
ನವದೆಹಲಿ (ಫೆ.23): ಕಿಶ್ತ್ವಾರ್ ಜಿಲ್ಲೆಯಲ್ಲಿ ನಡೆದ ಎನ್ಕೌಂಟರ್ನಲ್ಲಿ ಭದ್ರತಾ ಪಡೆಗಳು ಮೋಸ್ಟ್ ವಾಟೆಂಡ್ ಉಗ್ರ ಸೈಫುಲ್ಲಾ ಸೇರಿದಂತೆ ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ (ಜೆಇಎಂ) ನ ಮೂವರು ಸದಸ್ಯರನ್ನು ಹೊಡೆದುರುಳಿಸಿದ ಒಂದು ದಿನದ ನಂತರ, ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದಕ ಜಾಲಕ್ಕೆ ಭಾರಿ ಹೊಡೆತ ನೀಡಿರುವುದಾಗಿ ಭಾರತೀಯ ಸೇನೆ ಸೋಮವಾರ ತಿಳಿಸಿದೆ. X ನಲ್ಲಿ ಪೋಸ್ಟ್ ಮಾಡಿರುವ ಭಾರತೀಯ ಸೇನೆಯ ವೈಟ್ ನೈಟ್ ಕಾರ್ಪ್ಸ್ ಕಿಶ್ತ್ವಾರ್ ಪ್ರದೇಶದಲ್ಲಿ 326 ದಿನಗಳಲ್ಲಿ ನಿರಂತರ ಮತ್ತು ಶ್ರಮದಾಯಕವಾದ ಹೈ ಆಲ್ಟಿಟ್ಯೂಡ್ ಜಂಟಿ ಕಾರ್ಯಾಚರಣೆಗಳನ್ನು ನಡೆಸಿದೆ ಎಂದು ಹೇಳಿದೆ.
"ಶೀತ, ಆರ್ದ್ರ ಮತ್ತು ಹಿಮಪಾತದ ಸವಾಲಿನ ಪರಿಸ್ಥಿತಿಗಳಲ್ಲಿ ಪಡೆಗಳು ಭಯೋತ್ಪಾದಕರನ್ನು ಪತ್ತೆಹಚ್ಚಿದವು, ಇದು ಬಹು ಸಂಪರ್ಕಗಳಿಗೆ ಕಾರಣವಾಯಿತು. ನಾಗರಿಕ ಮತ್ತು ಮಿಲಿಟರಿ ಗುಪ್ತಚರ ಸಂಸ್ಥೆಗಳು ಸ್ಥಾಪಿಸಿದ ಸುಸಂಘಟಿತ ಗುಪ್ತಚರ ಗ್ರಿಡ್ ಅನ್ನು ಆಧರಿಸಿದ #WhiteKnightCorps, @JmuKmrPolice ಮತ್ತು #CRPF ಪಡೆಗಳು ಅಂತಿಮವಾಗಿ ಕಿಶ್ತ್ವಾರ್ನ ಚತ್ರೂನಲ್ಲಿ ಎಲ್ಲಾ ಏಳು ಭಯಾನಕ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಿವೆ" ಎಂದು ಅದು ಹೇಳಿದೆ.
ಈ ಕಾರ್ಯಾಚರಣೆಗಳಲ್ಲಿ ಎಫ್ಪಿವಿ ಡ್ರೋನ್ಗಳು, ಸ್ಯಾಟಲೈಟ್ ಇಮೇಜರಿ ಮತ್ತು ಆರ್ಪಿಎಗಳು/ಯುಎವಿಗಳ ರೂಪದಲ್ಲಿ ಉನ್ನತ ದರ್ಜೆಯ ತಂತ್ರಜ್ಞಾನವನ್ನು ಬಳಸಲಾಗಿದೆ ಎಂದು ಸೇನೆ ತಿಳಿಸಿದೆ.
"ನಮ್ಮ ಪಡೆಗಳ ನಿರಂತರ ಅನ್ವೇಷಣೆ ಮತ್ತು ದೃಢಸಂಕಲ್ಪ, ಸೈಫುಲ್ಲಾ ಮತ್ತು ಅವನ ಸಹಚರರನ್ನು ನಿರ್ಮೂಲನೆ ಮಾಡುವಲ್ಲಿ ಯಶಸ್ವಿಯಾಗಿದೆ, ಸಮವಸ್ತ್ರದಲ್ಲಿರುವ ನಮ್ಮ ಸೈನಿಕರ ಮತ್ತು ಗುಪ್ತಚರ ಸಂಸ್ಥೆಗಳ ದೃಢನಿಶ್ಚಯ, ಧೈರ್ಯ ಮತ್ತು ಶೌರ್ಯದ ವಿರುದ್ಧ ಯಾವುದೂ ನಿಲ್ಲಲು ಸಾಧ್ಯವಿಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ" ಎಂದು ಅದು ಹೇಳಿದೆ. ಪೋಸ್ಟ್ನಲ್ಲಿ ಇಲ್ಲಿಯವರೆಗೆ ಕೊಲ್ಲಲ್ಪಟ್ಟ ಉನ್ನತ ಜೆಇಎಂ ಭಯೋತ್ಪಾದಕರ ಚಿತ್ರಗಳಿದ್ದು, ಅವರ ಮುಖಗಳ ಮೇಲೆ ಕ್ರಾಸ್ ಚಿಹ್ನೆ ಹಾಕಲಾಗಿದೆ.
ಕಳೆದ ವಾರ ನಡೆದ ಎನ್ಕೌಂಟರ್ನಲ್ಲಿ ಕೊಲ್ಲಲ್ಪಟ್ಟವರಲ್ಲಿ ಕುಖ್ಯಾತ ಜೆಇಎಂ ಕಮಾಂಡರ್ ಸೈಫುಲ್ಲಾ ಕೂಡ ಸೇರಿದ್ದಾನೆ, ಈತ ಸುಮಾರು ಐದು ವರ್ಷಗಳ ಹಿಂದೆ ಜಮ್ಮು ಮತ್ತು ಕಾಶ್ಮೀರಕ್ಕೆ ನುಸುಳಿ ಆ ಪ್ರದೇಶದಲ್ಲಿ ಸಕ್ರಿಯನಾಗಿದ್ದನೆಂದು ವರದಿಯಾಗಿದೆ. ಜುಲೈ 2024 ರಲ್ಲಿ ನಾಲ್ವರು ಸೈನಿಕರನ್ನು ಬಲಿತೆಗೆದುಕೊಂಡ ದಾಳಿ ಸೇರಿದಂತೆ ಭದ್ರತಾ ಪಡೆಗಳ ಮೇಲೆ ಹಲವಾರು ಮಾರಕ ದಾಳಿಗಳ ಮಾಸ್ಟರ್ ಮೈಂಡ್ ಈತನಾಗಿದ್ದ. ಸೈಫುಲ್ಲಾ ಹಿಂದೆ ಹಲವಾರು ಎನ್ಕೌಂಟರ್ಗಳಿಂದ ತಪ್ಪಿಸಿಕೊಂಡಿದ್ದ.
ಇದಕ್ಕೂ ಮೊದಲು, ಭಯೋತ್ಪಾದಕರನ್ನು ತಟಸ್ಥಗೊಳಿಸಲು "ತ್ವರಿತ ಮತ್ತು ನಿಖರವಾದ" ಕ್ರಮ ಕೈಗೊಂಡಿದ್ದಕ್ಕಾಗಿ ಉತ್ತರ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಪ್ರತೀಕ್ ಶರ್ಮಾ ಅವರು ವೈಟ್ ನೈಟ್ ಕಾರ್ಪ್ಸ್ ಪಡೆಗಳನ್ನು ಶ್ಲಾಘಿಸಿದರು. ಚಟ್ರೂ ಬೆಲ್ಟ್ನಲ್ಲಿರುವ ಪಾಸರ್ಕುಟ್ನ ಸಾಮಾನ್ಯ ಪ್ರದೇಶದಲ್ಲಿ "ಟ್ರಾಶಿ-I" ಕಾರ್ಯಾಚರಣೆಯ ಸಮಯದಲ್ಲಿ ಭಯೋತ್ಪಾದಕರನ್ನು ಹೆಡೆಮುರಿ ಕಟ್ಟಲಾಯಿತು ಮತ್ತು ಎರಡು AK-47 ರೈಫಲ್ಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಯಿತು.
ಭಾನುವಾರ ಮೂವರು ಭಯೋತ್ಪಾದಕರ ಹತ್ಯೆಯೊಂದಿಗೆ, ಈ ವರ್ಷ ಜಮ್ಮು ಪ್ರದೇಶದಲ್ಲಿ ನಡೆದ ಪ್ರತ್ಯೇಕ ಎನ್ಕೌಂಟರ್ಗಳಲ್ಲಿ ಭದ್ರತಾ ಪಡೆಗಳು ಒಟ್ಟು ಏಳು ಜೆಇಎಂ ಉಗ್ರರನ್ನು ಹೊಡೆದುರುಳಿಸಿದೆ. ಇದಕ್ಕೂ ಮೊದಲು, ಫೆಬ್ರವರಿ 4 ರಂದು ಉಧಂಪುರದ ರಾಮನಗರ ಅರಣ್ಯದಲ್ಲಿ ಇಬ್ಬರು ಭಯೋತ್ಪಾದಕರನ್ನು ಕೊಲ್ಲಲಾಗಿತ್ತು ಮತ್ತು ಜನವರಿ 23 ರಂದು ಕಥುವಾದ ಪರ್ಹೆತಾರ್ ಗ್ರಾಮದಲ್ಲಿ ಒಬ್ಬನನ್ನು ಹತ್ಯೆ ಮಾಡಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ