ಕಳ್ಳತನವೇ ಆಗದ ಮೊಬೈಲ್‌ ಟವರ್‌ ಪತ್ತೆ ಮಾಡಿದ ಪೊಲೀಸ್‌, ದೂರು ಕೊಟ್ಟವನಿಗೆ ಹುಡುಕಾಟ!

Published : Dec 02, 2023, 03:02 PM IST
ಕಳ್ಳತನವೇ ಆಗದ ಮೊಬೈಲ್‌ ಟವರ್‌ ಪತ್ತೆ ಮಾಡಿದ ಪೊಲೀಸ್‌, ದೂರು ಕೊಟ್ಟವನಿಗೆ ಹುಡುಕಾಟ!

ಸಾರಾಂಶ

ಕಳ್ಳತನವೇ ಆಗದ ವಸ್ತುವಿನ ಮೇಲೆ ಕಳ್ಳತನವಾಗಿದೆ ಎನ್ನುವ ಎಫ್‌ಐಆರ್‌ ದಾಖಲು ಮಾಡಿದ್ದ ಉತ್ತರ ಪ್ರದೇಶ ಪೊಲೀಸ್‌ಗೆ ಈಗ ಸಂಕಷ್ಟ ಎದುರಾಗಿದೆ. 

ನವದೆಹಲಿ (ಡಿ.2): ಐವತ್ತು ಮೀಟರ್‌ ಎತ್ತರದ ಮೊಬೈಲ್‌ ಟವರ್‌ಅನ್ನು ಯಾರೋ ಕಳ್ಳತನ ಮಾಡಿದ್ದಾರೆ ಎನ್ನುವ ಬಗ್ಗೆ ಉತ್ತರ ಪ್ರದೇಶದ ಪೊಲೀಸರು ಖಾಸಗಿ ಸಂಸ್ಥೆಯೊಂದರ ಟೆಕ್ನಿಶಿಯನ್‌ ನಿಂದ ಆನ್‌ಲೈನ್‌ ಎಫ್‌ಐಆರ್‌ ಸ್ವೀಕರಿಸಿದ್ದರು. ನಂಬಲು ಅಸಾಧ್ಯವಾದ ಈ ಕಳ್ಳತನ ನಡೆದಿರುವ ಬಗ್ಗೆ ಪೊಲೀಸರೇ ಅಚ್ಚರಿ ಪಟ್ಟಿದ್ದರು. ಆದರೆ, ಈ ಎಫ್‌ಐಆರ್‌ ಸ್ವೀಕರಿಸಿದ ಪೊಲೀಸರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಯಾವ ವಸ್ತುವನ್ನು ಕದ್ದಿದ್ದಾರೆ ಎಂದು ದೂರು ದಾಖಲಾಗಿ ಆನ್‌ಲೈನ್‌ ಎಫ್‌ಐಆರ್‌ ದಾಖಲು ಮಾಡಲಾಗಿತ್ತೋ, ಅದೇ ಮೊಬೈಲ್‌ ಟವರ್‌ ಎಂದಿಗೂ ಕಾಣೆಯೇ ಆಗಿರಲಿಲ್ಲ.  ಕೌಶಂಬಿ ಪೊಲೀಸ್ ಅಧೀಕ್ಷಕ ಬ್ರಿಜೇಶ್ ಕುಮಾರ್ ಶ್ರೀವಾಸ್ತವ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, "ಸಂಬಂಧಿತ ಕಂಪನಿ ಅಧಿಕಾರಿಗಳು ಮತ್ತು ಭೂಮಾಲೀಕರ ನಡುವಿನ ಒಪ್ಪಂದದ ಅವಧಿ ಮುಗಿದ ನಂತರ ಈ ವರ್ಷದ ಜನವರಿಯ ಆರಂಭದಲ್ಲಿ ಸರಿಯಾದ ದಾಖಲೆಗಳ ಮೂಲಕ ತಮ್ಮ ಸಂಪೂರ್ಣ ಸೆಟ್‌ಅಪ್ ಅನ್ನು ತೆಗೆದುಹಾಕಿದ್ದಾರೆ' ಎಂದು ಮಾಹಿತಿ ನೀಡಿದ್ದಾರೆ. ಈ ಕುರಿತಾದ ಎಲ್ಲಾ ದಾಖಲೆಗಳು ಮತ್ತು ಸಾಕ್ಷ್ಯಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ.

ಹಾಗಿದ್ದರೂ ಘಟನೆಯ ಎಂಟು ತಿಂಗಳ ನಂತರ ಸಂಸ್ಥೆಯ ತಂತ್ರಜ್ಞ ರಾಜೇಶ್ ಕುಮಾರ್ ಯಾದವ್ ಈ ಸಂಬಂಧ ಆನ್‌ಲೈನ್ ಎಫ್‌ಐಆರ್ ಅನ್ನು ಏಕೆ ದಾಖಲಿಸಿದ್ದಾರೆ ಎಂಬುದು ನಿಗೂಢವಾಗಿಯೇ ಉಳಿದಿದೆ. ತನ್ನ ಆನ್‌ಲೈನ್ ದೂರಿನಲ್ಲಿ, ಯಾದವ್ ಅವರು 2023ರ ಮಾರ್ಚ್ 31 ರಂದು ಪರಿಶೀಲನೆಗಾಗಿ ಸ್ಥಳಕ್ಕೆ ಭೇಟಿ ನೀಡಿದಾಗ, ಸಂಪೂರ್ಣ ಟವರ್ ಮತ್ತು ಇತರ ಉಪಕರಣಗಳು ಯಾವುದೇ ಕುರುಹು ಇಲ್ಲದೆ ನನಾಪತ್ತೆಯಾಗಿದ್ದವು. ಆದಾಗ್ಯೂ, ನವೆಂಬರ್ 29 ರಂದು ಎಫ್ಐಆರ್ ದಾಖಲಿಸುವ ಮೊದಲು ಅವರು ಎಂದು ತಿಂಗಳು ಇದಕ್ಕಾಗಿ ಯಾಕೆ ಕಾದಿದ್ದರು ಎನ್ನುವುದು ನಿಗೂಢವಾಗಿದೆ.

ಪ್ರವಾದಿಗೆ ಅವಮಾನ ಮಾಡಿದ ಎಂದು ಆರೋಪಿಸಿ ಮುಸ್ಲಿಂ ವಿದ್ಯಾರ್ಥಿಯಿಂದ ಕಂಡಕ್ಟರ್ ಹತ್ಯೆ

ಪ್ರತಾಪ್‌ಗಢದಲ್ಲಿರುವ ಯಾದವ್ ಅವರ ನಿವಾಸದಲ್ಲಿ ಪೊಲೀಸರು ಶೋಧ ನಡೆಸಿದ್ದು, ಅವರು ನಾಪತ್ತೆಯಾಗಿದ್ದಾರೆ.

ಖ್ಯಾತ ಭೋಜ್‌ಪುರಿ ಮಹಿಳಾ ಯೂಟ್ಯೂಬರ್ ಸಾವು: ಪತಿಯ ಅನೈತಿಕ ಸಂಬಂಧಕ್ಕೆ ಬಲಿ?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..