ಯೋಧರೊಬ್ಬರ ಪತ್ನಿ​ಯನ್ನು 120 ಜನರು ಅರೆ​ಬೆ​ತ್ತಲೆ ಮಾಡಿ ಹಲ್ಲೆ ನಡೆ​ಸಿದ ಆರೋಪ ಕೇಳಿ​ಬಂದಿದೆ. ಖುದ್ದು ಯೋಧ ಪ್ರಭಾ​ಕ​ರನ್‌ ಈ ಆರೋಪ ಮಾಡಿ​ದ್ದಾರೆ. ಆದರೆ ಈ ಆರೋ​ಪ​ವನ್ನು ಪೊಲೀಸರು ನಿರಾ​ಕ​ರಿ​ಸಿದ್ದು, ‘ಇದು ಉತ್ಪ್ರೇ​ಕ್ಷಿತ ಕಟ್ಟು ಕತೆ’ ಎಂದು ಸ್ಪಷ್ಟನೆ ನೀಡಿ​ದ್ದಾ​ರೆ.

ಟ್ವಿಟ್ಟರ್‌ನಲ್ಲಿ ಲೆ.ಕ. ಎನ್‌.ತ್ಯಾಗ​ರಾ​ಜನ್‌ ಅವರು ವಿಡಿ​ಯೋ​ವೊಂದನ್ನು ಹಾಕಿದ್ದು, ಅದ​ರಲ್ಲಿ ಸೇನಾ ಯೋಧ ಹವಿ​ಲ್ದಾರ್‌ ಪ್ರಭಾ​ಕ​ರನ್‌ ಮಾತ​ನಾ​ಡಿ​ದ್ದಾರೆ. ‘ನನ್ನ ಪತ್ನಿ ತಿರುವಣ್ಣಾಮಲೈ​ನಲ್ಲಿ ಅಂಗಡಿ ನಡೆ​ಸು​ತ್ತಾಳೆ. ಅಲ್ಲಿ 120 ಗೂಂಡಾ​ಗಳು ಬಂದು ಅಂಗ​ಡಿ​ಯ​ಲ್ಲಿ​ನ ವಸ್ತು​ಗ​ಳನ್ನು ರಸ್ತೆಗೆ ಎಸೆ​ದಿ​ದ್ದಾರೆ. ನನ್ನ ಕುಟುಂಬಕ್ಕೆ ಚೂರಿ ತೋರಿಸಿ ಬೆದ​ರಿ​ಸಿ​ದ್ದಾರೆ ಹಾಗೂ ಪತ್ನಿ​ಯನ್ನು ಅರೆನ​ಗ್ನಗೊಳಿಸಿ ಭೀಕ​ರ​ವಾಗಿ ಹಲ್ಲೆ ಮಾಡಿ​ದ್ದಾರೆ. ದಯ​ಮಾಡಿ ತಮಿ​ಳು​ನಾಡಿ ಡಿಜಿಪಿ ಅವರು ಕ್ರಮ ಕೈಗೊ​ಳ್ಳ​ಬೇ​ಕು’ ಎಂದು ಕೋರಿ​ದ್ದಾ​ರೆ.

Latest Videos

ಇದನ್ನು ಓದಿ: OROP ಪಿಂಚಣಿ ಲೆಕ್ಕಾಚಾರ ಸೂತ್ರಕ್ಕೆ ವಿರೋಧ: ದೇಶದ ಹಲವು ನಿವೃತ್ತ ಸೈನಿಕರ ಪ್ರತಿಭಟನೆ

ಇದು ಸುಳ್ಳು- ಪೊಲೀಸರು:
ಆದರೆ ತಿರು​ವ​ಣ್ಣಾ​ಮ​ಲೈನ ಕಂಧ​ವ​ಸಾಲ್‌ ಠಾಣೆ ಪೊಲೀ​ಸರು ಈ ಆರೋಪ ನಿರಾ​ಕ​ರಿ​ಸಿ​ದ್ದಾ​ರೆ. ‘ಪ್ರ​ಭಾ​ಕ​ರನ್‌ ಅವರ ಮಾವ ಸೆಲ್ವ​ಮೂ​ರ್ತಿ 9.5 ಲಕ್ಷ ರೂ. ಲೀಸ್‌ ಮೇಲೆ ಅಂಗ​ಡಿ​ಯೊಂದನ್ನು ನಡೆ​ಸು​ತ್ತಿ​ದ್ದರು. ಲೀಸ್‌ ನೀಡಿದ್ದ ರಾಮು ಅವರು, ‘9.5 ಲಕ್ಷ ರೂ. ಮರ​ಳಿ​ಸು​ತ್ತೇವೆ. ಅಂಗ​ಡಿ​ಯನ್ನು ವಾಪಸ್‌ ಕೊಡಿ’ ಎಂದು ಕೇಳಿ​ದ್ದರು. ಮೊದಲು ‘ಹೂಂ’ ಎಂದಿದ್ದ ಸೆಲ್ವ​ಮೂ​ರ್ತಿ ನಂತರ ಇದಕ್ಕೆ ನಿರಾ​ಕ​ರಿ​ಸಿ​ದರು. 9.5 ಲಕ್ಷ ರೂ. ಕೊಡಲು ಹೋಗಿದ್ದ ರಾಮು​ವಿನ ಮೇಲೆ ಪ್ರಭಾ​ಕ​ರನ್‌ ಸೆಲ್ವ​ಮೂರ್ತಿ ಮಕ್ಕ​ಳು ಭೀಕರ ಹಲ್ಲೆ ಮಾಡಿ​ದರು. ಆಗ ರಸ್ತೆ​ಯಲ್ಲಿ ಹೋಗು​ತ್ತಿದ್ದ ಜನರು ರಾಮು ಪರ ನಿಂತರು ಹಾಗೂ ಅಂಗ​ಡಿ​ಯ​ಲ್ಲಿನ ವಸ್ತು​ಗ​ಳನ್ನು ರಸ್ತೆಗೆ ಎಸೆ​ದರು. ಈ ವೇಳೆ ಪ್ರಭಾ​ಕ​ರನ್‌ ಪತ್ನಿ ಹಾಗೂ ಆಕೆಯ ತಾಯಿ ಅಂಗ​ಡಿ​ಯಲ್ಲೇ ಇದ್ದರೂ ಅವ​ರಿಗೆ ಉದ್ರಿ​ಕ್ತರು ಏನೂ ಮಾಡ​ಲಿ​ಲ್ಲ’ ಎಂದು ಪೊಲೀ​ಸರು ಹೇಳಿದ್ದಾ​ರೆ.

‘ಆದರೆ ಮರು​ದಿನ ಪ್ರಭಾ​ಕ​ರನ್‌ ಪತ್ನಿ ಆಸ್ಪ​ತ್ರೆಗೆ ದಾಖ​ಲಾಗಿ ನನ್ನ ಮೇಲೆ ಹಲ್ಲೆ ಮಾಡ​ಲಾ​ಗಿದೆ ಎಂದು ಚಿಕಿ​ತ್ಸೆಗೆ ಕೋರಿ​ದ್ದಳು. ಆದರೆ ಆಕೆಯ ದೇಹದ ಮೇಲೆ ಯಾವುದೇ ಗಾಯ ಕಂಡು​ಬಂದಿಲ್ಲ. ಪ್ರಭಾ​ಕ​ರನ್‌ ಕಟ್ಟು ​ಕತೆ ಸೃಷ್ಟಿ​ಸಿ​ದ್ದಾ​ರೆ’ ಎಂದು ಸ್ಪಷ್ಟ​ಪ​ಡಿ​ಸಿ​ದ್ದಾ​ರೆ. ಆದರೆ ಯೋಧನ ಕುಟುಂಬಕ್ಕೆ ನ್ಯಾಯ ದೊರ​ಕಿ​ಸಿ​ಕೊ​ಡು​ತ್ತೇವೆ ಎಂದು ತಮಿ​ಳು​ನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾ​ಮಲೈ ಹೇಳಿ​ದ್ದಾ​ರೆ.

ಇದನ್ನೂ ಓದಿ: ಭಾರತ ಯಾವುದೇ ದೇಶದ ಮಿಲಿಟರಿ ಮೈತ್ರಿಯ ಭಾಗವಾಗಿಲ್ಲ: ಅಮೆರಿಕ ಜತೆಗಿನ ಸಂಬಂಧದ ಬಗ್ಗೆ ಚೀನಾಗೆ ಸ್ಪಷ್ಟನೆ

click me!