ಉತ್ತರ ಪ್ರದೇಶ ಸಂಪುಟ ವಿಸ್ತರಣೆ: ಜಿತನ್ ಪ್ರಸಾದ್ ಸೇರಿ 7 ಸಚಿವರು ಪ್ರಮಾಣ ವಚನ ಸ್ವೀಕಾರ!

Published : Sep 26, 2021, 08:31 PM IST
ಉತ್ತರ ಪ್ರದೇಶ ಸಂಪುಟ ವಿಸ್ತರಣೆ: ಜಿತನ್ ಪ್ರಸಾದ್ ಸೇರಿ 7 ಸಚಿವರು ಪ್ರಮಾಣ ವಚನ ಸ್ವೀಕಾರ!

ಸಾರಾಂಶ

ಉತ್ತರ ಪ್ರದೇಶ ಸಂಪುಟ ವಿಸ್ತರಿಸಿದ ಯೋಗಿ ಆದಿತ್ಯನಾಥ್ ಯೋಗಿ ಸಂಪುಟ ಸೇರಿದ 7 ಸಚಿವರು, ಪ್ರಮಾಣವಚನ ಸ್ವೀಕಾರ ಕಾಂಗ್ರೆಸ್‌ನಿಂದ ಬಿಜೆಪಿ ಸೇರಿದ ಜಿತನ್ ಪ್ರಸಾದ್‌ಗೆ ಮಂತ್ರಿಗಿರಿ  

ಉತ್ತರ ಪ್ರದೇಶ(ಸೆ.26): ಕಳೆದ ಹಲವು ದಿನಗಳಿಂದ ಕೇಳಿಬರುತ್ತಿದೆ ಉತ್ತರ ಪ್ರದೇಶ ಸಂಪುಟ ವಿಸ್ತರಣೆ ಕೊನೆಗೂ ನೆರವೇರಿದೆ. ಕಾಂಗ್ರೆಸ್‌ನಿಂದ ಬಿಜೆಪಿ ಸೇರೋ ಮೂಲಕ ಭಾರಿ ಸದ್ದು ಮಾಡಿದ್ದ ಜಿತಿನ್ ಪ್ರಸಾದ್ ಸೇರಿದಂತೆ 7 ಸಚಿವರು ಇಂದು ಯೋಗಿ ಸಂಪುಟ ಸೇರಿದ್ದಾರೆ. ರಾಜಭವನದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರಾ ಕಾರ್ಯಕ್ರಮದಲ್ಲಿ 7 ಸಚಿವರು ಯೋಗಿ ಸರ್ಕಾರ ಸೇರಿಕೊಂಡಿದ್ದಾರೆ.

2017ಕ್ಕೂ ಮುನ್ನ ಉ.ಪ್ರ. ಆಳುತ್ತಿದ್ದ ಪಾತಕಿಗಳು ಈಗ ಜೈಲು ಸೇರಿದ್ದಾರೆ: ಮೋದಿ!

ಲಕ್ನೋದ ರಾಜಭನದಲ್ಲಿ ನಡೆದ ಕಾರ್ಯಕ್ರಮದಲ್ಲಿ 7 ಸಚಿವರಿಗೆ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಪ್ರತಿಜ್ಞಾವಿಧಿ ಬೋದಿಸಿದ್ದಾರೆ. 

 

ಯೋಗಿ ಸಂಪುಟ ಸೇರಿದ 7 ಸಚಿವರ ವಿವರ:
ಜಿತನ್ ಪ್ರಸಾದ್:
ಕಾಂಗ್ರೆಸ್ ಪ್ರಮುಖ ನಾಯಕನಾಗಿ ಗುರುತಿಸಿಕೊಂಡಿದ್ದ ಜಿತಿನ್ ಪ್ರಸಾದ್, ರಾಹುಲ್ ಗಾಂಧಿ ಆಪ್ತರಾಗಿದ್ದರು. ಆದರೆ ಕಾಂಗ್ರೆಸ್ ತೊರೆದು ಜೂನ್ ತಿಂಗಳಲ್ಲಿ ಬಿಜೆಪಿ ಸೇರಿಕೊಂಡಿದ್ದರು. ಇದೀಗ ಜಿತನ್ ಪ್ರಸಾದ್ ಯೋಗಿ ಸಂಪುಟ ಸೇರಿಕೊಂಡಿದ್ದಾರೆ.

ಕಾಯಕವೇ ಕೈಲಾಸ: ಮೋದಿ 7 ವರ್ಷವಾದರೆ ಯೋಗಿ 4 ವರ್ಷ, ಒಂದೂ ರಜೆ ಪಡೆದಿಲ್ಲ!

ಪಾಲ್ತು ರಾಮ್:
ಪಾಲ್ತು ರಾಮ್ ಬಲರಾಮ್‌ಪುರ ಸದಾರ್ ಕ್ಷೇತ್ರದ ಬಿಜೆಪಿ ಶಾಸಕ. ದಲಿತ ಸಮದಾದಯ ನಾಯಕ ವೃತ್ತಿಯಲ್ಲಿ ಕೃಷಿಕ ಅನ್ನೋದು ಮತ್ತೊಂದು ವಿಶೇಷ.

 

ಸಂಜೀವ್ ಕುಮಾರ್:
2017ರ ಉತ್ತರ ಪ್ರದೇಶ ಚುನಾವಣೆಯಲ್ಲಿ ಸೋನಬದ್ರಾದ ಒಬ್ರಾ ಕ್ಷೇತ್ರದಿಂದ ಆರಿಸಿ ಬಂದ ಸಂಜೀವ್ ಕುಮಾರ್ ಮೊದಲ ಬಾರಿ ಶಾಸಕರಾಗಿದ್ದರು. ಇದೀಗ ಇದೇ ಮೊದಲ ಬಾರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಉತ್ತರ ಪ್ರದೇಶ ಚುನಾವಣೆ, ಬಿಜೆಪಿಗೆ ಮತ್ತೊಂದು ಅಗ್ನಿಪರೀಕ್ಷೆ!

ಸಂಗೀತಾ ಬಲ್ವಂತ್:
ಗಾಝಿಪುರ್ ಸದಾರ್ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕಿಯಾಗಿ ಆಯ್ಕೆಯಾದ ಸಂಗೀತಾ ಬಲ್ವಂತ್ , ಜಮ್ಮು ಮತ್ತು ಕಾಶ್ಮೀರದ ಲೆಫ್ಟೆನೆಂಟ್ ಗರ್ವನರ್ ಮನೋಜ್ ಸಿನ್ಹ ಆಪ್ತರಾಗಿದ್ದಾರೆ.

ದಿನೇಶ್ ಕಾತಿಕ್:
ಮೀರತ್‌ನ ಹಸ್ತಿನಾಪುರದಿಂದ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದ ದಿನೇಶ್ ಕಾತಿಕ್ ದಲಿತ ಸಮುದಾಯದ ಪ್ರಬಲ ನಾಯಕ, ಶಾಲಾ ದಿನದಿಂದಲೇ ಆರ್‌ಎಸ್‌ಎಸ್ ಸಂಘಟನೆಯಲ್ಲಿ ತೊಡಗಿಸಿಕೊಂಡ ದಿನೇಶ್ ಕಾತಿಕ್ ಇದೇ ಮೊದಲ ಬಾರಿಗೆ ಸಚಿವರಾಗಿದ್ದಾರೆ.

ಧರ್ಮವೀರ ಪ್ರಜಾಪತ್:
ಕಳೆದ 20 ವರ್ಷದಿಂದ ಬಿಜೆಪಿ ಪಕ್ಷದಲ್ಲಿ ದುಡಿಯುತ್ತಿರುವ ದರ್ಮವೀರ ಪ್ರಜಾಪತ್, ಆಗ್ರ ಕ್ಷೇತ್ರದಿಂದ ಆರಿಸಿ ಬಂದಿದ್ದಾರೆ. ಹಿಂದುಳಿದ ಸಮುದಾಯದ ನಾಯಕನಾಗಿದ್ದಾರೆ.

ಚತ್ರಪಾಲ್ ಸಿಂಗ್ ಗಂಗಾವರ್:
64 ವರ್ಷದ ಚತ್ರಪಾಲ್ ಸಿಂಗ್ ಬಹೇರಿ ಕ್ಷೇತ್ರದ ಶಾಸಕರಾಗಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದೇಗುಲ ಪ್ರವೇಶಿಸುವುದಿಲ್ಲ ಎಂದ ಕ್ರಿಶ್ಚಿಯನ್ ಮಿಲಿಟರಿ ಅಧಿಕಾರಿಯ ಅಮಾನತು ಎತ್ತಿ ಹಿಡಿದ ಸುಪ್ರೀಂಕೋರ್ಟ್‌ ಹೇಳಿದ್ದೇನು?
ಇಂಡಿಗೋದ ಭಾರೀ ಕುಸಿತ: ಒಂದೇ ವಿಮಾನಯಾನ ಸಂಸ್ಥೆಯ ಏಕಸ್ವಾಮ್ಯವಾದಾಗ