ಮಹಾಕುಂಭ ಮೇಳ-2025: ಪ್ರಯಾಗರಾಜ್‌ ರೈಲ್ವೆ ನಿಲ್ದಾಣದಲ್ಲಿ ವೇಟಿಂಗ್‌ ಲಾಂಜ್‌, ಭಕ್ತರಿಗೆ ಅನುಕೂಲ!

Published : Dec 14, 2024, 07:19 PM IST
ಮಹಾಕುಂಭ ಮೇಳ-2025: ಪ್ರಯಾಗರಾಜ್‌ ರೈಲ್ವೆ ನಿಲ್ದಾಣದಲ್ಲಿ ವೇಟಿಂಗ್‌ ಲಾಂಜ್‌, ಭಕ್ತರಿಗೆ ಅನುಕೂಲ!

ಸಾರಾಂಶ

ಪ್ರಯಾಗರಾಜ್ ಜಂಕ್ಷನ್‌ನಲ್ಲಿ ಬರುವ ಭಕ್ತರ ಅನುಕೂಲಕ್ಕಾಗಿ ತಾತ್ಕಾಲಿಕ ವಿಶ್ರಾಂತಿ ತಾಣ (ವೇಟಿಂಗ್ ಲಾಂಜ್) ಮಾಡಿದೆ. ಜ. 13ರಿಂದ ಫೆ. 26ರ ವರೆಗೆ 3000 ವಿಶೇಷ ರೈಲು ಸಂಚರಿಸಲಿವೆ. ಹೀಗಾಗಿ ನಾಲ್ಕು ದಿಕ್ಕುಗಳಿಂದ ಭಕ್ತರ ಸಂಖ್ಯೆ ಆಗಮಿಸುತ್ತದೆ. ನೂಕು ನುಗ್ಗಾಟ ಉಂಟಾಗಬಾರದು ಎಂಬ ಉದ್ದೇಶದಿಂದ ಪ್ರತ್ಯೇಕವಾಗಿ ವಿಶ್ರಾಂತಿ ತಾಣ ಮಾಡಲಾಗಿದೆ. 

ಶಿವಾನಂದ ಗೊಂಬಿ 

ಪ್ರಯಾಗರಾಜ್(ಡಿ.14):  ದೇಶದ ಬಹುದೊಡ್ಡ ಆಧ್ಯಾತ್ಮಿಕ ಹಬ್ಬವೆನಿಸಿರುವ ಪ್ರಯಾಗರಾಜದಲ್ಲಿ ನಡೆಯಲಿರುವ 'ಮಹಾಕುಂಭ ಮೇಳ-2025' ದಲ್ಲಿ ಭಾಗವಹಿಸುವ ಭಕ್ತರಿಗೆ ರೈಲು ನಿಲ್ದಾಣದಲ್ಲಿ ವೇಟಿಂಗ್ ಲಾಂಜ್, ಭದ್ರತೆಗಾಗಿ 1160 ಕ್ಕೂ ಅಧಿಕ ಸಿಸಿ ಕ್ಯಾಮೆರಾಗಳು ಕಣ್ಣಾವಲು ಇರಿಸಲಾಗಿದೆ. 

ಪ್ರಯಾಗರಾಜ್ ಜಂಕ್ಷನ್‌ನಲ್ಲಿ ಬರುವ ಭಕ್ತರ ಅನುಕೂಲಕ್ಕಾಗಿ ತಾತ್ಕಾಲಿಕ ವಿಶ್ರಾಂತಿ ತಾಣ (ವೇಟಿಂಗ್ ಲಾಂಜ್) ಮಾಡಿದೆ. ಜ. 13ರಿಂದ ಫೆ. 26ರ ವರೆಗೆ 3000 ವಿಶೇಷ ರೈಲು ಸಂಚರಿಸಲಿವೆ. ಹೀಗಾಗಿ ನಾಲ್ಕು ದಿಕ್ಕುಗಳಿಂದ ಭಕ್ತರ ಸಂಖ್ಯೆ ಆಗಮಿಸುತ್ತದೆ. ನೂಕು ನುಗ್ಗಾಟ ಉಂಟಾಗಬಾರದು ಎಂಬ ಉದ್ದೇಶದಿಂದ ಪ್ರತ್ಯೇಕವಾಗಿ ವಿಶ್ರಾಂತಿ ತಾಣ ಮಾಡಲಾಗಿದೆ. 

ಮಹಾಕುಂಭ ಮೇಳ 'ಏಕತೆಯ ಮಹಾಯಜ್ಞ': ಪಿಎಂ ಮೋದಿ ಬಣ್ಣನೆ

ಭಕ್ತರಿಗೆ ಸಲೀಸಾಗಿ ಗೊತ್ತಾಗಲಿ ಎಂಬ ಉದ್ದೇಶದಿಂದ ನೀಲಿ, ಕೇಸರಿ ಈ ರೀತಿ ಬೇರೆ ಬೇರೆ ಬಣ್ಣ ಬಳಿಯಲಾಗಿದೆ. ಇಲ್ಲೇ ಟಿಕೆಟ್ ನೀಡುವ ವ್ಯವಸ್ಥೆ ಕೂಡಾ ಮಾಡಲಾಗಿದೆ. ಒಂದೊಂದು ವಿಶ್ರಾಂತಿ ತಾಣದಲ್ಲಿ ಏಕಕಾಲಕ್ಕೆ 5 ಸಾವಿರ ಭಕ್ತರು ರೈಲು ಬರುವರೆಗೆ ಉಳಿದುಕೊಳ್ಳಬಹುದಾಗಿದೆ. ಭಕ್ತರಿಗೆ ಮಾಹಿತಿ ನೀಡಲು ಆರ್‌ಪಿಎಫ್, ರೈಲ್ವೆ ಪೊಲೀಸ್ ಹಾಗೂ ರೈಲ್ವೆ ಇಲಾಖೆಯ ಸರಿಸುಮಾರು 150ಕ್ಕೂ ಹೆಚ್ಚು ಸಿಬ್ಬಂದಿ ಒಂದು ವಿಶ್ರಾಂತಿ ತಾಣದಲ್ಲಿ ನಿರಂತರ ಕಾರ್ಯ ನಿರ್ವಹಿಸಲಿದೆ. ಹೀಗಾಗಿ ಯಾವುದೇ ಬಗೆಯ ಗೋಜು-ಗದ್ದಲ, ನೂಕು ನುಗ್ಗಾಟಕ್ಕೆ ಅವಕಾಶ ಕಲ್ಪಿಸದೇ ಭಕ್ತರು ಮಹಾಕುಂಭಕ್ಕೆ ಆಗಮಿಸಿ ಅಲ್ಲಿಂದ ತಮ್ಮ ಮ್ಮ ತಮ್ಮ ಗಮ್ಯ ಸ್ಥಳಕ್ಕೆ ಹೋಗ ಹೋಗಲು ಉತ್ತರ ಮಧ್ಯ ರೈಲ್ವೆ ವಲಯ ವ್ಯವಸ್ಥೆ ಮಾಡಿದೆ. 

ಮಹಾಕುಂಭಕ್ಕೆ ಭರದ ಸಿದ್ಧತೆ, 5,6000 ಕೋಟಿ ರೂ ಅನುದಾನ ನೀಡಿದ ಸಿಎಂ ಯೋಗಿ!

1186 ಸಿಸಿ ಕ್ಯಾಮೆರಾ: 

ಕುಂಭಮೇಳಕ್ಕೆ ಆಗಮಿಸುವವರ ಪೈಕಿ ಬಹುತೇಕರು ಬರುವುದು ರೈಲಿನ ಮೂಲಕವೇ. ಪ್ರಯಾಗರಾಜ್ ಜಂಕ್ಷನ್. ರಾಮಬಾಗ್, ಜೂಸಿ ಸೇರಿ ಪ್ರಯಾಗರಾಜ್‌ ನಗರ ವ್ಯಾಪ್ತಿಯಲ್ಲಿ 9 ರೈಲ್ವೆ ನಿಲ್ದಾಣಗಳಿವೆ. ಈ ಎಲ್ಲ ರೈಲ್ವೆ ನಿಲ್ದಾಣಗಳಲ್ಲಿ ಒಟ್ಟು 1186 ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಇದರಲ್ಲಿ ನೂರಕ್ಕೂ ಹೆಚ್ಚು ಪೇಸ್ ರಿಕನ್ಯಾಜೇಶನ ಸಿಸ್ಟಂ ಕ್ಯಾಮೆರಾಗಳಿವೆ. ಕಂಟ್ರೋಲ್ ರೂಮ್ ನಿರ್ವಹಿಸುತ್ತಿದೆ. ಕಂಟ್ರೋಲ್ ರೂಮ್‌ನಲ್ಲಿ ದಿನದ 24 ಗಂಟೆ 12ಕ್ಕೂ ಅಧಿಕ ಆರ್‌ಪಿಎಫ್‌ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಅತಿ ಅತಿ ದೊಡ್ಡ ಧಾರ್ಮಿಕ ದೊಡ್ಡ ಧಾರ್ಮಿಕ ಹಬ್ಬಕ್ಕೆ ಹಬ್ಬಕ್ಕೆ ಯಾವುದೇ ಆತಂಕವಿಲ್ಲದೇ ಬನ್ನಿ. ನಿಮ್ಮ ರಕ್ಷಣೆಗೆ ನಾವಿದ್ದೇವೆ ಎಂದು ಅಭಯ ಹಸ್ತ ನೀಡುತ್ತಾರೆ ಆರ್‌ಪಿಎಫ್ ಅಧಿಕಾರಿ ವರ್ಗ.

ಕುಂಭಮೇಳಕ್ಕೆ ದೇಶದ ವಿವಿಧೆಡೆಯಿಂದ ಬರುವ ಭಕ್ತರ ಅನುಕೂಲಕ್ಕಾಗಿ ರೈಲ್ವೆ ಇಲಾಖೆ ನಾಲ್ಕು ಪ್ರತ್ಯೇಕ ವಿಶ್ರಾಂತಿ ತಾಣ ಮಾಡಿದೆ. ಕುಡಿಯುವ ನೀರು, ಟಿಕೆಟ್ ನೀಡುವ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಸುರಕ್ಷತೆ ಹಾಗೂ ಭದ್ರತೆಗಾಗಿ ನಿಲ್ದಾಣಗಳಲ್ಲಿ ಸಿಸಿ ಕ್ಯಾಮೆರಾ ಸೇರಿದಂತೆ ವಿವಿಧ ಕ್ರಮ ಅಳವಡಿಸಲಾಗಿದೆ ಎಂದು ಉತ್ತರ ಮಧ್ಯ ರೈಲ್ವೆ ವಲಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಶಶಿಕಾಂತ ತ್ರಿಪಾಠಿ ತಿಳಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!