ಕೇದಾರನಾಥದಲ್ಲಿ ಹೆಲಿಕಾಪ್ಟರ್ ಪತನ: ಆರು ಪ್ರವಾಸಿಗರು ಸಾವು

By Anusha KbFirst Published Oct 18, 2022, 12:34 PM IST
Highlights

ಉತ್ತರಾಖಂಡ್‌ನ ಪುಣ್ಯಕ್ಷೇತ್ರ ಕೇದರನಾಥ್‌ದಲ್ಲಿ ಹೆಲಿಕಾಪ್ಟರೊಂದು ಅಪಘಾತಕ್ಕೀಡಾಗಿದ್ದು, ಹೆಲಿಕಾಪ್ಟರ್‌ನಲ್ಲಿದ್ದ ಆರು ಜನ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಕೇದರನಾಥ್‌ದಲ್ಲಿ ದಟ್ಟ ಮಂಜು ತುಂಬಿದ್ದರಿಂದ ಈ ಹೆಲಿಕಾಪ್ಟರ್ ದುರಂತ ಸಂಭವಿಸಿದೆ ಎಂದು ಹೇಳಲಾಗ್ತಿದೆ. 

ಉತ್ತರಾಖಂಡ್‌: ಉತ್ತರಾಖಂಡ್‌ನ ಪುಣ್ಯಕ್ಷೇತ್ರ ಕೇದಾರನಾಥ್‌ದಲ್ಲಿ ಹೆಲಿಕಾಪ್ಟರೊಂದು ಅಪಘಾತಕ್ಕೀಡಾಗಿದ್ದು, ಹೆಲಿಕಾಪ್ಟರ್‌ನಲ್ಲಿದ್ದ ಆರು ಜನ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಕೇದಾರನಾಥ್‌ದಲ್ಲಿ ದಟ್ಟ ಮಂಜು ತುಂಬಿದ್ದರಿಂದ ಈ ಹೆಲಿಕಾಪ್ಟರ್ ದುರಂತ ಸಂಭವಿಸಿದೆ ಎಂದು ಹೇಳಲಾಗ್ತಿದೆ. 

ಕೇದಾರನಾಥ ಸಮೀಪದ ಗೌರಿಕುಂಡದ ಬಳಿ ಈ ಅನಾಹುತ ಸಂಭವಿಸಿದೆ ಎಂದು ತಿಳಿದು ಬಂದಿದ್ದು, ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ತಂಡವನ್ನು ರಕ್ಷಣೆಗಾಗಿ ಕಳುಹಿಸಲಾಗಿದೆ. ಘಟನಾ ಸ್ಥಳದಲ್ಲಿ ಆರು ಜನರ ಶವ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಹೆಲಿಕಾಪ್ಟರ್‌ನಲ್ಲಿ ಎಷ್ಟು ಜನರಿದ್ದರು. ಅವರು ಎಲ್ಲಿಯವರು ಎಂಬ ಬಗ್ಗೆ ಇನ್ನಷ್ಟೇ ಮಾಹಿತಿ ಬರಬೇಕಿದೆ. 

ಚೀನಾ ಮೇಲೆ ಹದ್ದಿನ ಕಣ್ಣು, ಮಿಸಾಮರಿ ವಾಯುನೆಲೆಗೆ ಪ್ರಚಂಡ ಲಘು ಯುದ್ಧ ಹೆಲಿಕಾಪ್ಟರ್ ನಿಯೋಜನೆ!

हेलीकॉप्टर दुर्घटना केदारनाथ से लगभग 3 किलोमीटर दूरी पर नंदी के पास हुई है। pic.twitter.com/bCDlTpeGEN

— Neha Bohra (@neha_suyal)

 

click me!