ಉಗ್ರರು, ರಾಷ್ಟ್ರ ವಿರೋಧಿಗಳಿಂದ ತುಂಬಿರುವ ಬಂಗಾಳ ಕಾಶ್ಮೀರಕ್ಕಿಂತ ಕಡೆಯಾಗಿದೆ

Published : Nov 15, 2020, 09:33 PM IST
ಉಗ್ರರು, ರಾಷ್ಟ್ರ ವಿರೋಧಿಗಳಿಂದ ತುಂಬಿರುವ ಬಂಗಾಳ ಕಾಶ್ಮೀರಕ್ಕಿಂತ ಕಡೆಯಾಗಿದೆ

ಸಾರಾಂಶ

ಉಗ್ರರ ತಾಣ, ರಾಷ್ಟ್ರ ವಿರೋಧಿಗಳ ನೆಲೆಯಾಗಿರುವ ಪಶ್ಚಿಮ ಬಂಗಾಳ ಇದೀಗ ಕಾಶ್ಮೀರಕ್ಕಿಂತ ಶೋಚನೀಯವಾಗಿದೆ. ಇದು ಪಶ್ಚಿಮ ಬಂಗಾಳದ ಪರಿಸ್ಥಿತಿ. ಬಂಗಾಳ , ಕಾಶ್ಮೀರಕ್ಕಿಂತ ಕಡೆಯಾಗಲು ಕಾರಣವೇನು? ಇಲ್ಲಿದೆ ವಿವರ.

ಕೋಲ್ಕತಾ(ನ.15): ಕವಿ, ಕಾದಂಬರಿಕಾರರ ನಾಡು, ಶಾಂತಿ, ಸೌಹಾರ್ಧತೆಯ ಬೀಡಾಗಿದ್ದ ಪಶ್ಚಿಮ ಬಂಗಾಳ ಇದೀಗ ಕಾಶ್ಮೀರಕ್ಕಿಂತ ಕಡೆಯಾಗಿದೆ. ಪಶ್ಚಿಮ ಬಂಗಾಳ ಇದೀಗ ಉಗ್ರರ ತಾಣವಾಗಿ ಮಾರ್ಪಟ್ಟಿದೆ. ರಾಷ್ಟ್ರವಿರೋಧಿಗಳ ನೆಲೆಯಾಗಿ ಬದಲಾಗಿದೆ ಎಂದು ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಹೇಳಿದ್ದಾರೆ. 

ಪಶ್ಚಿಮ ಬಂಗಾಳ ಗೂಂಡಾ ಅಳ್ವಿಕೆಯ ರಾಜ್ಯವಾಗಿದೆ; ಬಿಜೆಪಿ!.

ಕಾಶ್ಮೀರದಲ್ಲೀಗ ಭಯೋತ್ಪಾದಕತೆ ಮರೆಯಾಗುತ್ತಿದೆ. ಆದರೆ ಪಶ್ಚಿಮ ಬಂಗಾಳದಲ್ಲಿ ಪರಿಸ್ಥಿತಿ ಕಾಶ್ಮೀರಕ್ಕಿಂತ ಕಡೆಯಾಗಿದೆ. ಇತ್ತೀಚೆಗೆ ಉತ್ತರ ಬಂಗಾಳ ಅಲಿಪುರದೌರದಲ್ಲಿ 6 ಮಂದಿ ಆಲ್ ಖೈದಾ ಉಗ್ರರನ್ನು ಬಂಧಿಸಲಾಗಿದೆ. ಬಂಗಾಳ ಹಲವೆಡೆ ಉಗ್ರರು ಬೇರೂರಿದ್ದಾರೆ. ಇತ್ತೀಚೆಗೆ ಬಾಂಗ್ಲಾದೇಶ ನಾಯಕ ಖಲೇದಾ ಝಿಯಾ ನೀಡಿದ ಹೇಳಿಕೆ ಬಂಗಾಳಕ್ಕೆ ಹೋಲಿಸಿದರೆ ತಾಳೆಯಾಗುತ್ತಿದೆ ಎಂದು ದಿಲೀಪ್ ಘೋಷ್ ಹೇಳಿದ್ದಾರೆ.

ಭಾರತದಲ್ಲಿ ಉಗ್ರರು ತರಬೇತಿ ಪಡೆಯುತ್ತಿದ್ದಾರೆ. ಬಳಿಕ ಬಾಂಗ್ಲಾದೇಶಕ್ಕೆ ನುಸುಳಿ ಇಲ್ಲಿ ಶಾಂತಿ ಕದಡುತ್ತಿದ್ದಾರೆ ಎಂದು ಖಲೇದಾ ಝಿಯಾ ಹೇಳಿದ್ದರು. ಬಂಗಾಳದಲ್ಲಿ ಉಗ್ರರು ತುಂಬಿಕೊಳ್ಳುತ್ತಿದ್ದಾರೆ. ಉಗ್ರರ ಬಹುದೊಡ್ಡ ನೆಟ್‌ವರ್ಕ್ ಬಂಗಾಳದ ಸದ್ದಿಲ್ಲದೆ ಕಾರ್ಯನಿರ್ವಹಿಸುತ್ತಿದೆ. ಇತ್ತಿಚೆಗೆ ನಡೆದ ಉಗ್ರರ ಬಧವನೇ ಇದಕ್ಕೆ ಸಾಕ್ಷಿ. ಇವರಿಗೆ ರಾಷ್ಟ್ರವಿರೋಧಿಗಳು ನೆರವಾಗುತ್ತಿದ್ದಾರೆ. ಇದು ಮತ್ತಷ್ಟು ಆತಂಕ ತರುತ್ತಿದೆ ಎಂದು ಘೋಷ್ ಹೇಳಿದ್ದಾರೆ.

ಬಿಜೆಪಿ ಸಂಸದ‌ ಘೋಷ್‌ ಮೇಲೆ ಹಲ್ಲೆ!.

ಬಂಗಾಳದ ಮುಗ್ದ ಜನತೆ ಆತಂಕದಲ್ಲಿ ದಿನ ದೂಡುತ್ತಿದ್ದಾರೆ. ನನ್ನ ಹೆಸರು ಉಗ್ರರ ಹಿಟ್‌ಲಿಸ್ಟ್‌ನಲ್ಲಿದೆ. ನನ್ನ ಮೇಲೆ ಅಲಿಪುರದೌರದಲ್ಲಿ ದಾಳಿ ಮಾಡಲಾಗಿತ್ತು. ಇದೇ ಜಾಗದಲ್ಲಿ ರೋಹಿಂಗ್ಯ ಮುಸ್ಲಿಂರಿಗೆ ಆಶ್ರಯ ನೀಡಲಾಗಿದೆ. ಪಶ್ಚಿಮ ಬಂಗಾಳ ರೋಹಿಂಗ್ಯ ಸೇರಿದಂತೆ ಇತರ ನುಸುಳುಕೋರರಿಂದ ತುಂಬಿದೆ. ಇವರೆಲ್ಲಾ ಮಮತಾ ಬ್ಯಾನರ್ಜಿ ಹಾಗೂ ತೃಣಮೂಲ ಕಾಂಗ್ರೆಸ್‌ನ ಮತ ಬ್ಯಾಂಕ್‌ ಎಂದು ದಿಲೀಪ್ ಘೋಷ್ ವಾಗ್ದಾಳಿ ನಡೆಸಿದ್ದಾರೆ.

ಕೆಲ ರಾಜಕೀಯ ಪಕ್ಷಗಳು ಉಗ್ರರಿಗೆ ನೆರವು ನೀಡುತ್ತಿರುವುದು ಮತ್ತಷ್ಟು ಆತಂಕ ತಂದಿದೆ. ಇದು ಎಚ್ಚರಿಕೆ ಕರೆಗಂಟೆಯಾಗಿದೆ. ಬಂಗಾಳ ಉಗ್ರರ ಪಾಲಾಗುವುದನ್ನು ತಪ್ಪಿಸಬೇಕಿದೆ ಎಂದು ಘೋಷ್ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಪ್ರಲ್ಹಾದ್ ಜೋಶಿಗೆ ಶಿಕ್ಷಣ ಸಚಿವ ಜವಾಬ್ದಾರಿ, ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಬೆನ್ನಲ್ಲೇ ಕೇಂದ್ರದ ಘೋಷಣೆ
'ಕಂಗ್ರಾಟ್ಸ್ ಮೈ ಡಿಯರ್ ಕಾಕ್ರೋಚ್ಸ್‌..' ಧಮೇಂದ್ರ ಪ್ರಧಾನ್ ರಾಜಿನಾಮೆ ಬೆನ್ನಲ್ಲೇ ನಟ ಪ್ರಕಾಶ್ ರಾಜ್ ಹೇಳಿದ್ದೇನು?