ದೋಣಿ ಹುಟ್ಟು ಹಾಕಿ ಮಕ್ಕಳು, ಗರ್ಭಿಣಿಯರ ಆರೈಕೆ; ಅಂಗನವಾಡಿ ಕಾರ್ಯಕರ್ತೆಗೆ ಸಲಾಂ!

Published : Nov 15, 2020, 05:54 PM ISTUpdated : Nov 15, 2020, 05:55 PM IST
ದೋಣಿ ಹುಟ್ಟು ಹಾಕಿ ಮಕ್ಕಳು, ಗರ್ಭಿಣಿಯರ ಆರೈಕೆ; ಅಂಗನವಾಡಿ ಕಾರ್ಯಕರ್ತೆಗೆ ಸಲಾಂ!

ಸಾರಾಂಶ

ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ವೇಳೆ ಹಲವರಿಗೆ ನೆರವಾಗಿ ಹೀರೋಗಳಾದ ಕತೆ ಗಮನಿಸಿದ್ದೇವೆ. ಇದೀಗ ಕಳೆದ ಎಪ್ರಿಲ್ ತಿಂಗಳಿನಿಂದ ಇದುವರೆಗೆ ನಿರಂತರವಾಗಿ ಗರ್ಭಿಣಿ ಹಾಗೂ ಅಪೌಷ್ಠಿಕ ಮಕ್ಕಳ ಆರೈಕೆ ಮಾಡುತ್ತಿರುವ ಅಂಗನವಾಡಿ ಕಾರ್ಯಕರ್ತೆಗೆ ನಿಜಕ್ಕೂ ಸಲಾಂ ಹೇಳಲೇಬೇಕು. ಕಾರಣ ಪ್ರತಿ ದಿನ 18 ಕಿ.ಮೀ ಸ್ವತಃ ದೋಣಿ ಹುಟ್ಟು ಹಾಕಿ ತೆರಳಿ ಈ ಕೆಲಸ ಮಾಡುತ್ತಿದ್ದಾರೆ.

ನಾಸಿಕ್(ನ.15):  ಬೆಟ್ಟ ಗುಡ್ಡದ ನಡುವೆ ಇರುವ ಬುಡಕಟ್ಟು ಜನಾಂಗ. ವಾಹನ ಸಂಚಾರಕ್ಕೆ ದಾರಿಯೇ ಇಲ್ಲ, ಮತ್ತೊಂದೆಡೆ ನರ್ಮದಾ ನದಿ, ಹೀಗಾಗಿ ಬುಡಕಟ್ಟು ಜನಾಂಗಕ್ಕೆ ತುರ್ತು ಅಗತ್ಯ ಬಿದ್ದರೆ ದೇವರೆ ಗತಿ. ಇಂತಹ ಬುಡಕಟ್ಟು ಜನಾಂಗದ ನೆರವಿಗೆ ನಿಂತಿದ್ದು 27ರ ಹರೆಯದ ಅಂಗನವಾಡಿ ಕಾರ್ಯಕರ್ತೆ ರೇಲು ವಾಸವೆ.

ರಾಜ್ಯದ ಅಂಗನವಾಡಿ ಟೀಚರ್ ಗಳಿಗೆ ಸ್ಮಾರ್ಟ್‌ಫೋನ್‌!.

ಮಹಾರಾಷ್ಟ್ರದ ನಂದೂರ್‌ಬಾರ್ ಜಿಲ್ಲೆಯ ಚಿಮಲ್‌ಖಡಿ ಗ್ರಾಮದಲ್ಲಿ ಹಲವು ಬುಡಕಟ್ಟು ಜನಾಂಗ ವಾಸವಿದೆ. ಇಲ್ಲಿನ ಅಪೌಷ್ಠಿಕತೆಯಿಂದ ಹುಟ್ಟಿದ 25 ಮಕ್ಕಳು ಹಾಗೂ 7 ಗರ್ಭಿಣಿಯರ ಆರೈಕೆಗೆ ಅಂಗನವಾಡಿ ಕಾರ್ಯಕರ್ತೆ ರೇಲು ವಾಸವೆ ಟೊಂಕ ಕಟ್ಟಿ ನಿಂತರು. ಆದರೆ ಚಿಮಲ್‌ಖಡಿ ಗ್ರಾಮಕ್ಕೆ ತೆರಲು ಯಾವುದೇ ಮಾರ್ಗವಿರಲಿಲ್ಲ.

ರೇಲು ವಾಸವೆ ಸ್ಥಳೀಯ ಮೀನುಗಾರರಿಗೆ ಸಣ್ಣ ದೋಣಿ ಪಡೆದುಕೊಂಡಿದ್ದಾಳೆ. ಬಳಿಕ ನರ್ಮದಾ ನದಿ ಮೂಲಕ 9 ಕಿ.ಮೀ ತೆರಳಲು ಹಾಗೂ 9 ಕಿ.ಮೀ ಮರಳಿ ಬರಲು ಒಟ್ಟು 18 ಕಿ.ಮೀ ಸ್ವತಃ ಧೋನಿ ಹುಟ್ಟು ಹಾಕಿ ತೆರಳಿ ಆರೈಕೆ ಮಾಡುತ್ತಿದ್ದಾರೆ. ಕಳೆದ ಎಪ್ರಿಲ್ ತಿಂಗಳಿನಿಂದ ಸದ್ದಿಲ್ಲದೆ ಪ್ರಾಮಾಣಿಕವಾಗಿ ತಮ್ಮ ಕಲಸ ಮಾಡಿದ್ದಾರೆ. ರೇಲು ವಾಸವೆ ಕಾರ್ಯಕ್ಕೆ ಇದೀಗ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರಿಪೇರಿಗೆ 5 ಗಂಟೆ ಬೇಕೆಂದ ರೈಲ್ವೆ ಅಧಿಕಾರಿಗಳು; ಸುತ್ತಿಗೆಯಿಂದ 10 ನಿಮಿಷದಲ್ಲಿ ಸರಿ ಮಾಡಿದ ಅಂಕಲ್
India Latest News Live: ರಿಪೇರಿಗೆ 5 ಗಂಟೆ ಬೇಕೆಂದ ರೈಲ್ವೆ ಅಧಿಕಾರಿಗಳು; ಸುತ್ತಿಗೆಯಿಂದ 10 ನಿಮಿಷದಲ್ಲಿ ಸರಿ ಮಾಡಿದ ಅಂಕಲ್